Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

ಮದುವೆ ಎಂದರೆ ಏಳೇಳು ಜನ್ಮಗಳ ಬಂಧ ಎಂದು ಹೇಳಲಾಗುತ್ತದೆ. ಆದರೆ ಮದುವೆಯಾದ 7 ಗಂಟೆಗಳ ಒಳಗೆ ವಧುವೊಬ್ಬಳು ಮದುವೆಯನ್ನೇ ಮುರಿದುಕೊಂಡಿದ್ದಾಳೆ. ಅದು ಗಂಡನ ಮನೆಗೆ ಹೋಗುವಾಗ ಅರ್ಧ ದಾರಿಯಲ್ಲಿ ಕಾರಿನಲ್ಲಿ ಇಳಿದು ಗಲಾಟೆ ಮಾಡಿ ಪೊಲೀಸ್​ ಠಾಣೆಗೆ ತೆರಳಿ ರಾದ್ಧಾಂತ ಸೃಷ್ಟಿಸಿದ್ದಾಳೆ. ನಂತರ ಪೊಲೀಸರ ರಕ್ಷಣೆಯಲ್ಲಿ ತನ್ನ ತಾಯಿ ಮನೆಗೆ ಮರಳಿದ್ದಾಳೆ.

First published:

  • 19

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ಮದುವೆ ಎಂದರೆ ಏಳೇಳು ಜನ್ಮಗಳ ಬಂಧ ಎಂದು ಹೇಳಲಾಗುತ್ತದೆ. ಬಹುತೇಕರು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳುತ್ತಾರೆ. ತಮ್ಮ ಸಂಗಾತಿಯೊಂದಿಗಿನ  ಈ ಸಂಭ್ರಮದ ಕ್ಷಣವನ್ನು ಎಂದಿಗೂ ಮರೆಯಬಾರದು ಎಂದು ಹಲವು ಯೋಜನೆಗಳನ್ನು ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಲಕ್ಷಾಂತರ ವೆಚ್ಛವನ್ನೂ ಮಾಡುತ್ತಾರೆ.  ಆದರೆ ಇತ್ತೀಚೆಗೆ ಹಲವು ವಿವಾಹಗಳು ಕ್ಷುಲ್ಲಕ ಕಾರಣಕ್ಕೆ ರದ್ದಾಗುತ್ತಿವೆ.  ಕೆಲವು ವಿವಾಹಗಳು ವರನಿಗೆ ಬೋಳು ತಲೆ ಇದೆ, ಮದುಮಗನಿಗೆ ಇಂಗ್ಲಿಷ್ ಬರುವುದಿಲ್ಲ, ಕುಡಿಯುತ್ತಾನೆ, ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ರದ್ದಾಗಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ.

    MORE
    GALLERIES

  • 29

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯುಪಿಯ ಕಾನ್ಪುರ ನಗರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯ ನಂತರ ದಂಪತಿ ವಾರಣಾಸಿಯಿಂದ 700 ಕಿಮೀ ದೂರದ ವರನ ಊರಾದ ರಾಜಸ್ಥಾನದ ಸರ್ಸೋಲ್​ಗೆ ಕಾರಿನಲ್ಲಿ ತೆರಳುತ್ತಿದ್ದರು. ಕಾರಿನಲ್ಲಿ 7 ಗಂಟೆ ಪ್ರಯಾಣಿಸಿದ ನಂತರ ವರ ಒಂದು ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದು, ಎಲ್ಲರೂ ಅಲ್ಲಿಯೇ ಉಪಹಾರ ಸೇವಿಸಲು ನಿರ್ಧರಿಸಿದ್ದಾರೆ.

    MORE
    GALLERIES

  • 39

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ಈ ವೇಳೆ ಕಾರಿನಿಂದ ಇಳಿದ ವಧು, ಸುಸ್ತಾಗಿದೆ ಎಂದು ಅಲ್ಲೆ ತಿರುಗಾಡುತ್ತೇನೆ ಎಂದು ನಡೆದಾಡಲು ಶುರು ಮಾಡಿದ್ದಾಳೆ. ಆದರೆ ಹೆದ್ದಾರಿಯಲ್ಲಿ ನಿಂತಿದ್ದ ಮತ್ತೊಂದು ವಾಹನ ಹತ್ತಲು ಯತ್ನಿಸಿದ್ದಾಳೆ. ಆಗ ವರನ ಕಡೆಯವರು ಆಕೆಯನ್ನು ಏನಾಯಿತು ಎಂದು ವಿಚಾರಿಸಿ ಕಾರಿನಲ್ಲಿ ಕೂರಿಸಲು ಯತ್ನಿಸಿದ್ದಾರೆ. ವಧು ಗಲಾಟೆ ಮಾಡಿ, ಅಲ್ಲೇ ಇದ್ದ ಪೊಲೀಸರನ್ನು ಕರೆದಿದ್ದಾಳೆ.

    MORE
    GALLERIES

  • 49

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ಈ ವೇಳೆ ತನ್ನನ್ನು ಬಲವಂತವಾಗಿ  ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ನಂತರ ಪೊಲೀಸರು ಎಲ್ಲರನ್ನು ವಿಚಾರಣೆ ನಡೆಸಿದ್ದಾರೆ. ಮದುವೆ ದಾಖಲಾತಿ ಕೇಳಿದ್ದಕ್ಕೆ ವರ ರವಿ ನ್ಯಾಯಾಲಯದ ದಾಖಲೆಗಳನ್ನು ತೋರಿಸಿ ವೈಷ್ಣವಿಯನ್ನು ಮದುವೆಯಾಗಿದ್ದು, ತನ್ನ ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

    MORE
    GALLERIES

  • 59

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಗಂಡನ ಮನೆಯವರು ವಿವಾಹದ ಸಂದರ್ಭದಲ್ಲಿ ಅಲಹಾಬಾದ್​ನಲ್ಲಿ ಇರುತ್ತೇವೆ ಎಂದಿದ್ದರು, ಇದೀಗ ರಾಜಸ್ತಾನದ ಬಿಕಾನೇರ್​ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಮನೆಯಿಂದ ತುಂಬಾ ದೂರ ಹೋಗಲು ಬಯಸುವುದಿಲ್ಲ. ನಾನು ನನ್ನ ತಂದೆ ತಾಯಿಯ ಹತ್ತಿರ ಇರಲು ಬಯಸುತ್ತೇನೆ, ಈ ಮದುವೆಯನ್ನು ಮುರಿದುಕೊಳ್ಳುತ್ತೇನೆ ಎಂದು ವೈಷ್ಣವಿ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

    MORE
    GALLERIES

  • 69

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಗಂಡನ ಮನೆಯವರು ವಿವಾಹದ ಸಂದರ್ಭದಲ್ಲಿ ಅಲಹಾಬಾದ್​ನಲ್ಲಿ ಇರುತ್ತೇವೆ ಎಂದಿದ್ದರು, ಇದೀಗ ರಾಜಸ್ತಾನದ ಬಿಕಾನೇರ್​ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಮನೆಯಿಂದ ತುಂಬಾ ದೂರ ಹೋಗಲು ಬಯಸುವುದಿಲ್ಲ. ನಾನು ನನ್ನ ತಂದೆ ತಾಯಿಯ ಹತ್ತಿರ ಇರಲು ಬಯಸುತ್ತೇನೆ, ಈ ಮದುವೆಯನ್ನು ಮುರಿದುಕೊಳ್ಳುತ್ತೇನೆ ಎಂದು ವೈಷ್ಣವಿ ಹೇಳಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

    MORE
    GALLERIES

  • 79

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ವಧುವಿನ ಸಂಪೂರ್ಣ ಕಥೆಯನ್ನು ಕೇಳಿದ ಪೊಲೀಸರು ಎಲ್ಲರನ್ನು ಮಹಾರಾಜಪುರ ಠಾಣಾಗೆ ಕರೆದುಕೊಂಡು ಹೋಗಿದ್ದಾರೆ. ನಂತರ ವಿವಾಹದ ಸಂದರ್ಭದಲ್ಲಿ ವರ ಬಿಕಾನೇರ್ ನಿವಾಸಿ ಎಂದು ಯುವತಿ ಮನೆಯವರಿಗೆ ತಿಳಿದಿತ್ತು ಎಂಬುದು ತಿಳಿದುಬಂದಿದೆ. ಇದಾದ ನಂತರ ಪೊಲೀಸರು ವಧುವಿನ ತಾಯಿಯೊಂದಿಗೆ ಚರ್ಚಿಸಿದ್ದಾರೆ.

    MORE
    GALLERIES

  • 89

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ವಧುವಿನ ತಾಯಿ, " ನನಗೆ ಗಂಡನಿಲ್ಲ. ನಮ್ಮ ಸಂಬಂಧಿಕರೊಬ್ಬರು ಈ ಮದುವೆ ನಿಶ್ಚಯ ಮಾಡಿದ್ದರು. ಆ ಹುಡುಗ ಅಲಹಾಬಾದ್​ನವನು ಎಂಬುದು ಮಾತ್ರ ನಮಗೆ ಗೊತ್ತಿತ್ತು. ನನ್ನ ಮಗಳು ಬಿಕಾನೇರ್‌ಗೆ ಹೋಗಲು ಬಯಸದಿದ್ದರೆ, ಅವಳನ್ನು ನನ್ನ ಮನೆಗೆ ಕಳುಹಿಸಿ. ನಾವು ಮದುವೆಯನ್ನು ಮುರಿದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.

    MORE
    GALLERIES

  • 99

    Marriage: ತಾಳಿ ಕಟ್ಟಿಸಿಕೊಂಡ 7 ಗಂಟೆಯೊಳಗೆ ಮದುವೆ ಮುರಿದುಕೊಂಡ ವಧು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

    ಪೊಲೀಸರು ಎರಡೂ ಕಡೆ ಮುಖಾಮುಖಿ ಮಾಡಿ ರಾಜಿ ಮಾಡಿಸಲು ಯತ್ನಿಸಿದರು. ಆದರೆ ವಧುವಿನ ಸಂಬಂಧಿಕರು ಬಿಕಾನೇರ್​ಗೆ ಹೋಗಲು ಸಿದ್ಧರಿರಲಿಲ್ಲ. ಹೀಗಾಗಿ ಪೊಲೀಸರು ಆಕೆಯನ್ನು ಮಹಿಳಾ ಪೊಲೀಸ್ ರಕ್ಷಣೆಯಲ್ಲಿ ತಾಯಿ ಮನೆಗೆ ಕಳುಹಿಸಿದ್ದಾರೆ. ಹೀಗಾಗಿ ವರ ಬರಿಗೈಯಲ್ಲಿ ಬಿಕಾನೇರ್‌ಗೆ ಮರಳಿದ್ದಾನೆ.

    MORE
    GALLERIES