Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

ಸೊಲ್ಲಾಪುರದ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬೆಳೆದ ಮಾವಿನ ಹಣ್ಣಿಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಹೆಸರಿಟ್ಟಿದ್ದಾರೆ. ಹಾಗಿದ್ರೆ ಮಾವಿನ ಹಣ್ಣಿಗೆ ಈ ಹೆಸರಿಡಲು ಕಾರಣವೇನು ಎಂಬುದನ್ನು ಈ ಲೇಖನದಲ್ಲಿದೆ ಓದಿ.

  • Local18
  • |
  •   | Maharashtra, India
First published:

  • 17

    Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

    ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರು ರಾಷ್ಟ್ರೀಯ ಮತ್ತು ಮಹಾರಾಷ್ಟ್ರ ರಾಜಕೀಯದಲ್ಲಿ ಬಹಳಷ್ಟು ಪ್ರಾಬಲ್ಯ ಹೊಂದಿದ್ದಾರೆ. ಇನ್ನು ಇವರ ರಾಜಕೀಯ ವಿಚಾರದಲ್ಲಿ ಸದಾ ಒಂದಲ್ಲಾ ಒಂದು ವಿಚಾರದಲ್ಲಿ ಚರ್ಚೆಯಲ್ಲಿರುತ್ತಾರೆ. ಆದರೆ ಇದೀಗ ರಾಜಕೀಯೇತರವಾಗಿ ಶರದ್​ ಪವಾರ್ ಅವರು ಭಾರೀ ಸುದ್ದಿಯಲ್ಲಿದ್ದಾರೆ.

    MORE
    GALLERIES

  • 27

    Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

    ಸೋಲಾಪುರದ ರೈತ ದತ್ತಾತ್ರೇಯ ಗಾಡ್ಗೆ ಅವರು ತಮ್ಮ ತೋಟದಲ್ಲಿ ಬೆಳೆದ ಮಾವಿಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರನ್ನು ಇಟ್ಟಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗೆಯೇ ಹಲವರಲ್ಲಿ ಇವರ ಹೆಸರನ್ನು ಏಕೆ ಇಟ್ಟಿದ್ದಾರೆ ಎಂಬ ಪ್ರಶ್ನೆಯೂ ಮೂಡಿದೆ.

    MORE
    GALLERIES

  • 37

    Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

    ದತ್ತಾತ್ರೇಯ ಗಾಡ್ಗೆ ತನ್ನ ತೋಟದಲ್ಲಿ 20-25 ಮಾವಿನ ಬಗೆಯ ಮರಗಳನ್ನು ನೆಟ್ಟಿದ್ದಾರೆ. ಈ ಎಲ್ಲದರಲ್ಲೂ ಏನಾದರೊಂದು ಪ್ರಯೋಗ ನಡೆಸುತ್ತಲೇ ಇರುತ್ತಾರೆ. ಈ ಬೇಸಿಗೆ ಕಾಲದಲ್ಲಿ ಈ ಮರಗಳಲ್ಲಿ ಮಾವಿನ ಹಣ್ಣುಗಳಿದ್ದು. ಇದರಲ್ಲಿರುವ ಪ್ರತಿಯೊಂದೂ ಸುಮಾರು 2.5 ಕೆಜಿ ತೂಕವನ್ನು ಹೊಂದಿದೆಯಂತೆ. ಹಾಗೆಯೇ ಈ ಮಾವುಗಳಿಗೆ ಶರದ್ ಪವಾರ್​ ಎಂದು ಹೆಸರನ್ನೂ ಇಟ್ಟಿದ್ದಾರೆ. ಸದ್ಯ ಸೊಲ್ಲಾಪುರದಲ್ಲಿ ಆಯೋಜಿಸಿದ್ದ ಮಾವು ಸಂತೆಯಲ್ಲಿ ಈ ಮಾವು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

    MORE
    GALLERIES

  • 47

    Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

    ಶರದ್ ಪವಾರ್ ಹೆಸರೇಕೆ?: ಈ ಮಾವಿಗೆ ಶರದ್ ಪವಾರ್ ಹೆಸರಿಡಲು ಕಾರಣವನ್ನೂ ಗಾಡ್ಗೆ ಹೇಳಿದ್ದಾರೆ. ಶರದ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ಫಲ್​ಬಾಗ್ ಯೋಜನೆ ಆರಂಭಿಸಿದ್ದರು. ಈ ಯೋಜನೆಯಡಿ ನಾವು 8 ಎಕರೆ ಜಮೀನಿನಲ್ಲಿ ಸುಮಾರು 7000 ಕೇಸರ್ ಮಾವಿನ ಗಿಡಗಳನ್ನು ನೆಟ್ಟಿದ್ದೇವೆ. ಆ ದಿನಗಳಲ್ಲಿ ಅವರು ನೀಡಿದ ಯೋಜನೆಯನ್ನು ಗೌರವಿಸಲು, ಬೃಹತ್ ಗಾತ್ರದ 2.5 ಕೆಜಿ ಮಾವಿಗೆ ಶರದ್ ಪವಾರ್ ಅವರ ಹೆಸರನ್ನು ಇಡಲಾಗಿದೆ ಎಂದು ಗಾಡ್ಗೆ ಹೇಳಿದರು.

    MORE
    GALLERIES

  • 57

    Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

    ಮಾವಿನಕಾಯಿಯನ್ನು ಹೇಗೆ ತಯಾರಿಸಲಾಗುತ್ತದೆ?: ಸೊಲ್ಲಾಪುರದ ಮಾವು ಉತ್ಸವದಲ್ಲಿ, ಶರದ್ ಮಾವು ಅದರ ದೊಡ್ಡ ಗಾತ್ರದ ಕಾರಣದಿಂದಲೇ ಮತ್ತು ಅದರ ಹೆಸರು ಶರದ್‌ ಪವಾರ್​ನಿಂದ ಈ ಸಂತೆಯಲ್ಲಿ ಭಾರೀ ಜನಪ್ರಿತೆಯನ್ನು ಪಡೆದಿದೆ. ಇನ್ನು ಹಬ್ಬದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಈ ಮಾವನ್ನು ಹೇಗೆ ಉತ್ಪಾದಿಸಬಹುದು ಎಂದು ಗಾಡ್ಗೆ ವಿವರಿಸಿದರು.

    MORE
    GALLERIES

  • 67

    Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

    ಇನ್ನು ಗಾಡ್ಗೆ ಅವರು ತಮ್ಮ ತೋಟದಲ್ಲಿ ಮುಖ್ಯವಾಗಿ ಕೇಸರಿ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತೇವೆ ಎಂದು ಹೇಳಿದ್ದಾರೆ. ಈ ಮಾವಿನ ಮರಗಳಿಗೆ ವಿವಿಧ ರೀತಿಯ ಹೋಮಿಯೋಪತಿ ಔಷಧಗಳನ್ನು ಬಳಸಲಾಗಿದೆ. ಬಾರಾಮತಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಬಾರಾಮತಿ ಕೃಷಿ ಅಭಿವೃದ್ಧಿ ಟ್ರಸ್ಟ್‌ನೊಂದಿಗೆ ಸಂಬಂಧ ಹೊಂದಿರುವ ರಾಜೇಂದ್ರ ಪವಾರ್ ಈ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

    MORE
    GALLERIES

  • 77

    Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ

    ಮರಗಳ ಮೇಲೆ ಬೆಳೆದ ಮಾವಿನ ಹಣ್ಣುಗಳು ತಲಾ 2.5 ಕೆಜಿ ತೂಗುತ್ತವೆ. ಈ ಮಾವು ಹಬ್ಬದಲ್ಲಿ ಪಾಲ್ಗೊಳ್ಳಲು ಬಂದಿದ್ದ ಬಾರಾಮತಿ ಕೃಷಿ ಕಾಲೇಜಿನ ಕೃಷಿ ವಿಜ್ಞಾನಿಗಳು ಈ ಮಾವಿಗೆ ಶರದ್ ಮಾವು ಎಂಬ ಹೆಸರಿಟ್ಟಿದ್ದಾರೆ ಎಂದು ಗಾಡ್ಗೆ ಹೇಳಿದರು.

    MORE
    GALLERIES