ರಾಜ್ಯದ ರೇಷ್ಮೆ ಉದ್ಯಮ ಖಾತೆ ರಾಜ್ಯ ಸಚಿವರಾಗಿದ್ದ ಪ್ರಭುದಯಾಳ್ ವಾಲ್ಮೀಕಿ ಅವರು 10ನೇ ತರಗತಿಯನ್ನು ಪಾಸ್ ಮಾಡಿದ್ದರು. ಈ ವರ್ಷ, ಅವರು ಬಾಗ್ಪತ್ನ ಜೋಹ್ರಿಯ ಆದರ್ಶ ಇಂಟರ್ ಕಾಲೇಜಿನಿಂದ ಇಂಟರ್ ಪರೀಕ್ಷೆಗೆ ಹಾಜರಾಗಿದ್ದರು. ಮಂಗಳವಾರ ಬಂದ ಫಲಿತಾಂಶದಲ್ಲಿ ಸೆಕೆಂಡ್ ಕ್ಲಾಸ್ನಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಭುದಯಾಳ್ ಅವರು ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಪ್ರೇರಣೆಯಿಂದ ಮತ್ತೆ ಅಧ್ಯಯನ ಆರಂಭಿಸಿರುವುದಾಗಿ ತಿಳಿಸಿದ್ದು, ವ್ಯಾಸಂಗಕ್ಕೆ ವಯಸ್ಸಿಲ್ಲ ಎಂದಿದ್ದಾರೆ.
ಅವರು 500ಕ್ಕೆ 263 ಅಂಕ ಗಳಿಸಿದ್ದ ರಾಜೇಶ್ ಮೂರು ವಿಷಯಗಳಲ್ಲಿ ಪಡೆದಿರುವ ಅಂಕಗಳಿಂದ ತೃಪ್ತಿಯಾಗಿಲ್ಲ ಎಂದಿದ್ದಾರೆ. ಡ್ರಾಯಿಂಗ್ ಡಿಸೈನ್, ಸಿವಿಕ್ಸ್ ಮತ್ತು ಶಿಕ್ಷಣ ವಿಷಯಗಳಲ್ಲಿ ಪಡೆದ ಅಂಕಗಳಿಂದ ನನಗೆ ತೃಪ್ತಿಯಿಲ್ಲ, ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವೆ ಎಂದಿದ್ದಾರೆ. ರಾಜೇಶ್ ಹಿಂದಿಯಲ್ಲಿ 57, ಸಿವಿಕ್ಸ್ನಲ್ಲಿ 47, ಶಿಕ್ಷಣದಲ್ಲಿ 42, ಡ್ರಾಯಿಂಗ್ ಡಿಸೈನ್ನಲ್ಲಿ 36 ಮತ್ತು ಸಮಾಜಶಾಸ್ತ್ರದಲ್ಲಿ 81 ಅಂಕ ಗಳಿಸಿದ್ದಾರೆ.