Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

ಚಂದ್ರಾಪುರ: ಜೇನು ನೊಣಗಳ ಹಿಂಡು ಏಕಾಏಕಿ ದಾಳಿ ಮಾಡಿ ಇಬ್ಬರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

First published:

  • 17

    Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

    ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ನಾಗ್ಭಿದ್ ತಹಸಿಲ್‌ನ ಸತ್ಬಾಹಿನಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗ್ರಾಮಸ್ಥರೆಲ್ಲ ಜೇನು ನೊಣದ ಹಿಂಡಿನ ದಾಳಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

    MORE
    GALLERIES

  • 27

    Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

    ಗಾಯಗೊಂಡಿರುವ ಜನರ ಪೈಕಿ ಆರು ತಿಂಗಳ ಮಗು ಕೂಡ ಸೇರಿದ್ದು, ನಾಲ್ವರು ಗಾಯಾಳುಗಳು ನಾಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರಹ್ಮಪುರಿ ವಿಭಾಗದ ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

    MORE
    GALLERIES

  • 37

    Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

    ಇನ್ನು ಜೇನು ನೊಣಗಳ ಹಿಂಡು ಏಕಾಏಕಿ ದಾಳಿ ಮಾಡಿದ್ದರಿಂದ ಇಬ್ಬರು ಸಂತ್ರಸ್ತರು ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

    MORE
    GALLERIES

  • 47

    Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

    ಬಳಿಕ ನಾಪತ್ತೆಯಾಗಿರುವವರು ಸಿಕ್ಕಿದ್ದು, ಆ ಪೈಕಿ ಒಬ್ಬರು ಆಗಲೇ ಮೃತಪಟ್ಟಿದ್ದರೆ, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    MORE
    GALLERIES

  • 57

    Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

    ಜಿಲ್ಲಾ ಕೇಂದ್ರದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಸತ್ಬಾಹಿನಿ ದೇವಸ್ಥಾನಕ್ಕೆ ಸಂಜೆ ಭೇಟಿ ನೀಡಿದಾಗ, ಜೇನುನೊಣಗಳ ಹಿಂಡು ಆರು ಮಂದಿಯ ಮೇಲೆ ದಾಳಿ ಮಾಡಿದೆ.

    MORE
    GALLERIES

  • 67

    Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

    ಜೇನುನೊಣಗಳ ದಾಳಿಯ ಹಿನ್ನೆಲೆಯಲ್ಲಿ ಕತ್ತಲಾದ ನಂತರ ಅರಣ್ಯ ಪ್ರದೇಶದಲ್ಲಿರುವ ದೇವಾಲಯಕ್ಕೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ.

    MORE
    GALLERIES

  • 77

    Honey bee: ದೇವಾಲಯಕ್ಕೆ ಬಂದವರ ಮೇಲೆ ಜೇನುನೊಣ ದಾಳಿ; ಇಬ್ಬರು ಸಾವು, ನಾಲ್ವರು ಗಂಭೀರ

    ಜೇನು ನೊಣದ ಹಿಂಡಿನ ದಾಳಿ ನಡೆದ ನಂತರ ಆ ಭಾಗಕ್ಕೆ ಸಾರ್ವಜನಿಕರು ಹೋಗಲು ಹಿಂದೇಟು ಹಾಕುತ್ತಿದ್ದು, ನಮಗೂ ದಾಳಿ ಮಾಡಬಹುದು ಎಂದು ಜನರು ಆತಂಕಗೊಂಡಿದ್ದಾರೆ.

    MORE
    GALLERIES