Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

Turkey Syria Earthquake: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ಇಡೀ ಜಗತ್ತನ್ನೇ ನಡುಗಿಸಿದೆ. ಎರಡೂ ನಗರಗಳಲ್ಲಿ ಭೂಕಂಪದಿಂ ನಾಶವಾಗಿರುವ ದೃಶ್ಯವಿದೆ ಕಾಣಸಿಗುತ್ತಿದೆ. ವರದಿಯ ಪ್ರಕಾರ ಭೂಕಂಪದ ಸಾವಿನ ಸಂಖ್ಯೆ 19,300 ಮೀರಿದೆ. ಅನೇಕ ದೇಶಗಳು ಟರ್ಕಿ ಮತ್ತು ಸಿರಿಯಾಕ್ಕೆ ಸಹಾಯಕ್ಕಾಗಿ ತಮ್ಮ ರಕ್ಷಣಾ ಪಡೆಗಳನ್ನು ಕಳುಹಿಸಿವೆ. 'ಆಪರೇಷನ್ ದೋಸ್ತ್' ಅಡಿಯಲ್ಲಿ ಭಾರತ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದೆ. ಇದಕ್ಕಾಗಿ ಎನ್‌ಡಿಆರ್‌ಎಫ್ ಮತ್ತು ಸೇನೆಯ ವಿಶೇಷ ತಂಡವನ್ನು ಕಳುಹಿಸಲಾಗಿದೆ.

First published:

  • 17

    Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

    ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪ ಇಡೀ ಜಗತ್ತನ್ನೇ ನಡುಗಿಸಿದೆ. ಎರಡೂ ನಗರಗಳಲ್ಲಿ ಭೂಕಂಪದಿಂ ನಾಶವಾಗಿರುವ ದೃಶ್ಯವಿದೆ ಕಾಣಸಿಗುತ್ತಿದೆ. ವರದಿಯ ಪ್ರಕಾರ ಭೂಕಂಪದ ಸಾವಿನ ಸಂಖ್ಯೆ 19,300 ಮೀರಿದೆ. ಅನೇಕ ದೇಶಗಳು ಟರ್ಕಿ ಮತ್ತು ಸಿರಿಯಾಕ್ಕೆ ಸಹಾಯಕ್ಕಾಗಿ ತಮ್ಮ ರಕ್ಷಣಾ ಪಡೆಗಳನ್ನು ಕಳುಹಿಸಿವೆ. 'ಆಪರೇಷನ್ ದೋಸ್ತ್' ಅಡಿಯಲ್ಲಿ ಭಾರತ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದೆ. ಇದಕ್ಕಾಗಿ ಎನ್‌ಡಿಆರ್‌ಎಫ್ ಮತ್ತು ಸೇನೆಯ ವಿಶೇಷ ತಂಡವನ್ನು ಕಳುಹಿಸಲಾಗಿದೆ.

    MORE
    GALLERIES

  • 27

    Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

    ಟರ್ಕಿಯಲ್ಲಿ ಭಾರತೀಯ ಸೇನೆಯು ವಿಪತ್ತು ಪರಿಹಾರ ಕ್ಯಾಂಪ್ ಮತ್ತು ಫೀಲ್ಡ್​ ಆಸ್ಪತ್ರೆಯನ್ನು ಸ್ಥಾಪಿಸಿದೆ. ರಕ್ಷಣಾ ಕಾರ್ಯದ ವೇಳೆ ಎಡಿಜಿ-ಪಿಐ ಗುರುವಾರ ಭೂಕಂಪ ಪೀಡಿತ ಮಹಿಳೆಯನ್ನು ತಬ್ಬಿಕೊಂಡಿರುವ ಭಾರತೀಯ ಸೇನೆಯ ಮಹಿಳಾ ಅಧಿಕಾರಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 37

    Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

    ಆಪರೇಷನ್ ದೋಸ್ತ್ ಕಾರ್ಯಾಚರಣೆ ಅಡಿಯಲ್ಲಿ ಸಿರಿಯಾ ಮತ್ತು ಟರ್ಕಿಗೆ ಭಾರತ ಸರ್ಕಾರ ಔಷಧಗಳು, ರಕ್ಷಣಾ ತಂಡಗಳು ಸೇರಿದಂತೆ ಸಾಧ್ಯವಾಗುವ ಎಲ್ಲಾ ನೆರವನ್ನು ನೀಡುತ್ತಿದೆ. ಭೂಕಂಪದಿಂದ ಧರೆಗುರುಳಿದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಭಾರತೀಯ ರಕ್ಷಣಾ ಪಡೆಗಳೂ ಕೈ ಜೋಡಿಸಲಿವೆ ಎಂದು ವಿದೇಶಾಂಗ ಸಚಿವ ಜೈ ಶಂಕರ್ ಹೇಳಿದ್ದಾರೆ

    MORE
    GALLERIES

  • 47

    Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

    ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಗಾಯಾಳುಗಳಿಗೆ ಸಹಾಯ ಮಾಡಲು ಸೇನೆಯು ಈಗ ಟರ್ಕಿಯಲ್ಲಿ ಭಾರತೀಯ ಸೇನೆ ಫೀಲ್ಡ್ ಆಸ್ಪತ್ರೆಯೊಂದಿಗೆ ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ತುರ್ತು ವಿಭಾಗಗಳನ್ನು ಸ್ಥಾಪಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 57

    Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

    ಭಾರತೀಯ ಸೇನೆ ಎಕ್ಸ್ ರೇ ಲ್ಯಾಬ್ ಮತ್ತು ಮೆಡಿಕಲ್ ಸ್ಟೋರ್ ಆರಂಭಿಸಿದೆ. ಜೊತೆಗೆ ಭೂಕಂಪ ಪೀಡಿತ ಜನರಿಗೆ ಪರಿಹಾರ ಒದಗಿಸಲು ತಂಡವು 24x7 ಕೆಲಸ ಮಾಡುತ್ತಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ.

    MORE
    GALLERIES

  • 67

    Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

    ಈಗಾಗಲೆ 6 ವಿಮಾನಗಳಲ್ಲಿ ಭಾರತೀಯ ಸೇನೆ ಪರಿಹಾರ ಸಾಮಗ್ರಿಗಳೊಂದಿಗೆ ಟರ್ಕಿಗೆ ತೆರಳಿದೆ. ಭಾರತೀಯ ಸೇನೆಯ ಟ್ರೆಂಡ್ ಅಧಿಕಾರಿಗಳು ಗಾಯಾಳುಗಳಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜೈಶಂಕರ್ ತಿಳಿಸಿದ್ದಾರೆ.

    MORE
    GALLERIES

  • 77

    Turkey Earthquake: ಟರ್ಕಿ ಭೂಕಂಪ ಪೀಡಿತರ ಪಾಲಿಗೆ ದೇವರಾದ ಭಾರತೀಯ ಸೈನಿಕರು! ಕೃತಜ್ಞತೆ ತಿಳಿಸಿದ ಸಂತ್ರಸ್ತರು

    ಟರ್ಕಿ ದೇಶದಲ್ಲಿ ಸುಮಾರು 8.5 ಕೋಟಿ ಜನಸಂಖ್ಯೆ ಇದೆ, ಆ ಪೈಕಿ 1.35 ಕೋಟಿ ಜನರು ಭೂಕಂಪದಿಂದ ಬಾಧಿತರಾಗಿದ್ದಾರೆ. ಪಶ್ಚಿಮದಲ್ಲಿ ಅದಾನದಿಂದ ಪೂರ್ವದ ದಿಯಾರ್‌ಬಕಿರ್‌ವರೆಗೆ ಸರಿಸುಮಾರು 450 ಕಿಮೀ (280 ಮೈಲುಗಳು) ವ್ಯಾಪಿಸಿರುವ ಪ್ರದೇಶದ ಜನರು ಬಾಧಿತರಾಗಿದ್ದಾರೆ ಎಂದು ಟರ್ಕಿಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    MORE
    GALLERIES