Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

ತೆಲುಗಿನ ಹೀರೋ ಸಾಯಿ ಧರ್ಮತೇಜ್ ಅವರ ಚಿತ್ರಲಹರಿ ಸಿನಿಮಾ ನೋಡಿದ್ದೀರಾ. ಆ ಸಿನಿಮಾದಲ್ಲಿ ಹೀರೋ ರಸ್ತೆ ಅಪಘಾತವಾದಾಗ ಸಂತ್ರಸ್ತರ ಕುಟುಂಬಸ್ಥರು, ಪೊಲೀಸರು, ಆ್ಯಂಬುಲೆನ್ಸ್ ಸ್ವಯಂಚಾಲಿತವಾಗಿ ಘಟನಾ ಸ್ಥಳಕ್ಕೆ ತಲುಪಲು ಸಿಗ್ನಲ್​ ನೀಡುವಂತಹ ಆ್ಯಪ್​ ತಯಾರಿಸುತ್ತಾನೆ. ಅದೊಂದು ಸಿನಿಮಾ, ಆದರೆ ಇಲ್ಕೊಬ್ಬ ವ್ಯಕ್ತಿ ನಿಜವಾಗಿ ಅಂತಹದ್ದೇ ಸಾಧನೆ ಮಾಡಿ ಸಾಧನವೊಂದನ್ನು ಕಂಡುಹಿಡಿದ್ದಾರೆ.

First published:

  • 18

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ತೆಲುಗಿನ ಹೀರೋ ಸಾಯಿ ಧರ್ಮತೇಜ್ ಅವರ ಚಿತ್ರಲಹರಿ ಸಿನಿಮಾ ನೋಡಿದ್ದೀರಾ. ಆ ಸಿನಿಮಾದಲ್ಲಿ ಹೀರೋ ರಸ್ತೆ ಅಪಘಾತವಾದಾಗ ಸಂತ್ರಸ್ತರ ಕುಟುಂಬಸ್ಥರು, ಪೊಲೀಸರು, ಆ್ಯಂಬುಲೆನ್ಸ್ ಸ್ವಯಂಚಾಲಿತವಾಗಿ ಘಟನಾ ಸ್ಥಳಕ್ಕೆ ತಲುಪಲು ಸಿಗ್ನಲ್​ ನೀಡುವಂತಹ ಆ್ಯಪ್​ ತಯಾರಿಸುತ್ತಾನೆ. ಅದೊಂದು ಸಿನಿಮಾ, ಆದರೆ ಇಲ್ಕೊಬ್ಬ ವ್ಯಕ್ತಿ ನಿಜವಾಗಿ ಅಂತಹದ್ದೇ ಸಾಧನೆ ಮಾಡಿ ಸಾಧನವೊಂದನ್ನು ಕಂಡುಹಿಡಿದ್ದಾರೆ.

    MORE
    GALLERIES

  • 28

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ಮಹಾರಾಷ್ಟ್ರದ ಜಲ್ನಾದ ಯುವಕ ಈ ಆ್ಯಕ್ಸಿಡೆಂಟ್​ ಅಲರ್ಟ್​ ಸೆನ್ಸಾರ್​ ಅನ್ನು ತಯಾರಿಸಿದ್ದಾನೆ. ಈತನ ಸಾಧನೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

    MORE
    GALLERIES

  • 38

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ಅಪಘಾತದ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸಲು ಜಲ್ನಾದ ಯುವಕ ಹೊಸ ಟೆಕ್ನಿಕ್​ ಕಂಡುಹಿಡಿದಿದ್ದಾನೆ. ಅಪಘಾತದ ನಂತರ, ತಕ್ಷಣವೇ ಪೊಲೀಸರಿಗೆ, ಚಾಲಕನ ಕುಟುಂಬ ಸದಸ್ಯರಿಗೆ ಕರೆ ಹೋಗುವಂತೆ ಹಾಗೂ ಅಪಘಾತ ಸಂಭವಿಸಿದ ಸ್ಥಳದ ವಿವರಗಳನ್ನು ತಲುಪುವಂತಹ ತಂತ್ರಜ್ಞಾನವನ್ನು ತಯಾರು ಮಾಡಿದ್ದಾನೆ.

    MORE
    GALLERIES

  • 48

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ಅಂಬಾಡ್ ತಾಲೂಕಿನ ದೂದ್​ಪುರಿ ಗ್ರಾಮದ ರಾಜೇಂದ್ರ ಪಚ್‌ಫುಲೆ ಎಂಬ ಯುವಕ ಅಪಾಯದ ಎಚ್ಚರಿಕೆ ಸೆನ್ಸಾರ್​ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಚಿಕ್ಕ ಯಂತ್ರದಲ್ಲಿ ಪೊಲೀಸರು ಹಾಗೂ ಕುಟುಂಬದ ಸದಸ್ಯರ ಸಂಖ್ಯೆಗಳನ್ನು ಕೋಡ್ ಮಾಡಿದ್ದಾನೆ.

    MORE
    GALLERIES

  • 58

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ಆ ಸೆನ್ಸಾರ್ ಸಾಧನವನ್ನು ವಾಹನಕ್ಕೆ ಜೋಡಿಸುತ್ತಾನೆ. ಅಪಘಾತವಾದ ತಕ್ಷಣ ಮಷಿನ್​ನಲ್ಲಿ ಕೋಡ್ ಮಾಡಿರುವ ಮೊಬೈಲ್ ಗಳಿಗೆ ಎಚ್ಚರಿಕೆ ಸಂದೇಶ ಹೋಗುತ್ತದೆ. ಇದರಿಂದ ಪೊಲೀಸರು, ಆಂಬ್ಯುಲೆನ್ಸ್ ಹಾಗೂ ಕುಟುಂಬಸ್ಥರು ಕೂಡಲೇ ತೆರಳಿ ಸಂತ್ರಸ್ತರನ್ನು ಅಪಾಯದಿಂದ ಪಾರು ಮಾಡಬಹುದು.

    MORE
    GALLERIES

  • 68

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ಜಲ್ನಾ ಜಿಲ್ಲೆಯ ದೂದ್​ಪುರಿ ಗ್ರಾಮದ ರಾಜೇಂದ್ರ ಪಚ್‌ಫುಲೆ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ, ಎರಡು ಎಕರೆ ಜಮೀನಿನಲ್ಲಿ ತಾಯಿ-ತಂದೆ ಕಷ್ಟಪಟ್ಟು ದುಡಿದು ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದಾರೆ.

    MORE
    GALLERIES

  • 78

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ಹಣಕಾಸಿನ ಸಮಸ್ಯೆಯಿಂದ ಪರದಾಡುತ್ತಲೇ ರಾಜೇಂದ್ರ, 3 ತಿಂಗಳ ಕೌಶಲ್ಯಾಭಿವೃದ್ಧಿ ಕೋರ್ಸ್ ಮಾಡಿದ್ದರು. ಆ ನಂತರ ಈ ಆಲೋಚನೆ ಬಂದು, ಆ್ಯಕ್ಸಿಡೆಂಟ್ ಅಲರ್ಟ್ ಸೆನ್ಸಾರ್ ತಯಾರಿಸಿದ್ದಾರೆ.

    MORE
    GALLERIES

  • 88

    Farmer: ವಾಹನಗಳಿಗೆ ಆ್ಯಕ್ಸಿಡೆಂಟ್​ ಸೆನ್ಸಾರ್ ಕಂಡು ಹಿಡಿದ ರೈತನ ಮಗ! ಯುವಕನ ಸಾಧನೆಗೆ ಬಹುಪರಾಕ್

    ದೇಶದ ರಸ್ತೆಗಳಲ್ಲಿ ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಅನೇಕ ಅಪಘಾತಗಳಲ್ಲಿ ಅಧಿಕಾರಿಗಳು ತಕ್ಷಣ ಮಾಹಿತಿ ಹೋಗುತ್ತಿಲ್ಲಇದರಿಂದ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಈ ಚಿಕ್ಕ ಸಾಧನವು ಅಂತಹ ಅಮಾಯಕ ಜೀವವನ್ನು ಉಳಿಸುತ್ತದೆ. ಇದಕ್ಕೆ ಪೇಟೆಂಟ್ ಪಡೆದಿರುವ ರಾಜೇಂದ್ರ ಸದ್ಯದಲ್ಲೇ ಮತ್ತಷ್ಟು ಅಭಿವೃದ್ಧಿಪಡಿಸಲು ಸಿದ್ಧವಾಗುತ್ತಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.

    MORE
    GALLERIES