IT Raid: ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು

ಕಾನ್ಪುರದ (Kanpur) ಸುಗಂಧ ದ್ರವ್ಯ ಉದ್ಯಮಿಯ ಮನೆ ಕಂಪನಿ ಮೇಲೆ ಐಟಿ ಮತ್ತು ಜಿಎಸ್​ಟಿ (IT and GST) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯ ಕಪಾಟಿನಲ್ಲಿ ಕಂತೆ ಕಂತೆ ಹಣದ ಬಂಡಲ್​ ಕಂಡು ಅಧಿಕಾರಿಗಳು ದಿಗ್ಭ್ರಮೆಗೆ ಒಳಗಾದರು. ದಾಳಿ ವೇಳೆ ಸುಮಾರು 150 ಕೋಟಿಗೂ ಹೆಚ್ಚು ಹಣದ ಪತ್ತೆಯಾಗಿದ್ದು, ಇದನ್ನು ಹೊತ್ತೊಯ್ಯಲು ಕಂಟೆನರ್​ ಕರೆಸಲಾಗಿದೆ. ಐಟಿ ದಾಳಿ ವೇಳೆ ವಶಕ್ಕೆ ಪಡೆದ ಅತಿ ದೊಡ್ಡ ಮೊತ್ತ ಇದಾಗಿದೆ. ಸದ್ಯ ಯಾರನ್ನು ಬಂಧಿಸಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

First published:

  • 15

    IT Raid: ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು

    ಪಿಯೂಷ್​ ಜೈನ್ ಎಂಬ ಉದ್ಯಮಿ ಸಾವಿರಾರು ಕೋಟಿ ಹಣವನ್ನು ತೆರಿಗೆ ಕಟ್ಟದೇ ವಂಚಿಸಿದ್ದಾರೆ. ಇನ್ನು ಉದ್ಯಮಿಯ ಕಾನ್ಪುರ ಮನೆ ಕಚೇರಿ, ಕಾರ್ಖಾನೆ ಸೇರಿದಂತೆ ಕನೌಜ್​, ಮುಂಬೈ, ಗುಜರಾತ್​ ಮನೆ ಮೇಲೂ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮೊದಲು ಕಾನ್ಪುರದಲ್ಲಿಯೂ ಟ್ರಾನ್ಸ್‌ಪೋರ್ಟರ್ - M/s ಗಣಪತಿ ರೋಡ್ ಕ್ಯಾರಿಯರ್ಸ್ ಮಾಲೀಕತ್ವದ ಕಚೇರಿಗಳು ಮತ್ತು ಗೋಡೌನ್‌ಗಳ ಮೇಲೆ ದಾಳಿಗಳನ್ನು ನಡೆಸಲಾಯಿತು. ಬಳಿಕ ಪಿಯೂಷ್​ ಜೈನ್ ಅವರ ಮನೆ ಮೇಲೆ ದಾಳಿ ನಡೆಸಲಾಯಿತು

    MORE
    GALLERIES

  • 25

    IT Raid: ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು

    ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಸುಗಂಧ ದ್ರವ್ಯಗಳನ್ನು ಪೂರೈಸುತ್ತಿದ್ದ M/s ಓಡೋಕೆಮ್ ಇಂಡಸ್ಟ್ರೀಸ್ ಪಾಲುದಾರರ ವಸತಿ ಆವರಣವನ್ನು ಸಹ ಶೋಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 35

    IT Raid: ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು

    ಮನೆಯಲ್ಲಿ ಶೋಧ ನಡೆಸಿದಾಗ ಅಪಾರ ಪ್ರಮಾಣದ ಹಣ ಬಂಡಲ್​ನಲ್ಲಿ ಸುತ್ತಿರುವುದು ಪತ್ತೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಕಾನ್ಪುರ್) ಅಧಿಕಾರಿಗಳ ಸಹಾಯದಿಂದ ನಗದು ಎಣಿಕೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

    MORE
    GALLERIES

  • 45

    IT Raid: ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು

    ಸರಕು ಸಾಗಣೆದಾರರಿಂದ ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕುಗಳ ರವಾನೆಗೆ ಹಣವನ್ನು ಲಿಂಕ್​​ ಮಾಡಲಾಗಿದೆ. ತೆರಿಗೆ ತಪ್ಪಿಸಲು ನಕಲಿ ಇನ್‌ವಾಯ್ಸ್‌ಗಳ ಸಂಸ್ಥೆ ಸ್ಥಾಪನೆ ಮಾಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಜಿಎಸ್‌ಟಿ ಪಾವತಿಸದೆ ಸರಕು ಸಾಗಣೆಗೆ ಬಳಸಲಾಗಿದ್ದ 200ಕ್ಕೂ ಹೆಚ್ಚು ನಕಲಿ ಇನ್‌ವಾಯ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 1.01 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ

    MORE
    GALLERIES

  • 55

    IT Raid: ಉದ್ಯಮಿ ಮನೆಯಲ್ಲಿ 150 ಕೋಟಿ; ಹಣದ ರಾಶಿ ಕಂಡು ಸುಸ್ತಾದ ಅಧಿಕಾರಿಗಳು

    ಸದ್ಯ ಜಿಎಸ್‌ಟಿ ಕಾಯ್ದೆ ಕಲಂ 69ರನ್ವಯ ಉದ್ಯಮಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

    MORE
    GALLERIES