Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್​​ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?

ಸ್ಥಳೀಯರ ಪ್ರಕಾರ, ಹಿಂದಿನ ರಾತ್ರಿ ಮದುವೆಗೆ ಸಂಬಂಧಿಸಿದಂತೆ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಎರಡು ಗುಂಪುಗಳ ಜನರು ಹೊಡೆದಾಡಿಕೊಂಡರು. ಜೊತೆಗೆ ಇದು ಬಹಳ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

First published:

  • 16

    Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್​​ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?

    ಭಾನುವಾರ ಕೇರಳದ(Kerala) ಕಣ್ಣೂರಿನ(Kannur) ತೋಟದ ಎಂಬಲ್ಲಿ ಸಂಭವಿಸಿದ ಕಚ್ಚಾ ಬಾಂಬ್ ಸ್ಫೋಟದಲ್ಲಿ(Bomb Blast) ಯುವಕನೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ಕಣ್ಣೂರಿನ ಈಚೂರಿನ ನಿವಾಸಿ ದಿವಂಗತ ಮೋಹನನ್ ಅವರ ಪುತ್ರ ಜಿಷ್ಣು (26) ಎಂದು ಗುರುತಿಸಲಾಗಿದೆ.

    MORE
    GALLERIES

  • 26

    Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್​​ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?

    ಸ್ಫೋಟದಲ್ಲಿ ಹೇಮಂತ್ ಮತ್ತು ರಜಿಲೇಶ್ ಅನುರಾಗ್ ಎಂಬ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ(Hospital) ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    MORE
    GALLERIES

  • 36

    Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್​​ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?

    ಭಾನುವಾರ ತೋಟದ ಮದುವೆ ಮನೆಯೊಂದರ ಬಳಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳೀಯರ ಪ್ರಕಾರ, ಹಿಂದಿನ ರಾತ್ರಿ ಮದುವೆಗೆ ಸಂಬಂಧಿಸಿದಂತೆ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಎರಡು ಗುಂಪುಗಳ ಜನರು ಹೊಡೆದಾಡಿಕೊಂಡರು. ಜೊತೆಗೆ ಇದು ಬಹಳ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಸ್ಥಳೀಯರು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದ್ದರು.

    MORE
    GALLERIES

  • 46

    Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್​​ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?

    ಚಾಲತ್‌ನಲ್ಲಿರುವ ವಧುವಿನ ಮನೆಯಲ್ಲಿ ಮದುವೆ ನಡೆಯಿತು. ಮೃತ ಯುವಕ ತನ್ನ ಗೆಳೆಯರೊಂದಿಗೆ ಸ್ನೇಹಿತನ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ. ಆ ಮದುವೆಯಲ್ಲಿ ಸುಮಾರು 50 ಮಂದಿ ಭಾಗವಹಿಸಿದ್ದರು. ಮದುವೆ ಸಮಾರಂಭದ ಬಳಿಕ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    MORE
    GALLERIES

  • 56

    Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್​​ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?

    ಘಟನೆಯಲ್ಲಿ ಜಿಷ್ಣು ಎಂಬ ಯುವಕ ಸಾವನ್ನಪ್ಪಿದರೆ, ಕೆಲವರಿಗೆ ಗಾಯಗಳಾಗಿವೆ. ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿ ಕೆಲವು ಸ್ಥಳೀಯರನ್ನು ಬಂಧಿಸಿದ್ದಾರೆ. ಜಿಷ್ಣುವಿನ ಗುಂಪಿನಲ್ಲೇ ಯಾರೋ ಎಸೆದ ಬಾಂಬ್ ಆಕಸ್ಮಿವಾಗಿ ಆತನ ತಲೆಗೆ ಹೊಡೆದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ.

    MORE
    GALLERIES

  • 66

    Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್​​ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?

    ಸ್ಫೋಟದ ರಭಸಕ್ಕೆ ಜಿಷ್ಣುವಿನ ತಲೆ ಛಿದ್ರ-ಛಿದ್ರವಾಗಿತ್ತು. ಸ್ಥಳದಿಂದ ಸ್ಫೋಟಗೊಳ್ಳದ ಬಾಂಬ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಿಂದಿನ ದಿನದ ವಿವಾದಕ್ಕೆ ಪ್ರತೀಕಾರವಾಗಿ ಯುವಕರ ಗುಂಪು ಬಾಂಬ್‌ಗಳೊಂದಿಗೆ ಅಲ್ಲಿಗೆ ಬಂದಿತ್ತು ಎನ್ನಲಾಗಿದೆ.

    MORE
    GALLERIES