Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

Tirumala: ತಿರುಮಲದಲ್ಲಿ ಒಮ್ಮೆಯಾದರೂ ತಮ್ಮ ಹೆಸರಿನಲ್ಲಿ ಅನ್ನದಾಸೋಹ ನೀಡಬೇಕು ಎಂದು ಭಕ್ತರು ಭಾವಿಸುತ್ತಾರೆ. ಭಕ್ತರು ಒಂದು ದಿನ ಅನ್ನದಾಸೋಹ ಮಾಡಲು ಎಷ್ಟು ಖರ್ಚಾಗುತ್ತದೆ ಗೊತ್ತಾ?

  • Local18
  • |
  •   | Tirumala, India
First published:

  • 17

    Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

    ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿ ದಿನ ಸಾವಿರಾರರು ಮಂದಿ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆದ ಬಳಿಕ ಕಾಣಿಕೆ ರೂಪದಲ್ಲಿ ಕೋಟಿ ಕೋಟಿ ಹಣವನ್ನು ಹುಂಡಿಗೆ ಹಾಕುತ್ತಾರೆ. ಮತ್ತೆ ಕೆಲವು ಭಕ್ತರು ಲಕ್ಷ, ಕೋಟಿ ಮೊತ್ತದಲ್ಲಿ ಟಿಟಿಡಿಗೆ ದೇಣಿಗೆಯನ್ನು ನೀಡುತ್ತಾರೆ. ಕೇವಲ ಹುಂಡಿಯಲ್ಲೇ ಪ್ರತಿ ದಿನ 3-4 ಕೋಟಿ ರೂಪಾಯಿ ಆದಾಯವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

    ತಿರುಮಲಕ್ಕೆ ತೆರಳುವ ಭಕ್ತರು ತಮ್ಮ ಕೈಯಲ್ಲಿ ಆದಷ್ಟು ಕಾಣಿಕೆಯನ್ನು ದೇವರ ಹುಂಡಿಗೆ ಹಾಕಿಯೇ ವಾಪಸ್​ ಆಗುತ್ತಾರೆ. ಇನ್ನು ಕೆಲವು ಭಕ್ತರು ಅನ್ನದಾಸೋಹ ಮಾಡಬೇಕು ಎಂದು ಹರಕೆ ಮಾಡಿಕೊಂಡಿರುತ್ತಾರೆ. ಅಂತಹ ಭಕ್ತರು ತಿರುಮಲದಲ್ಲಿ ತಮ್ಮ ಹೆಸರಿನಲ್ಲಿ ಒಂದು ದಿನ ಅನ್ನದಾಸೋಹ ನಡೆಸಲು ಎಷ್ಟು ಖರ್ಚವಾಗುತ್ತದೆ ಗೊತ್ತಾ? (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

    ತಿರುಮಲದಲ್ಲಿ ತರಿಗೊಂಡ ವೆಂಗಮಾಂಬ ನಿತ್ಯ ಅನ್ನದಾಸೋಹ ಕೇಂದ್ರದ ಮೂಲಕ ಪ್ರತಿ ದಿನ 60ರಿಂದ 70 ಸಾವಿರ ಮಂದಿಗೆ ಅನ್ನದಾಸೋಹ ನೀಡಲಾಗುತ್ತದೆ. ಮಾತೃಶ್ರೀ ತರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನ ಸೇರಿದಂತೆ ಹಳೆಯ ಅನ್ನದಾನ ಕಾಂಪ್ಲೆಕ್ಸ್​​​, ಪಿಎಸಿ-2ರಲ್ಲಿ ಅನ್ನದಾಸೋಹ ಮಾಡಲಾಗುತ್ತದೆ.

    MORE
    GALLERIES

  • 47

    Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

    ಇಷ್ಟೇ ಅಲ್ಲದೆ, ರಾಂಭಗಿಚಾ ಬಸ್​ ನಿಲ್ದಾಣ, ಕೇಂದ್ರಿಯ ವಿಚಾರಣ ಕಾರ್ಯಾಲಯ, ಪಿಎಸಿ-1 ಬಳಿಯೂ ಅನ್ನದಾಸೋಹದ ಕೌಂಟರ್​​ಗಳನ್ನು ಟಿಟಿಡಿ ಏರ್ಪಡಿಸಿದೆ. ಈ ರೀತಿ ಭಕ್ತರಿಗೆ ಅನ್ನದಾಸೋಹ ನಡೆಸುತ್ತಾ ಟಿಟಿಡಿ ಪುಣ್ಯಕ್ಷೇತ್ರಕ್ಕೆ ಬರುವವರ ಹಸಿವು ನೀಗಿಸುತ್ತಿದೆ. ನೀವು ಕೂಡ ಒಂದು ದಿನ ಅನ್ನದಾಸೋಹ ನಡೆಸಲು ಟಿಟಿಡಿಗೆ ದೇಣಿಗೆ ನೀಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

    ತಿರುಮಲ ಭಕ್ತರಿಗೆ ಒಂದು ದಿನ ಅನ್ನದಾಸೋಹ ನೀಡಲು ಸುಮಾರು 33 ಲಕ್ಷ ರೂಪಾಯಿ ಖರ್ಚು ಮಾಡಲಾಗುತ್ತದೆ. ಇಷ್ಟು ಮೊತ್ತವನ್ನು ನೀವು ತಿರುಮಲ ತಿರುಪತಿ ದೇವಸ್ಥಾನ ಸಮಿತಿಗೆ ದೇಣಿಗೆ ನೀಡಿದರೆ ಸಮಿತಿ ಅನ್ನದಾಸೋಹವನ್ನು ನಿಮ್ಮ ಹೆಸರಿನಲ್ಲಿ ನೀಡುತ್ತದೆ. ಅನ್ನದಾಸೋಹ ನೀಡುವ ಸಂದರ್ಭದಲ್ಲಿ ಟಿಟಿಡಿಗೆ ದೇಣಿಗೆ ನೀಡಿದ ಭಕ್ತರ ಹೆಸರನ್ನು ಡಿಸ್ಪ್ಲೇ ಬೋರ್ಡ್ ಮೂಲಕ ಪ್ರದರ್ಶನ ಮಾಡಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

    ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಪುತ್ರ ದೇವಾಂಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಂದ್ರಬಾಬು ಅವರ ಕುಟುಂಬದ ಸದಸ್ಯರು ಮಾರ್ಚ್ 21 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ದೇಣಿಗೆ ನೀಡಿದರು. ಒಂದು ದಿನದ ಅನ್ನಪ್ರಸಾದ ವಿತರಣೆಗಾಗಿ 33 ಲಕ್ಷ ರೂಪಾಯಿಗಳ ದೇಣಿಗೆಯನ್ನು ಟಿಟಿಡಿ ಅಧಿಕಾರಿಗಳಿಗೆ ನೀಡಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Tirumala: ತಿರುಮಲ ಸನ್ನಿಧಿಯಲ್ಲಿ ನಿಮ್ಮ ಹೆಸರಲ್ಲಿ ಅನ್ನದಾಸೋಹ ಮಾಡ್ಬೇಕಾ? ಹಾಗಾದ್ರೆ ಒಂದು ದಿನಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತಾ?

    ಪ್ರತಿ ವರ್ಷ ದೇವಾಂಶ್ ಜನ್ಮದಿನದಂದು ಅನ್ನ ಪ್ರಸಾದ ವಿತರಣೆಗೆ ನಾರಾ ಕುಟುಂಬದವರು ದೇಣಿಗೆ ನೀಡುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಈ ಹಣದಲ್ಲಿ ಮಾತೃಶ್ರೀ ತರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕಟ್ಟಡ ಭಕ್ತರಿಗೆ ಅನ್ನಪ್ರಸಾದ ನೀಡಲಿದೆ. ಅನ್ನದಾಸೋಹ ನಡೆಸಲು ಅನೇಕ ಭಕ್ತರು ದಾನ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES