The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

ಬಿಡುಗಡೆಗೂ ಮುನ್ನವೇ ವಿವಾದಕ್ಕೀಡಾಗಿದ್ದ ಕೇರಳ ಸ್ಟೋರಿ ಸಿನಿಮಾಗೆ ದೇಶಾದ್ಯಂತ ಕೆಲವು ಕಡೆ ಬೆಂಬಲ ಹಾಗೂ ಕೆಲವು ಕಡೆ ವಿರೋಧ ವ್ಯಕ್ತವಾಗುತ್ತಿದೆ.

First published:

  • 17

    The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

    ನವದೆಹಲಿ: ಬಿಡುಗಡೆಗೂ ಮುನ್ನವೇ ವಿವಾದಕ್ಕೀಡಾಗಿದ್ದ ಕೇರಳ ಸ್ಟೋರಿ ಸಿನಿಮಾಗೆ ದೇಶಾದ್ಯಂತ ಕೆಲವು ಕಡೆ ಬೆಂಬಲ ಹಾಗೂ ಕೆಲವು ಕಡೆ ವಿರೋಧ ವ್ಯಕ್ತವಾಗುತ್ತಿದೆ. ಮೂರು ಮಹಿಳೆಯರು ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸೇರ್ಪಡೆಗೊಳ್ಳುವ ಕಥೆಯನ್ನು ಹೊಂದಿದೆ. ವಿವಾದಾತ್ಮಕ ಚಲನಚಿತ್ರಕ್ಕೆ ದೇಶದ ಹಲವು ರಾಜ್ಯ ಸರ್ಕಾರಗಳು ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ನೀಡುತ್ತಿವೆ.

    MORE
    GALLERIES

  • 27

    The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

    ಈ ವಿವಾದಿತ ಕೇರಳ ಸ್ಟೋರಿ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ಸರ್ಕಾರ ಇಂದು ಘೋಷಿಸಿದೆ.

    MORE
    GALLERIES

  • 37

    The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಕೇರಳ ಸ್ಟೋರಿ ಚಿತ್ರವನ್ನು ನಿಷೇಧಿಸಲಾಗುವುದಾಗಿ ಹೇಳಿದ 24 ಗಂಟೆಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮಮತಾ ಈ ಚಿತ್ರ ಅಶಾಂತಿಯನ್ನು ಉಂಟುಮಾಡಬಹುದು ನಿಷೇಧಿಸಿದ್ದರು.

    MORE
    GALLERIES

  • 47

    The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

    ಆದರೆ ಯೋಗಿ ಈ ಚಿತ್ರಕ್ಕೆ ಬೆಂಬಲ ಸೂಚಿಸಿದ್ದು, ಉತ್ತರ ಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ವಿಶೇಷ ಪ್ರದರ್ಶನದಲ್ಲಿ ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಚಲನಚಿತ್ರವನ್ನು ವೀಕ್ಷಿಸುವ ನಿರೀಕ್ಷೆಯಿದೆ.

    MORE
    GALLERIES

  • 57

    The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

    ಬಿಜೆಪಿಯ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಕೂಡ ಈ ಹಿಂದೆ ಚಲನಚಿತ್ರವನ್ನ ತೆರಿಗೆ ಮುಕ್ತಗೊಳಿಸಿತ್ತು . ನಿರ್ಧಾರವನ್ನು ಪ್ರಕಟಿಸಿದ ನಂತರ ಮಾತನಾಡಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್  "ಚಿತ್ರವು ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸುತ್ತದೆ ಮತ್ತು ಅದರ ಭೀಕರ ಮುಖವನ್ನು ಹೊರತರುತ್ತದೆ  " ಎಂದು ಶ್ಲಾಘಿಸಿದ್ದರು.

    MORE
    GALLERIES

  • 67

    The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

    ದೇಶಾದ್ಯಂತ ಬಿಜೆಪಿ ನಾಯಕರು ರಾಜ್ಯ ಸರ್ಕಾರಗಳನ್ನು, ವಿಶೇಷವಾಗಿ ಬಿಜೆಪಿಯೇತರ ರಾಜ್ಯಗಳಲ್ಲಿ, 'ದಿ ಕೇರಳ ಸ್ಟೋರಿ'ಗೆ ತೆರಿಗೆ ಮುಕ್ತ ಸ್ಥಾನಮಾನವನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ. ವಿಪುಲ್ ಅಮೃತ್‌ಲಾಲ್ ಶಾ ನಿರ್ಮಾಣ ಹಾಗೂ ಸುದೀಪ್ತೋ ಸೇನ್ ನಿರ್ದೇಶನದಲ್ಲಿ 'ದಿ ಕೇರಳ ಸ್ಟೋರಿ' ಚಿತ್ರ ಮೂಡಿಬಂದಿದ್ದು, ಕಳೆದ ತಿಂಗಳು ಅದರ ಟ್ರೇಲರ್ ಬಿಡುಗಡೆಯಾದಾಗಲೇ ಭಾರಿ ವಿವಾದ ಹುಟ್ಟುಹಾಕಿತ್ತು.

    MORE
    GALLERIES

  • 77

    The Kerala Story ಬ್ಯಾನ್ ಮಾಡಿದ ದೀದಿ ಸರ್ಕಾರ, ಟ್ಯಾಕ್ಸ್ ಫ್ರೀ ಘೋಷಿಸಿ ತಿರುಗೇಟು ಕೊಟ್ಟ ಯೋಗಿ ಆದಿತ್ಯನಾಥ್!

    ಸಿಪಿಎಂ ನೇತೃತ್ವದ ಕೇರಳ ಸರ್ಕಾರವು ಚಿತ್ರದ ನಿರ್ಮಾಪಕರ ಮೇಲೆ ಹರಿಯಾಯ್ದಿದೆ. ಈ ಸಂಘಪರಿವಾರದ ಪ್ರಚಾರವನ್ನು ಚಿತ್ರದಲ್ಲಿ ತೋರಿಸಲು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದ್ದರು. ನ್ಯಾಯಾಲಯಗಳು, ತನಿಖಾ ಸಂಸ್ಥೆಗಳು ಮತ್ತು ಕೇಂದ್ರದಿಂದ ತಿರಸ್ಕರಿಸಲ್ಪಟ್ಟಿರುವ ಲವ್ ಜಿಹಾದ್ ಎಂಬ ಪರಿಕಲ್ಪನೆಯನ್ನು ಎತ್ತಿ ತೋರಿಸುವ ಮೂಲಕ ಈ ಚಲನಚಿತ್ರವು ರಾಜ್ಯವನ್ನು ಧಾರ್ಮಿಕ ಉಗ್ರವಾದದ ಕೇಂದ್ರವಾಗಿ ಬಿಂಬಿಸಲು ಪ್ರಯತ್ನಿಸುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ .

    MORE
    GALLERIES