Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

Pawan Kalyan: ಜನ ಸೇನಾ ಪಕ್ಷದ ನಾಯಕ ಪವನ್​ ಕಲ್ಯಾಣ್ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್​ ಪಕ್ಷದ ಎಚ್​ಡಿ ಕುಮಾರಸ್ವಾಮಿ ಕಳೆದ ಚುನಾವಣೆಯಲ್ಲಿ ಸಿಎಂ ಆಗಿದ್ದನ್ನ ಹೈಲೈಟ್ ಮಾಡಿ ತಾವೂ ಸಿಎಂ ಆಕಾಂಕ್ಷಿ ಎಂಬುದನ್ನು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

First published:

  • 17

    Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

    ಜನ ಸೇನಾ ಮುಖ್ಯಸ್ಥ ಖ್ಯಾತ ತೆಲುಗು ನಟ ಪವನ್ ಕಲ್ಯಾಣ್ ತಮಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗುವ ಆಸೆಯಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಮೈತ್ರಿ ಮತ್ತು ಸಿಎಂ ಹುದ್ದೆಯ ಕುರಿತು ಪ್ರಮುಖ ಹೇಳಿಕೆ ನೀಡಿರುವ ಅವರು ಮುಂದಿನ  ಚುನಾವಣೆಯಲ್ಲಿ ನಮ್ಮ ಶಕ್ತಿ ಆಧರಿಸಿ ಸೀಟು ಕೇಳುತ್ತೇವೆ ಎಂದಿದ್ದಾರೆ.

    MORE
    GALLERIES

  • 27

    Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

    ಮೈತ್ರಿಯಿಂದ ಎಲ್ಲ ಪಕ್ಷಗಳೂ ಬಲಿಷ್ಠವಾಗಿವೆ. ಬಲಿಷ್ಠ ಪಕ್ಷಗಳು ಒಟ್ಟಾಗಿ ನಡೆಯಬೇಕು. ಬಿಜೆಪಿ ಮತ್ತು ಬಿಆರ್‌ಎಸ್ ಕೂಡ ಈ ರೀತಿ ಬಲಿಷ್ಠವಾಗಿದ್ದವು. ಆದರೆ ನಾನೂ ವೈಸಿಪಿ ವಿರೋಧಿ ಮತ ಒಡೆಯಲು ನಾನು ಬಿಡುವುದಿಲ್ಲ. ನಾನು ಆಳವಾದ ಚಿಂತನೆ ಮಾಡಿಯೇ ಮುಂದಿನ ಚುನಾವಣೆಗಾಗಿ ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇನೆ ಎಂದು ಪವರ್​ ಸ್ಟಾರ್ ತಿಳಿಸಿದ್ದಾರೆ.

    MORE
    GALLERIES

  • 37

    Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

    ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಖಚಿತ. ಮೈತ್ರಿ ವಿಚಾರದಲ್ಲಿ ನನ್ನ ನಿಲುವು ಬದಲಾಗಿಲ್ಲ ಎಂದು ಪವನ್ ಕಲ್ಯಾಣ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಷರತ್ತುಗಳನ್ನು ವಿಧಿಸಿ ಸಿಎಂ ಸ್ಥಾನ ಪಡೆಯಲು ಸಾಧ್ಯವಿಲ್ಲ. ಸಿಎಂ ಹುದ್ದೆ ಅದಾಗಿಯೇ ಬರಬೇಕು ಎಂದು ತಿಳಿಸಿದ್ದಾರೆ.

    MORE
    GALLERIES

  • 47

    Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

    'ಆದರೆ ಅದು ಬಯಸಿದರೆ ಅದು ಆಗುವುದಲ್ಲ, ಕಳೆದ ಚುನಾವಣೆಯಲ್ಲಿ ನಾವೇನಾದರೂ ಶೇ.30ರಷ್ಟು ಮತ ಪಡೆದಿದ್ದರೆ ಈಗ ನಾನು ಸಿಎಂ ರೇಸ್ ನಲ್ಲಿರುತ್ತಿದ್ದೆ ಎಂದಿರುವ ಪವನ್​ ಕರ್ನಾಟಕ ರಾಜಕೀಯವನ್ನು ಉದಾಹರಣೆಯಾಗಿ ನೀಡಿದ್ದಾರೆ. 2019ರಲ್ಲಿ ಕೇವಲ 30 ಸ್ಥಾನ ಗೆದ್ದಿದ್ದ ಜೆಡಿಎಸ್​ ನಾಯಕ ಕುಮಾರಸ್ವಾಮಿ ಕರ್ನಾಟಕ ಮುಖ್ಯಮಂತ್ರಿಯಾಗಿದ್ದರು. ನಮಗೂ 40 ಸ್ಥಾನ ಬಂದಿದ್ದರೆ ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತಿದ್ದೆ ಎಂದು ಪವನ್​ ಕಲ್ಯಾಣ್ ತಿಳಿಸಿದ್ದಾರೆ.

    MORE
    GALLERIES

  • 57

    Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

    ' ನಾನು ಮುಖ್ಯಮಂತ್ರಿ ಆಗಲು ಬುಯಸಿದರೆ, ಅದನ್ನು ಕೇಳುವುದಕ್ಕೆ ಎಂದಿಗೂ ಹಿಂಜರಿಯಲ್ಲ, ಅದರೆ ನನ್ನನ್ನು ಸಿಎಂ ಮಾಡಿ ಎಂದು ನಾನು ಬಿಜೆಪಿ ಅಥವಾ ಟಿಡಿಪಿಯನ್ನು ಕೇಳುವುದಿಲ್ಲ. ನಾನು ನನ್ನ ಶಕ್ತಿಯನ್ನು ತೋರಿಸಿ ನಂತರ ಅಧಿಕಾರವನ್ನು ಕೇಳುತ್ತೇನೆ. ಸದ್ಯಕ್ಕೆ ಈ ಬಾರಿ ಮೈತ್ರಿ ಮಾಡಿಕೊಂಡು ಮುನ್ನಡೆಯುತ್ತೇವೆ ' ಎಂದು ಪವನ್ ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 67

    Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

    ಅಗತ್ಯವಿದ್ದರೆ ಎಡ ಮತ್ತು ಬಲ ಪಕ್ಷಗಳೊಂದಿಗೆ ಸೇರಿ ಸ್ಪರ್ಧಿಸಲು ಬಯಸುವುದಾಗಿ ಪವನ್ ಹೇಳಿದ್ದಾರೆ. ರಾಜ್ಯದಲ್ಲಿ ತಮಗೆ ಶೇ.7ರಷ್ಟು ಮತಬ್ಯಾಂಕ್ ಇದೆ ಎಂದು ಪವನ್ ಹೇಳಿದ್ದಾರೆ. ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಬರಲಿದ್ದು, ತಾವೂ ಕೂಡ ಕ್ಷೇತ್ರಗಳಿಗೆ ಭೇಟಿ ನೀಡುವುದಾಹಿ ತಿಳಿಸಿದ್ದಾರೆ.

    MORE
    GALLERIES

  • 77

    Pawan Kalyan: ಪವನ್​ ಕಲ್ಯಾಣ್​ಗೂ ಎಚ್​ಡಿಕೆ ಸ್ಪೂರ್ತಿಯಂತೆ! ಕುಮಾರಣ್ಣನ ಬಗ್ಗೆ ಪವರ್​ಸ್ಟಾರ್ ಹೇಳಿದ್ದೇನು?

    2014 ರಲ್ಲಿ ಬಿಜೆಪಿ ಮತ್ತು ಟಿಡಿಪಿ ಜೊತೆಗಿನ ಮೈತ್ರಿ ನಂತರ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಪವನ್​ ಕಲ್ಯಾಣ್, ರಾಜ್ಯದ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮೈತ್ರಿ ಬಗ್ಗೆ ಜೆಎಸ್‌ಪಿ ನಿರ್ಧಾರ ತೆಗೆದುಕೊಳ್ಳುತ್ತದೆ. ಕಳೆದ ವರ್ಷದ ಚುನಾವಣೆಗೆ ಹೋಲಿಸಿದರೆ ಜೆಎಸ್‌ಪಿ ಸ್ಥಾನ ಬಲಗೊಂಡಿದೆ. 2019 ರಲ್ಲಿ ಜೆಎಸ್‌ಪಿ ಒಟ್ಟು 175 ರಲ್ಲಿ 137 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಿ ಶೇಕಡಾ 7 ರಷ್ಟು ಮತಗಳನ್ನು ಗಳಿಸಿದೆ ಎಂದು ತಿಳಿಸಿದರು.

    MORE
    GALLERIES