ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

ಕಲ್ಯಾಣ ಮಂಟಗಳ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಲು ಜನಪ್ರಿಯತೆ ಕಳೆದುಕೊಂಡಿರುವ ಕಲ್ಯಾಣ ಮಂಟಪಗಳನ್ನು ಪಟ್ಟಿ ಮಾಡಿ ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸುವ ಮೂಲಕ ಆದಾಯ ಗಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ಟಿಟಿಡಿ ಇಎ ಧರ್ಮಾ ರೆಡ್ಡಿ ತಿಳಿಸಿದ್ದಾರೆ.

First published:

  • 17

    ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

    ಆಂಧ್ರ ಪ್ರದೇಶದಲ್ಲಿ ಜನಪ್ರಿಯತೆ ಕಡಿಮೆಯಾಗಿರುವ ಟಿಟಿಡಿ ಕಲ್ಯಾಣ ಮಂಟಪಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದು ರಾಜಾಂ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಲ್ಯಾಣ ಮಂಟಗಳ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಲು ಜನಪ್ರಿಯತೆ ಕಳೆದುಕೊಂಡಿರುವ ಕಲ್ಯಾಣ ಮಂಟಪಗಳನ್ನು ಪಟ್ಟಿ ಮಾಡಿ ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸುವ ಮೂಲಕ ಆದಾಯ ಗಳಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 27

    ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

    ಇದೇ ವೇಳೆ ಪ್ರಮುಖ ಉದ್ಯಮಿ ಜಿಎಂಆರ್​​ ಮನವಿ ಮೇರೆಗೆ ಟಿಟಿಎ ಮಂಡಳಿ ಅನುಮೋದನೆ ಮೇರೆಗೆ ರಾಜಾಂ ಬಾಲಾಜಿ ದೇವಸ್ಥಾನವನ್ನು ಟಿಟಿಡಿಯೊಂದಿಗೆ ವಿಲೀನ ಮಾಡಿಕೊಳ್ಳುತ್ತಿದ್ದೇವೆ ಎಂದು ಧರ್ಮ ರೆಡ್ಡಿ ತಿಳಿಸಿದ್ದಾರೆ. ತಿರುಪತಿ ಲಡ್ಡು ರಾಜಾಂ ದೇವಸ್ಥಾನದಲ್ಲೂ ಕೂಡ ವಿತರಣೆ ಮಾಡಲಾಗುತ್ತದೆ ಎಂದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

    ಉಳಿದಂತೆ ತಿರುಪತಿ ತಿರುಮಲ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಉಚಿತ ದರ್ಶನ ಟೋಕನ್ ನೀಡಲಾಗುವುದು ಎಂದು ಟಿಟಿಡಿ ಇಒ ಧರ್ಮಾ ರೆಡ್ಡಿ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

    ತಿರುಪತಿ, ತಿರುಮಲದಲ್ಲಿ ವಸತಿ ವ್ಯವಸ್ಥೆಯೊಂದಿಗೆ ಲಡ್ಡು ಪ್ರಸಾದ ನೀಡುವ ವಿಧಾನದಲ್ಲೂ ಈ ನಿಯಮವನ್ನು ಜಾರಿ ಮಾಡುತ್ತೇವೆ. ಆ ಮೂಲಕ ಅಕ್ರಮವಾಗಿ ಲಡ್ಡು ಬ್ಯುಸಿನೆಸ್​ ಮಾಡುತ್ತಿರುವರಿಗೆ ಬ್ರೇಕ್​ ಹಾಕುತ್ತೇವೆ. ಇದರಿಂದ ಭಕ್ತರಿಗೆ ಹೆಚ್ಚಿನ ಉಪಯೋಗ ಆಗಲಿದೆಅಂತ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

    ತಿರುಮಲ ಬೆಟ್ಟಕ್ಕೆ ನಡೆದುಕೊಂಡು ಕಾಲ್ನಡಿಗೆ ಮಾರ್ಗದಲ್ಲಿ ಬರುವ ಭಕ್ತರಿಗೆ ಉಚಿತ ದರ್ಶನದ ಟಿಕೆಟ್​ ನೀಡಲು ಪ್ರಾರಂಭ ಮಾಡಲಾಗುತ್ತದೆ. ಕಾಲ್ನಡಿಗೆ ಮಾರ್ಗದಲ್ಲಿ ನಡೆದುಕೊಂಡು ಬರುವ ಎಲ್ಲರಿಗೂ ಮಾತ್ರವಲ್ಲದೆ ಯಾವುದೇ ಟಿಕೆಟ್​ ಇಲ್ಲದೆ ಬೆಟ್ಟದ ಮೇಲೆ ಬರುವ ಭಕ್ತರಿಗೂ ಟಿಕೆಟ್​ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 67

    ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

    ಈ ಹಿಂದೆ ತಿರುಮಲಕ್ಕೆ ಶ್ರೀವಾರಿ ಮೆಟ್ಟಿಲುಗಳ ಮೂಲಕ ಕಾಲ್ನಡಿಯಲ್ಲಿ ಬರುವ ಆರು ಸಾವಿರ ಭಕ್ತರಿಗೆ, ಅಲಿಪಿರಿ ಮಾರ್ಗದ ಮುಲಕ ಬರುವ 14 ಸಾವಿರ ಭಕ್ತರಿಗೆ ಮಾತ್ರ ದಿವ್ಯಾ ದರ್ಶನ (ಉಚಿತ) ಟಿಕೆಟ್​​ ನೀಡಲಾಗುತ್ತಿತ್ತು. ಆದರೆ ಕೊರೊನಾ ಸಂಕಷ್ಟ ಬಳಿಕ ನಡೆದುಕೊಂಡು ಬರುವ ಭಕ್ತಿಗೆ ನೀಡುತ್ತಿದ್ದ ಉಚಿತ ಟಿಕೆಟ್​​ಗಳನ್ನು ನಿಲ್ಲಿಸಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    ಜನಪ್ರಿಯತೆ ಕಳೆದುಕೊಂಡ ಕಲ್ಯಾಣ ಮಂಟಪಗಳ ನಿರ್ವಹಣೆ ಖಾಸಗಿ ವ್ಯಕ್ತಿಗೆ ವಹಿಸಲು ಮುಂದಾದ TTD

    ಸದ್ಯ ಭಕ್ತರಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾಲ್ನಡಿಗೆ ಮಾರ್ಗದಲ್ಲಿ ಬರುವ ಭಕ್ತಿಗೆ ಟಿಕೆಟ್​ ನೀಡಲು ಟಿಟಿಡಿ ನಿರ್ಧಾರ ಮಾಡಿದೆ. ಮೆಟ್ಟಿಲು ಮಾರ್ಗದ ಮೂಲಕ ತಿರುಮಲಕ್ಕೆ ಬರುವ ಭಕ್ತರು ಬೆಟದ ಮೇಲೆ ಬರುತ್ತಿದ್ದಂತೆ ಸುಸ್ತಾಗಿರುತ್ತಾರೆ. ಇಂತಹ ಭಕ್ತರಿಗೆ ದಿವ್ಯಾ ದರ್ಶನ ಟಿಕೆಟ್​ ನೀಡುವ ಮೂಲಕ ಸ್ವಾಮಿಯ ದರ್ಶನ ಸುಲಭವಾಗಿ ಸಿಗುವಂತೆ ಮಾಡಲು ಟಿಟಿಡಿ ನಿರ್ಧಾರ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES