Cabinet Reshuffle: ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಸಂಪುಟ ಪುನರ್​ರಚನೆ! ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್​ ರಿಜಿಜು

ಪ್ರಧಾನ ಮಂತ್ರಿ ನೇತೃತ್ವದ ಕೇಂದ್ರ ಸರ್ಕಾರದ ಕ್ಯಾಬಿನೆಟ್​ ಸಚಿವಾಲಯದಲ್ಲಿ ಪುನರ್​ ರಚನೆ ಮಾಡಲಾಗಿದ್ದು, ಕಿರಣ್ ರಿಜಿಜು ಅವರನ್ನು ಕೇಂದ್ರ ಕಾನೂನು ಸಚಿವ ಸ್ಥಾನದಿಂದ ತೆಗೆದುಹಾಕಲಾಗಿದ್ದು, ಅವರ ಸ್ಥಾನಕ್ಕೆ ಅರ್ಜುನ್​ ರಾಮ್ ಮೇಘವಾಲ್ ಅವರನ್ನು ನೇಮಿಸಲಾಗಿದೆ.

First published:

  • 15

    Cabinet Reshuffle: ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಸಂಪುಟ ಪುನರ್​ರಚನೆ! ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್​ ರಿಜಿಜು

    ರಿಜಿಜು ಕ್ಯಾಬಿನೆಟ್ ಸ್ಥಾನಮಾನದೊಂದಿಗೆ ಕಾನೂನು ಸಚಿವರಾದ ಒಂದೇ ವರ್ಷದಲ್ಲಿ ಭೂ ವಿಜ್ಞಾನ ಸಚಿವ ಸ್ಥಾನಕ್ಕೆ ನೇಮಕವಾಗಿದ್ದಾರೆ. ಈ ಬಗ್ಗೆ ರಾಷ್ಟ್ರಪತಿ ಭವನದ ಮೂಲಗಳು ಖಚಿತಪಡಿಸಿವೆ

    MORE
    GALLERIES

  • 25

    Cabinet Reshuffle: ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಸಂಪುಟ ಪುನರ್​ರಚನೆ! ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್​ ರಿಜಿಜು

    ಪ್ರಧಾನಿಯವರ ಸಲಹೆ ಉಲ್ಲೇಖಿಸಿ ರಾಷ್ಟ್ರಪತಿ ಭವನ ಗುರುವಾರ ಬೆಳಿಗ್ಗೆ ಈ ಸಚಿವರ ಖಾತೆಗಳ ಬದಲಾವಣೆಯನ್ನು ಪ್ರಕಟಿಸಿದೆ.

    MORE
    GALLERIES

  • 35

    Cabinet Reshuffle: ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಸಂಪುಟ ಪುನರ್​ರಚನೆ! ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್​ ರಿಜಿಜು

    ಅಲ್ಲದೆ ಕಿರಣ್​ ರಿಜಿಜು ಕೂಡ ಸ್ವಲ್ಪ ಸಮಯದ ನಂತರ ತಮ್ಮ ಟ್ವಿಟರ್ ಬಯೋದಲ್ಲಿ ಭೂ ವಿಜ್ಞಾನ ಸಚಿವ (Minister of Earth Sciences) ಬದಲಾಯಿಸಿದ್ದಾರೆ.

    MORE
    GALLERIES

  • 45

    Cabinet Reshuffle: ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಸಂಪುಟ ಪುನರ್​ರಚನೆ! ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್​ ರಿಜಿಜು

    ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಜಾರಿಯಲ್ಲಿ ಇರುವ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ನಿರಂತರ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದರು. ನ್ಯಾಯಮೂರ್ತಿಗಳ ನೇಮಕಕ್ಕೆ ಹೊಸ ವ್ಯವಸ್ಥೆಯೊಂದನ್ನು ರೂಪಿಸುವವರೆಗೆ ಪ್ರಕರಣಗಳು ಬಾಕಿ ಉಳಿಯುವ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅವರು ಹೇಳಿದ್ದರು.

    MORE
    GALLERIES

  • 55

    Cabinet Reshuffle: ಲೋಕಸಭಾ ಚುನಾವಣೆಗೆ ವರ್ಷ ಇರುವಾಗ ಸಂಪುಟ ಪುನರ್​ರಚನೆ! ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್​ ರಿಜಿಜು

    ನ್ಯಾಯಾಂಗ ಮತ್ತು ಕೊಲಿಜಿಯಂ ಬಗ್ಗೆ ನೀಡಲಾದ ಹೇಳಿಕೆಗಳ ಸಂಬಂಧ ರಿಜಿಜು ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯು ಪಾರದರ್ಶಕವಾಗಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ದೂರಿದ್ದರು. ಇದೀಗ ಈ ಮಧ್ಯೆಯೆ ಕೇಂದ್ರ ಸರ್ಕಾರ ಕ್ಯಾಬಿನೆಟ್‌ ಪುನರ್‌ರಚನೆ ಮಾಡಿದ್ದು, ಕಿರಣ್​ ರಿಜಿಜು ಅವರನ್ನು ಕಾನೂನು ಸಚಿವಸ್ಥಾನದಿಂದ ಬದಲಾಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.

    MORE
    GALLERIES