Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

ದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದ ವಲಸೆ ಕಾರ್ಮಿಕನ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೊಲೆಯಾದ ಎನ್ನಲಾಗಿದ್ದ ವ್ಯಕ್ತಿ ಬದುಕಿದ್ದು, ಒಡಿಶಾ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದಾರೆ. ಗಜಪತಿ ಜಿಲ್ಲೆಯ ಬರಿಗಾಂವ್ ಗ್ರಾಮದ ವಲಸೆ ಕಾರ್ಮಿಕ ಶರತ್ ತನ್ನ ಹೆಂಡತಿಯಿಂದ ದೂರವಾಗಲು ತನ್ನ ನಕಲಿ ಕೊಲೆ ಕಥೆ ಎಣೆದಿದ್ದ ಎಂಬುದು ಬಯಲಾಗಿದೆ.

First published:

  • 18

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದ ಒಡಿಶಾದ ಗಜಪತಿ ಜಿಲ್ಲೆಯ ವಲಸೆ ಕಾರ್ಮಿಕನ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೊಲೆಯಾದ ಎನ್ನಲಾಗಿದ್ದ ವ್ಯಕ್ತಿ ಬದುಕಿದ್ದು, ಒಡಿಶಾ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದಾರೆ. ಗಜಪತಿ ಜಿಲ್ಲೆಯ ಬರಿಗಾಂವ್ ಗ್ರಾಮದ ವಲಸೆ ಕಾರ್ಮಿಕ ಶರತ್ ತನ್ನ ಹೆಂಡತಿಯಿಂದ ದೂರವಾಗಲು ತನ್ನ ನಕಲಿ ಕೊಲೆ ಕಥೆ ಎಣೆದಿದ್ದ ಎಂಬುದು ಬಯಲಾಗಿದೆ.

    MORE
    GALLERIES

  • 28

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ಶರತ್ ಪರಿಚ್ಛಾ ಮಾರ್ಚ್ 6 ರಂದು ಗಜಪತಿಯಲ್ಲಿರುವ ತಮ್ಮ ಕುಟುಂಬಕ್ಕೆ ವಿಡಿಯೋ ಕರೆ ಮಾಡಿ ತಮಿಳುನಾಡಿನಲ್ಲಿ ಕೆಲವು ದುಷ್ಕರ್ಮಿಗಳಿಂದ ದಾಳಿಗೆ ಒಳಗಾಗಿರುವುದಾಗಿ ತಿಳಿಸಿದ್ದ. ಇದಾದ ಕೆಲವು ದಿನಗಳ ನಂತರ, ಆತನ ಮೊಬೈಲ್ ಫೋನ್‌ನಿಂದ ಕುಟುಂಬಕ್ಕೆ ಮೃತದೇಹದ ಛಾಯಾಚಿತ್ರವನ್ನು ಕೂಡ ಕಳುಹಿಸಿ ಆತ ಸತ್ತೇ ಹೋಗಿದ್ದಾನೆ ಎಂದು ಬಿಂಬಿಸಿದ್ದಾನೆ.

    MORE
    GALLERIES

  • 38

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ಮೂರು ಹೆಣ್ಣು ಮಕ್ಕಳ ತಂದೆಯಾಗಿರುವ ಶರತ್​ನ ಮೃತದೇಹವನ್ನು ನೀಡಬೇಕೆಂದರೆ ಹಣ ನೀಡಬೇಕೆಂದು ಕುಟುಂಬಕ್ಕೆ ಹಲವು ಬಾರಿ ಕರೆ ಹಾಗೂ ಒಂದಷ್ಟು ಮೃತದೇಹದ ಫೋಟೋಗಳ್ನು ಕಳುಹಿಸಲಾಗಿದೆ.

    MORE
    GALLERIES

  • 48

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ಈ ಬೆಳವಣಿಗೆಯಿಂದ ಗಾಬರಿಗೊಂಡ ಶರತ್ ಅವರ ಕುಟುಂಬದ ಸದಸ್ಯರು ಮೋಹನ ಪೊಲೀಸರಿಗೆ ದೂರು ನೀಡಿದ್ದು, ಆತನ ಪತ್ತೆ ಮಾಡಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

    MORE
    GALLERIES

  • 58

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ಶರತ್​ ಕುಟುಂಬಸ್ಥರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಗಜಪತಿ ಪೊಲೀಸರು ಆತನ ಮೊಬೈಲ್ ಫೋನ್ ಟ್ರ್ಯಾಕ್ ಮಾಡಿದ್ದು, ವಿಡಿಯೋವನ್ನು ತಮಿಳುನಾಡಿನಲ್ಲಿ ಚಿತ್ರೀಕರಿಸಲಾಗಿಲ್ಲ, ಆದರೆ ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

    MORE
    GALLERIES

  • 68

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ಶೀಘ್ರದಲ್ಲೇ ಗಜಪತಿಯ ಪೊಲೀಸ್ ತಂಡವು ಮುಂಬೈ ತಲುಪಿದ್ದು, ಶರತ್​ನನ್ನು ಪತ್ತೆ ಹಚ್ಚಿ ಒಡಿಶಾಗೆ ಕರೆತಂದಿದ್ದಾರೆ. ಶರತ್​ ಹಲ್ಲೆ ವಿಡಿಯೋವನ್ನು ಅವರ ಕುಟುಂಬಕ್ಕೆ ಕಳುಹಿಸಿದ 9 ದಿನಗಳ ನಂತರ ಆತನನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.

    MORE
    GALLERIES

  • 78

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ಶರತ್​ ತನ್ನ ಪತ್ನಿಯಿಂದ ದೂರವಾಗುವುದಕ್ಕೆ ಹಾಗೂ ಸಾಲಗಾರರದಿಂದ ಪಾರಾಗುವುದಕ್ಕೆ ತನ್ನ ಕೊಲೆಯನ್ನು ನೆಪ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 88

    Fake Death: ನಕಲಿ ಸಾವಿನ ಕಥೆ ಕಟ್ಟಿದ ವಲಸೆ ಕಾರ್ಮಿಕ! ತನಿಖೆಯಲ್ಲಿ ಬಯಲಾಯ್ತು ಆತನ ಮಾಸ್ಟರ್ ಪ್ಲಾನ್

    ಶರತ್ ಮಾಡಿದ್ದ ಈ ವಿಡಿಯೋದಿಂದ ತಮಿಳುನಾಡಿನಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ಹೊಡೆದು ಕೊಲ್ಲಲಾಗಿದೆ ಎಂಬ ವದಂತಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿತ್ತು. ಕೊಲೆಯ ವದಂತಿಯನ್ನು ಹರಡುವ ಮೂಲಕ ಆಡಳಿತವನ್ನು ತೊಂದರೆಗೆ ಸಿಲುಕಿಸಿದ್ದರಿಂದ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ನಂತರ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES