Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

ತಿರುಮಲ ದೇಗುಲ ಸದಾ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಸಹಸ್ರಾರು ಭಕ್ತರು ಏಳು ಬೆಟ್ಟಗಳನ್ನು ಹತ್ತಿ ದೇವರ ದರ್ಶನ ಪಡೆಯುತ್ತಾರೆ. ಈ ನಡುವೆಯೇ ಮೂರು ದಿನಗಳ ಕಾಲ ತಿರುಮಲದಲ್ಲಿ ಸೇವೆಗಳನ್ನು ರದ್ದುಗೊಳಿಸಲಾಗಿದೆ.

  • Local18
  • |
  •   | Tirumala, India
First published:

  • 19

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ತಿರುಮಲ ತಿಮ್ಮಪ್ಪನ ಭಕ್ತರೇ ಗಮನಿಸಿ, ವೆಂಕಟೇಶ್ವರನ ಸನ್ನಿಧಿಯಲ್ಲಿ ಹಲವು ಸೇವೆಗಳನ್ನು ರದ್ದುಗೊಳಿಸಲಾಗಿದೆ. ಭಕ್ತರು ತಿರುಮಲಕ್ಕೆ ಆಗಮಿಸುವ ಮುನ್ನ ಈ ವಿವರಗಳನ್ನು ತಿಳಿದು ಆಗಮಿಸುವಂತೆ ಟಿಟಿಡಿ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ತಿರುಮಲ ಸ್ವಾಮಿಗೆ ಸಾಲಕಟ್ಲ ಬ್ರಹ್ಮೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಹೀಗಾಗಿ ಹಲವು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಪ್ರಕಟಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ತಿರುಮಲ ದೇಗುಲ ಸದಾ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಸಹಸ್ರಾರು ಭಕ್ತರು ಏಳು ಬೆಟ್ಟಗಳನ್ನು ಹತ್ತಿ ದೇವರ ದರ್ಶನ ಪಡೆಯುತ್ತಾರೆ. ಈ ನಡುವೆಯೇ ಮೂರು ದಿನಗಳ ಕಾಲ ತಿರುಮಲದಲ್ಲಿ ಸೇವೆಗಳನ್ನು ರದ್ದುಗೊಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ಪ್ರತಿ ವರ್ಷ ಚೈತ್ರಶುದ್ಧ ಹುಣ್ಣಿಮೆಯಂದು ತಿರುಮಲದಲ್ಲಿ ಮೂರು ದಿನಗಳ ಕಾಲ ಈ ಉತ್ಸವಗಳು ನಡೆಯುವುದು ವಾಡಿಕೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ. ಈ ಉತ್ಸವಗಳಿಗೆ ಅಗತ್ಯ ವ್ಯವಸ್ಥೆ ಕೂಡ ಪೂರ್ಣಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ಏಪ್ರಿಲ್ 3ರಂದು ಬೆಳಗ್ಗೆ 7 ಗಂಟೆಗೆ ಶ್ರೀದೇವಿ ಭೂದೇವಿ ಸಮೇತ ಶ್ರೀ ಮಲಯಪ್ಪ ಸ್ವಾಮಿಯ ಮೆರವಣಿಗೆ ನಡೆಸಿ ನಂತರ ವಸಂತೋತ್ಸವ ಮಂಟಪಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ವಸಂತೋತ್ಸವ ಅಭಿಷೇಕ ನಿವೇದನೆಗಳನ್ನು ಮುಗಿಸಿ ದೇವಸ್ಥಾನಕ್ಕೆ ಮೆರವಣಿಗೆ ಮರಳಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ಏಪ್ರಿಲ್ 4 ರಂದು ಶ್ರೀ ಭೂ ಸಮೇತ ಶ್ರೀ ಮಲಯಪ್ಪಸ್ವಾಮಿ ಚಿನ್ನದ ರಥವನ್ನು ಏರಿಸಿ ಬೆಳಿಗ್ಗೆ 8 ರಿಂದ 10 ರವರೆಗೆ ತಿರುಮಲದ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಬಳಿಕ ವಸಂತ ಮಂಟಪದಲ್ಲಿ ಪುರೋಹಿತರು ವಸಂತೋತ್ಸವ ನಡೆಸಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ಏಪ್ರಿಲ್ 5 ರಂದು ಶ್ರೀದೇವಿ ಮತ್ತು ಭೂದೇವಿ ಸಮೇತ ಶ್ರೀ ಮಲಯಪ್ಪಸ್ವಾಮಿ, ಶ್ರೀ ಸೀತಾರಾಮಲಕ್ಷ್ಮಣ ಆಂಜನೇಯ ಸ್ವಾಮಿ ಉತ್ಸವಲರ್ ಮತ್ತು ಶ್ರೀಕೃಷ್ಣಸ್ವಾಮಿ ಉತ್ಸವಮೂರ್ತಿ ಶ್ರೀ ರುಕ್ಮಿಣಿ ಸಹಿತ ವಸಂತೋತ್ಸವ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ಶ್ರೀ ಮಲಯಪ್ಪಸ್ವಾಮಿಗೆ ವಸಂತ ಋತುವಿನಲ್ಲಿ ನಡೆಯುವ ಈ ಉತ್ಸವಕ್ಕೆ ‘ವಸಂತೋತ್ಸವ’ ಎನ್ನುತ್ತಾರೆ. ಈ ವಸಂತೋತ್ಸವದ ಮುಖ್ಯ ಪ್ರಕ್ರಿಯೆಯು ಭಗವಂತನಿಗೆ ಪರಿಮಳಯುಕ್ತ ಹೂವುಗಳನ್ನು ಅರ್ಪಿಸುವುದರ ಜೊತೆಗೆ ವಿವಿಧ ಹಣ್ಣುಗಳನ್ನು ನೈವೇದ್ಯ ಮಾಡಲಾಗುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Tirumala: ಭಕ್ತರೇ ಗಮನಿಸಿ, ತಿರುಮಲದಲ್ಲಿ ಈ ಸೇವೆಗಳು ರದ್ದು

    ಹೀಗಾಗಿ ವಸಂತೋತ್ಸವದ ನಿಮಿತ್ತ ಏಪ್ರಿಲ್ 3 ರಿಂದ 5 ರವರೆಗೆ ಕಲ್ಯಾಣೋತ್ಸವ, ಊಂಜಲಸೇವೆ, ಆರ್ಜಿತ ಬ್ರಹ್ಮೋತ್ಸವ ಮತ್ತು ಸಹಸ್ರದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES