Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

ಅಟ್ಲಾಂಟಾ ಜೈಲಿನಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. ಕೈದಿಯೊಬ್ಬನನ್ನ ಜೀವಂತ ಕೀಟಗಳು ಮತ್ತು ತಿಗಣೆಗಳು ರಕ್ತಹೀರಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

First published:

  • 110

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಅಟ್ಲಾಂಟಾ ಜೈಲಿನಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. ಕೈದಿಯೊಬ್ಬನನ್ನ  ಕೀಟಗಳು ಮತ್ತು ತಿಗಣೆಗಳು ಜೀವಂತ ಇರುವಂತೆ ತಿಂದು  ಮುಗಿಸಿವೆ ಎಂದು ಅವರ ಕುಟುಂಬದ ವಕೀಲರು ಆರೋಪಿಸಿದ್ದಾರೆ. 35 ವರ್ಷದ ಲಾಶಾನ್ ಥಾಂಪ್ಸನ್ ಎಂಬ ಕೈದಿಯೇ ಹೀಗೆ ದಾರುಣವಾಗಿ ಮೃತಪಟ್ಟವರು.

    MORE
    GALLERIES

  • 210

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಕಳೆದ ಬೇಸಿಗೆಯಲ್ಲಿ ಅಪರಾಧ ಪ್ರಕರಣವೊಂದರಲ್ಲಿ 35 ವರ್ಷದ ಲಾಶಾನ್ ಥಾಂಪ್ಸನ್ ಅನ್ನು ಬಂಧಿಸಲಾಗಿತ್ತು. ನಂತರ ಆತನನ್ನು ಫುಲ್ಟನ್ ಕೌಂಟಿ ಜೈಲಿ  ಕರೆದೊಯ್ಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಅಲ್ಲದೆ ಆತ ಮಾನಸಿಕ ಅಸ್ವಸ್ಥನಾಗಿದ್ದು, ಹೀಗಾಗಿ ಅವನನ್ನು ಮನೋವೈದ್ಯಕೀಯ ವಿಭಾಗದಲ್ಲಿ ಇರಿಸಲಾಗಿತ್ತು.

    MORE
    GALLERIES

  • 310

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಯುಎಸ್ ಎ ಟುಡೇ  ವರದಿಯ ಪ್ರಕಾರ, ಫುಲ್ಟನ್ ಕೌಂಟಿ ವೈದ್ಯಕೀಯ ಪರೀಕ್ಷಕರ ವರದಿಯಲ್ಲಿ ಹೇಳಿರುವಂತೆ  ಸೆಪ್ಟೆಂಬರ್  22 ರಂದು ಅಧಿಕಾರಿಗಳು ಆತನಿಂದ ಹೇಳಿಕೆ ಪಡೆದುಕೊಳ್ಳಲು ತೆರಳಿ ಕೂಗಿದ್ದಾರೆ. ಆದರೆ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಕ್ಷಣ ಸ್ಥಳೀಯ ಪೋಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಲಾಶಾನ್ ಥಾಂಪ್ಸನ್  ಜೀವನ್ಮರಣದ ಪರಿಸ್ಥಿತಿಯಲ್ಲಿದ್ದ ಎಂದು ತಿಳಿದುಬಂದಿದೆ.

    MORE
    GALLERIES

  • 410

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ನಂತರ ಥಾಂಪ್ಸನ್​ನನ್ನು ಉಳಿಸಲು ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ ಆತ ಬದುಕುಳಿಯಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ.  ಆದರೆ ಲಾಶಾನ್ ಥಾಂಪ್ಸನ್ ವಕೀಲರು ಹೇಳುವಂತೆ ಜಾರ್ಜಿಯಾದ ಫುಲ್ಟನ್ ಕೌಂಟಿ ಜೈಲು ಅವ್ಯವಸ್ಥೆಯ ಆಗರವಾಗಿತ್ತು, ಅಲ್ಲಿ ಕೀಟಗಳು ಮತ್ತು ತಿಗಣೆಗಳು  ಥಾಂಪ್ಸನ್​​ನನ್ನು ಜೀವಂತವಾಗಿ ತಿಂದಿವೆ ಎಂದು ಆರೋಪಿಸಿದ್ದಾರೆ.

    MORE
    GALLERIES

  • 510

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಸಿಬ್ಬಂದಿ ಲಾಶಾನ್ ಥಾಂಪ್ಸನ್​ರನ್ನ ಕೂಗಿದಾಗ  ಜೈಲು ಕೋಣೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದಾಗಿ ಸ್ಥಳೀಯ ಪೊಲೀಸ್ ಮತ್ತು ಅಗ್ನಿಶಾಮಕ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು.  ಲಾಶಾನ್ ಜೀವ ಉಳಿಸುವ ಪ್ರಯತ್ನಗಳು ನಡೆದವು. ಆದರೆ ಚಿಕಿತ್ಸೆ ವಿಫಲವಾಗಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.

    MORE
    GALLERIES

  • 610

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಇನ್ನು ಥಾಂಪ್ಸನ್ ಅವರ ಮೃತದೇಹದಲ್ಲಿ ಯಾವುದೇ ಅಪಘಾತ ಹಾಗೂ ಕಲೆ, ಗಾಯಗಳು ಕಂಡು ಬಂದಿಲ್ಲ. ಅವನ ಸಂಪೂರ್ಣ ದೇಹವು ಹಾಸಿಗೆಯಿಂದ ಕವರ್ ಮಾಡಲಾಗಿತ್ತು. ಇನ್ನು ಆತನ ದೇಹದ ತುಂಬಾ ತಿಗಣೆಗಳು ಮುತ್ತಿರುವುದು ಕಂಡು ಬಂದಿತ್ತು ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

    MORE
    GALLERIES

  • 710

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಥಾಂಪ್ಸನ್ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ಆದರೆ ಥಾಂಪ್ಸನ್ ಕುಟುಂಬದ ವಕೀಲ ಮೈಕೆಲ್ ಡಿ. ಹಾರ್ಪರ್, ಲಾಶಾನ್​ನ್ನು ಕೊಳಕು ತುಂಬಿದ ಕೋಣೆಯಲ್ಲಿ ಇರಿಸಲಾಗಿತ್ತು. ಹಾಗಾಗಿ ಆತ ಮಲಗುತ್ತಿದ್ದ ಹಾಸಿಗೆಯಲ್ಲಿ ಕೀಟಗಳು, ತಿಗಣೆಗಳು ಹೆಚ್ಚಾಗಿ, ಮೂರು ತಿಂಗಳ ನಂತರ ಕೀಟಗಳಿಂದ ಜೀವಂತವಾಗಿ ತಿನ್ನಲ್ಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

    MORE
    GALLERIES

  • 810

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಮರಣೋತ್ತರ ಪರೀಕ್ಷಾ ವರದಿ ಸಹ ಅವರ ದೇಹದಲ್ಲಿ ಗಾಯಗಳಿಲ್ಲ ಹಾಗೂ ರೋಗ ಲಕ್ಷಣಗಳೂ ಇರಲಿಲ್ಲ ಎಂಬುದನ್ನು ತಿಳಿಸಿದೆ. ಫುಲ್ಟನ್ ಕೌಂಟಿ ಜೈಲಿನ ಅನೈರ್ಮಲ್ಯ ಪರಿಸ್ಥಿತಿಯೇ ಥಾಂಪ್ಸನ್ ಸಾವಿಗೆ ಕಾರಣ. ಜೈಲಿನ ಕೊಠಡಿಗಳ ಶುಚಿತ್ವ ಗಮನಿಸಿದರೂ ಯಾರೊಬ್ಬರೂ ಸಹಾಯ ಮಾಡಿಲ್ಲ. ಜೈಲಿನೊಳಗೆ ತೆಗೆದ ಚಿತ್ರಗಳನ್ನು ನೋಡಿದ್ರೆ ಎಷ್ಟು ಕೊಳಕು ತುಂಬಿಕೊಂಡಿತ್ತು ಅನ್ನೋದು ಅರ್ಥವಾಗುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    MORE
    GALLERIES

  • 910

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಉನ್ನತ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಎಲ್ಲಾ ಕೈದಿಗಳಿಗೂ ಹಾಸಿಗೆ ಹಾಗೂ ಇತರ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಅದಕ್ಕಾಗಿ 5 ಲಕ್ಷ ಡಾಲರ್ (ಸುಮಾರು 4 ಕೋಟಿ ರೂ) ಗಳನ್ನ ಮಂಜೂರು ಮಾಡಲಾಗಿದೆ ಎಂದು ತಿಳಿದುಬಂದಿದೆ.

    MORE
    GALLERIES

  • 1010

    Shocking News: ಜೈಲಿನಲ್ಲಿದ್ದ ಕೈದಿಯನ್ನ ಜೀವಂತವಾಗಿ ತಿಂದ ಕೀಟ, ತಿಗಣೆಗಳು! ಮೂರು ತಿಂಗಳು ನರಳಾಡಿ ಸತ್ತ ದುರ್ದೈವಿ!

    ಈ ಬಗ್ಗೆ ಪ್ರತಿಕ್ರಿಯಿಸಿದರು ವೈದ್ಯರು ಹಾಸಿಗೆಯಲ್ಲಿರುವ ಕೀಟಗಳು ಕಚ್ಚುವುದರಿಂದ ಮರಣ ಸಂಭವಿಸುವುದಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೀಟಗಳು ಅಥವಾ ತಿಗಣೆಗಳು ಮುತ್ತಿಕೊಂಡಾಗ, ಅದೇ ಸ್ಥಿತಿಯಲ್ಲಿ ದೀರ್ಘಕಾಲದ ವರೆಗೆ ಮುಂದುವರಿದರೇ ರಕ್ತಹೀನತೆ ಉಂಟಾಗುತ್ತದೆ. ಕಾಲಮಿತಿಯಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸುತ್ತದೆ ತಿಳಿಸಿದ್ದಾರೆ.

    MORE
    GALLERIES