Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

ಯುಗಾದಿ ಹಬ್ಬದ (Ugadi Festival) ದಿನದಂದೇ ವಿಶಾಖಪಟ್ಟಣದಲ್ಲಿ (Visakhapatnam) ದಾರುಣ ಘಟನೆಯೊಂದು ನಡೆದಿದೆ. ಮೂರು ಅಂತಸ್ತಿನ ಕಟ್ಟಡ ಕುಸಿದು ಅದರಲ್ಲಿ ವಾಸಿಸುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ನಗರದ ಕಲೆಕ್ಟರೇಟ್ ಬಳಿಯ ರಾಮಜೋಗಿಪೇಟೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

  • Local18
  • |
  •   | Visakhapatnam, India
First published:

  • 17

    Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

    ಯುಗಾದಿ ಹಬ್ಬದ (Ugadi Festival) ದಿನದಂದೇ ವಿಶಾಖಪಟ್ಟಣದಲ್ಲಿ (Visakhapatnam) ದಾರುಣ ಘಟನೆಯೊಂದು ನಡೆದಿದೆ. ಮೂರು ಅಂತಸ್ತಿನ ಕಟ್ಟಡ ಕುಸಿದು ಅದರಲ್ಲಿ ವಾಸಿಸುತ್ತಿದ್ದ ಮೂವರು ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ನಗರದ ಕಲೆಕ್ಟರೇಟ್ ಬಳಿಯ ರಾಮಜೋಗಿಪೇಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

    MORE
    GALLERIES

  • 27

    Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

    ಮೃತಪಟ್ಟ ಮೂವರಲ್ಲಿ ಇಬ್ಬರು ಮಕ್ಕಳಿದ್ದಾರೆ. ಮತ್ತೊಬ್ಬ ಬಿಹಾರ ಮೂಲದ  ಯುವಕ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಂಗ್ ಜಾರ್ಜ್  ಆಸ್ಪತ್ರೆಗೆ ರವಾನಿಸಲಾಗಿದೆ.

    MORE
    GALLERIES

  • 37

    Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

    ಮೃತಪಟ್ಟ ಮೂವರಲ್ಲಿ ಓರ್ವ ಬಾಲಕಿಯೂ ಸೇರಿದ್ದು, ಆಕೆಯ ಹುಟ್ಟುಹಬ್ಬದ ದಿನವೇ ಈ ದಾರುಣ ಘಟನೆ ನಡೆದಿದ್ದು, ಸಂಬಂಧಿಕರು ಹಾಗೂ ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.

    MORE
    GALLERIES

  • 47

    Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

    ದುರಂತದಲ್ಲಿ ವೇಳೆ ಕಟ್ಟಡದಲ್ಲಿ  8 ಮಂದಿ  ಇದ್ದರೆಂದು ತಿಳಿದುಬಂದಿದ್ದು,  ಅವರಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.  ಉಳಿದವರು ಗಾಯಾಳುಗಳಾಗಿದ್ದಾರೆ. ಸ್ಥಳೀಯರಿಂದ ದುರಂತದ ಬಗ್ಗೆ ಮಾಹಿತಿ ಪಡೆದ ಪೊಲೀಸ್​ ,ರಕ್ಷಣಾ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಜನರನ್ನು ಹೊರತೆಗೆದಿದ್ದಾರೆ.

    MORE
    GALLERIES

  • 57

    Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

    ಈ ಅವಘಡದಲ್ಲಿ 2ನೇ ಮಹಡಿಯಲ್ಲಿ ಸಾಕೇತಿ ಅಂಜಲಿ ಎಂಬ 14 ವರ್ಷದ ಬಾಲಕಿ, ಆಕೆಯ ಸಹೋದರ  17 ವರ್ಷದ ದುರ್ಗಾಪ್ರಸಾದ್ ಮತ್ತು ನೆಲಮಹಡಿಯಲ್ಲಿದ್ದ ಬಿಹಾರದ ಮತ್ತೊಬ್ಬ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. ದುರಂತವೆಂದರೆ ಅಂಜಲಿ ಜನ್ಮದಿನ ಆಚರಿಸಿಕೊಂಡ ಕೇವಲ ಒಂದು ಗಂಟೆಯೊಳಗೆ  ಕಟ್ಟಡ  ಕುಸಿದು ಸಾವನ್ನಪ್ಪಿದ್ದಾಳೆ. ಆಕೆಯ ಜೊತೆಗೆ ಸಹೋದರ ಕೂಡ ಸಾವನ್ನಪ್ಪಿದ್ದು, ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

    MORE
    GALLERIES

  • 67

    Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

    ಇದೇ ವೇಳೆ ದುರಂತದಲ್ಲಿ ಮೃತಪಟ್ಟ ಮಕ್ಕಳ ಪೋಷಕರಾದ ರಾಮರಾವ್ ಮತ್ತು ಕಲ್ಯಾಣಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಶಿವಶಂಕರ್, ಕೃಷ್ಣ ಮತ್ತು ರೋಜಾ ರಾಣಿ ಎಂಬ ಮೂವರನ್ನೂ ಕೆಜಿಎಚ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 77

    Tragedy: ಬರ್ತ್​ ಡೇ ಆಚರಿಸಿಕೊಂಡ ಒಂದೇ ಗಂಟೆಯಲ್ಲಿ ಅಣ್ಣ-ತಂಗಿ ಸಾವು, ಯುಗಾದಿ ದಿನವೇ ನಡೆಯಿತು ದುರಂತ!

    ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು ಎಂಟು ಮಂದಿ ವಾಸಿಸುತ್ತಿದ್ದರು  ಗಾಯಗೊಂಡ ನಿವಾಸಿಗಳಲ್ಲಿ ಒಬ್ಬರಾದ ರಾಮರಾವ್ ತಿಳಿಸಿದ್ದಾರೆ. ರಾಮರಾವ್ ಅವರ ಕುಟುಂಬ ಮೂರನೇ ಮಹಡಿಯಲ್ಲಿ ವಾಸವಾಗಿದ್ದು, ಮೊದಲ ಮಹಡಿಯಲ್ಲಿ ದಂಪತಿ ಮತ್ತು ಮಕ್ಕಳು ವಾಸವಾಗಿದ್ದರು. ನೆಲ ಮಹಡಿಯಲ್ಲಿ ಇಬ್ಬರು ಬ್ಯಾಚುಲರ್ಸ್​ಗಳು ವಾಸವಾಗಿದ್ದರು ಎಂದು ತಿಳಿದುಬಂದಿದೆ.

    MORE
    GALLERIES