Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

ಇಂಫಾಲ: ಮಣಿಪುರದಲ್ಲಿ ಪರಿಶಿಷ್ಟ ಪಂಗಡಗಳ ಮಾನ್ಯತೆ ಕುರಿತು ನ್ಯಾಯಾಲಯದ ಆದೇಶದ ವಿಚಾರವಾಗಿ ಬುಡಕಟ್ಟು ಸಮುದಾಯಗಳ ಗುಂಪಿನ ನಡುವೆ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದು ಸತ್ತವರ ಸಂಖ್ಯೆ ಈಗಾಗಲೇ 54ಕ್ಕೆ ಏರಿಕೆಯಾಗಿದೆ. 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಮಧ್ಯೆ ಶನಿವಾರ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆದು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.

First published:

  • 18

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಈ ಮಧ್ಯೆ ಮಣಿಪುರ ಮುಖ್ಯಮಂತ್ರಿ ಶನಿವಾರ ಸರ್ವಪಕ್ಷ ಸಭೆಯನ್ನು ನಡೆಸಿದ್ದು, ಮಣಿಪುರದಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ತಡೆಯುವಿಕೆಗಾಗಿ ಕರೆದ ಸಭೆಯಲ್ಲಿ ಕಾಂಗ್ರೆಸ್, ಎನ್‌ಪಿಎಫ್, ಎನ್‌ಪಿಪಿ, ಸಿಪಿಐ (ಎಂ), ಆಮ್ ಆದ್ಮಿ ಪಕ್ಷ ಮತ್ತು ಶಿವಸೇನೆ ಭಾಗವಹಿಸಿದ್ದವು.

    MORE
    GALLERIES

  • 28

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಈ ಬಗ್ಗೆ ಟ್ವೀಟ್ ಮಾಡಿರುವ ಮಣಿಪುರ ಸಿಎಂ ಬಿರೇನ್ ಸಿಂಗ್, ‘ಯಾವುದೇ ರೀತಿಯ ಹಿಂಸಾಚಾರದಿಂದ ದೂರವಿರುವಂತೆ ಮಣಿಪುರದ ಪ್ರತಿಯೊಬ್ಬರಿಗೂ ನಾನು ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸರು ಮತ್ತು ಅರೆಸೇನಾ ಪಡೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 38

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಸರ್ವ ಪಕ್ಷ ಸಭೆಯ ನಂತರ ಮಣಿಪುರದಲ್ಲಿ ಹಿಂಸಾಚಾರದ ವಾತಾವರಣ ತಿಳಿಗೊಂಡು ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಹಿನ್ನೆಲೆ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡಲು ಮಣಿಪುರ ಸರ್ಕಾರವು ಭಾನುವಾರ ಬೆಳಿಗ್ಗೆ 7 ರಿಂದ 10 ರವರೆಗೆ ಕರ್ಫ್ಯೂ ಅನ್ನು ಭಾಗಶಃ ಸಡಿಲಿಸಿದೆ.

    MORE
    GALLERIES

  • 48

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಈ ಮಧ್ಯೆ ಮಣಿಪುರ ರಾಜ್ಯಪಾಲರಾದ ಸುಶ್ರೀ ಅನುಸೂಯಾ ಉಯ್ಕೆ ಅವರು ಶನಿವಾರ ರಾಜ್ಯದ ಜನತೆಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮತ್ತು ಭಯ ಮತ್ತು ಅಭದ್ರತೆಯ ಭಾವನೆಯನ್ನು ಹೋಗಲಾಡಿಸಲು ಮನವಿ ಮಾಡಿದ್ದಾರೆ ಎಂದು ರಾಜ್ಯಪಾಲರ ಕಚೇರಿಯಿಂದ ಹೊರಬಂದ ಅಧಿಕೃತ ಪ್ರಕಟಣೆ ತಿಳಿಸಿದೆ.

    MORE
    GALLERIES

  • 58

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಮೇಘಾಲಯ, ಅರುಣಾಚಲ ಪ್ರದೇಶ, ತ್ರಿಪುರಾ ಸೇರಿದಂತೆ ನೆರೆಯ ರಾಜ್ಯಗಳು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ವ್ಯವಸ್ಥೆ ಮಾಡುತ್ತಿವೆ. ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳವಳ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಕ್ಕಾಗಿ ಆಂಧ್ರಪ್ರದೇಶ ಸರ್ಕಾರ ದೆಹಲಿಯ ಎಪಿ ಭವನದಲ್ಲಿ ಸಹಾಯವಾಣಿ ಮತ್ತು ನಿಯಂತ್ರಣ ಕೊಠಡಿಯನ್ನು ತೆರೆದಿದೆ. ಸಹಾಯವಾಣಿ ಸಂಖ್ಯೆಗಳು ಹೀಗಿದೆ. 011-23384016 ಮತ್ತು 011-23387089.

    MORE
    GALLERIES

  • 78

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಈಶಾನ್ಯ ರಾಜ್ಯದಲ್ಲಿ ಸದ್ಯ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಹೀಗಾಗಿ ಹಿಂಸಾಚಾರ ಪೀಡಿತ ಮಣಿಪುರದಿಂದ ಬದುಕುಳಿಯುವ ಆಸೆಯಿಂದ ಪಲಾಯನ ಮಾಡುತ್ತಿದ್ದ ದಿನಕೂಲಿ ಕಾರ್ಮಿಕರು ಮತ್ತು ಅಸ್ಸಾಂ ನಿವಾಸಿಗಳ ಗುಂಪನ್ನು ಅಸ್ಸಾಂ ರೈಫಲ್ಸ್ ಸುರಕ್ಷಿತವಾಗಿ ರಕ್ಷಣೆ ಮಾಡಿದೆ ಎಂದು ಅಸ್ಸಾಂ ರೈಫಲ್ಸ್ ಹೇಳಿದೆ.

    MORE
    GALLERIES

  • 88

    Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ

    ಮಣಿಪುರದ ಚುರಾಚಂದ್‌ಪುರ ನಿವಾಸಿಗಳು ಮೊಯಿರಾಂಗ್‌ನಲ್ಲಿನ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ, ಅವರು ತಮ್ಮ ಕುಟುಂಬಗಳು ಮತ್ತು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬರು, ‘ನಾನು ನನ್ನ ಮನೆಯ ಬಗ್ಗೆ ಚಿಂತಿತನಾಗಿದ್ದೇನೆ. ಅವರು ನಮ್ಮ ಮನೆಯನ್ನು ಸುಟ್ಟುಹಾಕುತ್ತಾರೆ ಎಂದು ನನಗೆ ಭಯವಾಗಿದೆ ಎಂದು ಹೇಳಿದರು.

    MORE
    GALLERIES