Telangana Flood: ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋಟಿ ಕೋಟಿ ದೇಣಿಗೆ ನೀಡಿದ ಟಾಲಿವುಡ್ ನಟರು..!
ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತೆಲಂಗಾಣದ ಜನರ ಜೀವನ ಸಂಪೂರ್ಣವಾಗಿ ತತ್ತರಿಸಿದೆ. ಪ್ರವಾಹದಿಂದಾಗಿ ಸಾಕಷ್ಟು ಜನ ಮನೆಮಠ-ಆಸ್ತಿಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇನ್ನೂ ಅನೇಕ ಜನ ಮಳೆಗೆ ಬಲಿಯಾಗಿದ್ದಾರೆ. ಒಟ್ಟಿನಲ್ಲಿ ತೆಲಂಗಾಣ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುವಂತಾಗಿದೆ. ಅಲ್ಲದೆ, ಸರ್ಕಾರಕ್ಕೂ ಇದರಿಂದಾಗಿ ಸಾವಿರಾರು ಕೋಟಿ ನಷ್ಟವಾಗಿದೆ. ಈಗಾಗಲೇ ಕೊರೋನಾದಿಂದಾಗಿ ಆರ್ಥಿಕವಾಗಿ ತತ್ತರಿಸಿರುವ ತೆಲಂಗಾಣಕ್ಕೆ ಈ ನೆರೆ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಟಾಲಿವುಡ್ ಸ್ಟಾರ್ಗಳು ತೆಲಂಗಾಣ ರಾಜ್ಯದ ಬೆನ್ನಿಗೆ ನಿಂತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ಟಾಲಿವುಡ್ ಸ್ಟಾರ್ಗಳು ಕೊರೋನಾದ ಉಂಟಾದ ಸಂಕಷ್ಟವಿರಲಿ, ಪ್ರವಾಹ ಬರಲಿ ಸದಾ ತೆಲುಗು ರಾಜ್ಯದ ಬೆನ್ನಿಗೆ ನಿಂತಿರುತ್ತಾರೆ. ಪ್ರವಾಹದಿಂದ ತತ್ತರಿಸಿರುವ ತೆಲಂಗಾಣದ ಜನರ ನೆರವಿಗೆ ಬಂದಿದ್ದಾರೆ ತೆಲುಗು ಸಿನಿಮಾ ಸ್ಟಾರ್ಗಳು.
2/ 10
ಹೌದು, ನಟ ಪ್ರಭಾಸ್ ಸೇರಿದಂತೆ ಹಲವಾರು ಟಾಲಿವುಡ್ ಸ್ಟಾರ್ಗಳು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ನಟ ಪ್ರಭಾಸ್ 1.5 ಕೋಟಿ ಹಣ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
3/ 10
ನಟ ಪವನ್ ಕಲ್ಯಾಣ್ ಸಹ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ನೀಡುವುದಾಗಿ ಘೋಷಿಸಿದ್ದಾರೆ.
4/ 10
ಪ್ರಿನ್ಸ್ ಮಹೇಶ್ ಬಾಬು ಸಹ ಒಂದು ಕೋಟಿ ದೇಣಿಗೆ ನೀಡಿದ್ದಾರೆ.
5/ 10
ಮೆಗಾ ಸ್ಟಾರ್ ಚಿರಂಜೀವಿ ಸಹ ತಲಂಗಾಣದ ಪ್ರವಾಹ ಸಂತ್ರಸ್ತರಿಗಾಗಿ ಒಂದು ಕೋಟಿ ದೇಣಿಗೆ ಕೊಟ್ಟಿದ್ದಾರೆ.
6/ 10
ತೆಲಂಗಾಣ ಪ್ರವಾಹ ಸಂತ್ರಸ್ತರಿಗಾಗಿ ನಾಗಾರ್ಜುನ ಅವರು 50 ಲಕ್ಷ ನೀಡಿದ್ದಾರೆ.
7/ 10
ಜೂನಿಯರ್ ಎನ್ಟಿಆರ್ 50 ಲಕ್ಷ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
8/ 10
ನಟ ರಾಮ್ ಪೋತಿನೇನಿ 25 ಲಕ್ಷ ನೀಡಿದ್ದಾರೆ.
9/ 10
ನಟ ರವಿತೇಜ 10 ಲಕ್ಷ ನೀಡಿದ್ದಾರೆ.
10/ 10
ವಿಜಯ್ ದೇವರಕೊಂಡ 10 ಲಕ್ಷ ನೀಡಿದರೆ, ಉಳಿದಂತೆ ನಿರ್ದೇಶಕರಾದ ತ್ರಿನಾದ್ 50 ಲಕ್ಷ, ತ್ರಿವಿಕ್ರಮ್ 10 ಲಕ್ಷ, ಅನಿಲ್ ರವಿಪುಡಿ 5 ಲಕ್ಷ ಹೀಗೆ ಹಲವಾರು ಮಂದಿ ತಮ್ಮ ಕೈಲಾಷ್ಟು ನೆರವು ನೀಡಿದ್ದಾರೆ.