ಕಳೆದ ಬುಧವಾರ ಎಕೆಜಿ ನಗರದ ಗೋಪಾಲ್ ಮಿಸ್ತ್ರಿ ಚಾಲ್ನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಸುರೇಶ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಕೃತ್ಯವನ್ನು ಆರೋಪಿ ಒಪ್ಪಿಕೊಂಡಿರುವುದರಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
2/ 8
ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಆತನ ಮೂರು ವರ್ಷದ ಮಗು ಅಳುತ್ತಿತ್ತು. ಆದರೆ ಪತ್ನಿ ಮಗುವಿನೆಡೆಗೆ ಗಮನ ಕೊಡದೆ ಮೊಬೈಲ್ನಲ್ಲಿ ಚಾಟ್ನಲ್ಲಿ ಬ್ಯುಸಿಯಾಗಿದ್ದನ್ನು ಕಂಡು ಆತನಿಗೆ ಸಿಟ್ಟು ಬಂದಿದೆ.
3/ 8
ಈ ವೇಳೆ ಆತ ಹೆಂಡತಿಯ ಜೊತೆ ವಾದಕ್ಕಿಳಿದಿದ್ದು, ಮೊಬೈಲ್ ಸೈಡ್ಗಿಟ್ಟು ಮಗುವನ್ನು ಸಮಾಧಾನ ಮಾಡೋಕೆ ಆಗಲ್ವಾ ಎಂದೆಲ್ಲ ಬೈದಿದ್ದಾನೆ. ಆಗ ಇಬ್ಬರ ನಡುವೆ ಜಗಳ ತಾರಕಕ್ಕೇರಿದೆ.
4/ 8
ಜಗಳ ಜೋರಾದಾಗ ತಾಳ್ಮೆ ಕಳೆದುಕೊಂಡ ಸುರೇಶ್ ತನ್ನ ಕೈಲಿದ್ದ ಕೆಲಸದ ಕತ್ತರಿಯಿಂದ ಆಕೆಯ ಕುತ್ತಿಗೆಗೆ ತಿವಿದಿದ್ದಾನೆ. ಆಗ ಆಕೆ ಅಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾಳೆ.
5/ 8
ಕೂಡಲೇ ಆತ ನೆರೆಹೊರೆಯವರನ್ನು ಕರೆದಿದ್ದು, ತನ್ನ ಹೆಂಡತಿಗೆ ಆಕೆಯ ಗೆಳೆಯ ಕುತ್ತಿಗೆಗೆ ತಿವಿದು ಪರಾರಿಯಾಗಿದ್ದಾನೆ ಎಂದು ಕಥೆ ಕಟ್ಟಿದ್ದಾನೆ. ಬಳಿಕ ಸ್ಥಳೀಯರೆಲ್ಲ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆಕೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.
6/ 8
ಸುರೇಶ್ ಬಡಗಿ ಕೆಲಸ ಮಾಡ್ತಿರೋದ್ರಿಂದ ಪ್ರತಿದಿನ ತಡವಾಗಿ ರಾತ್ರಿ ಮನೆಗೆ ಬರುತ್ತಾನೆ. ಅವನು ಮನೆಯಲ್ಲಿ ಇಲ್ಲದ ವೇಳೆ ಆತನ ಸ್ನೇಹಿತ ಮನೆಗೆ ಬಂದು ಪತ್ನಿಯನ್ನು ಭೇಟಿಯಾಗಿ ಹೋಗುತ್ತಿದ್ದ ಎಂದು ನೆರೆಹೊರೆಯವರು ಆತನಿಗೆ ಈ ಹಿಂದೆಯೇ ಹಲವಾರು ಬಾರಿ ಹೇಳಿದ್ದರು.
7/ 8
ಮೊನ್ನೆಯೂ ಕೂಡ ಸುರೇಶ್ ಮನೆಗೆ ಬಂದಾಗ ಪತ್ನಿ ಫೋನ್ನಲ್ಲಿ ಬ್ಯುಸಿಯಾಗಿದ್ದನ್ನು ಕಂಡು ಫೋನ್ ಕಿತ್ತುಕೊಂಡಿದ್ದಾನೆ. ಆಗ ಆಕೆ ಗೆಳೆಯನ ಜೊತೆಯೇ ಮಾತನಾಡುತ್ತಿರುವುದು ತಿಳಿದು ಆತನಿಗೆ ಸಿಟ್ಟು ನೆತ್ತಿಗೇರಿದೆ.
8/ 8
ಘಟನೆ ಸಂಬಂಧ ಶಾಹುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಆಕೆಯ ಸ್ನೇಹಿತನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತ ಪತ್ನಿಯನ್ನು ಕೊಂದಾತನನ್ನು ಬಂಧಿಸಲಾಗಿದೆ.
First published:
18
Crime News: ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ಸರಸ ಸಲ್ಲಾಪ; ತಡರಾತ್ರಿ ಮನೆಗೆ ಬಂದ ಪತಿ ಮಾಡಿದ್ದೇ ಬೇರೆ!
ಕಳೆದ ಬುಧವಾರ ಎಕೆಜಿ ನಗರದ ಗೋಪಾಲ್ ಮಿಸ್ತ್ರಿ ಚಾಲ್ನಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಸುರೇಶ್ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಕೃತ್ಯವನ್ನು ಆರೋಪಿ ಒಪ್ಪಿಕೊಂಡಿರುವುದರಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
Crime News: ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ಸರಸ ಸಲ್ಲಾಪ; ತಡರಾತ್ರಿ ಮನೆಗೆ ಬಂದ ಪತಿ ಮಾಡಿದ್ದೇ ಬೇರೆ!
ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಆತನ ಮೂರು ವರ್ಷದ ಮಗು ಅಳುತ್ತಿತ್ತು. ಆದರೆ ಪತ್ನಿ ಮಗುವಿನೆಡೆಗೆ ಗಮನ ಕೊಡದೆ ಮೊಬೈಲ್ನಲ್ಲಿ ಚಾಟ್ನಲ್ಲಿ ಬ್ಯುಸಿಯಾಗಿದ್ದನ್ನು ಕಂಡು ಆತನಿಗೆ ಸಿಟ್ಟು ಬಂದಿದೆ.
Crime News: ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ಸರಸ ಸಲ್ಲಾಪ; ತಡರಾತ್ರಿ ಮನೆಗೆ ಬಂದ ಪತಿ ಮಾಡಿದ್ದೇ ಬೇರೆ!
ಕೂಡಲೇ ಆತ ನೆರೆಹೊರೆಯವರನ್ನು ಕರೆದಿದ್ದು, ತನ್ನ ಹೆಂಡತಿಗೆ ಆಕೆಯ ಗೆಳೆಯ ಕುತ್ತಿಗೆಗೆ ತಿವಿದು ಪರಾರಿಯಾಗಿದ್ದಾನೆ ಎಂದು ಕಥೆ ಕಟ್ಟಿದ್ದಾನೆ. ಬಳಿಕ ಸ್ಥಳೀಯರೆಲ್ಲ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆಕೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.
Crime News: ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ಸರಸ ಸಲ್ಲಾಪ; ತಡರಾತ್ರಿ ಮನೆಗೆ ಬಂದ ಪತಿ ಮಾಡಿದ್ದೇ ಬೇರೆ!
ಸುರೇಶ್ ಬಡಗಿ ಕೆಲಸ ಮಾಡ್ತಿರೋದ್ರಿಂದ ಪ್ರತಿದಿನ ತಡವಾಗಿ ರಾತ್ರಿ ಮನೆಗೆ ಬರುತ್ತಾನೆ. ಅವನು ಮನೆಯಲ್ಲಿ ಇಲ್ಲದ ವೇಳೆ ಆತನ ಸ್ನೇಹಿತ ಮನೆಗೆ ಬಂದು ಪತ್ನಿಯನ್ನು ಭೇಟಿಯಾಗಿ ಹೋಗುತ್ತಿದ್ದ ಎಂದು ನೆರೆಹೊರೆಯವರು ಆತನಿಗೆ ಈ ಹಿಂದೆಯೇ ಹಲವಾರು ಬಾರಿ ಹೇಳಿದ್ದರು.
Crime News: ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ಸರಸ ಸಲ್ಲಾಪ; ತಡರಾತ್ರಿ ಮನೆಗೆ ಬಂದ ಪತಿ ಮಾಡಿದ್ದೇ ಬೇರೆ!
ಮೊನ್ನೆಯೂ ಕೂಡ ಸುರೇಶ್ ಮನೆಗೆ ಬಂದಾಗ ಪತ್ನಿ ಫೋನ್ನಲ್ಲಿ ಬ್ಯುಸಿಯಾಗಿದ್ದನ್ನು ಕಂಡು ಫೋನ್ ಕಿತ್ತುಕೊಂಡಿದ್ದಾನೆ. ಆಗ ಆಕೆ ಗೆಳೆಯನ ಜೊತೆಯೇ ಮಾತನಾಡುತ್ತಿರುವುದು ತಿಳಿದು ಆತನಿಗೆ ಸಿಟ್ಟು ನೆತ್ತಿಗೇರಿದೆ.
Crime News: ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ಸರಸ ಸಲ್ಲಾಪ; ತಡರಾತ್ರಿ ಮನೆಗೆ ಬಂದ ಪತಿ ಮಾಡಿದ್ದೇ ಬೇರೆ!
ಘಟನೆ ಸಂಬಂಧ ಶಾಹುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಆಕೆಯ ಸ್ನೇಹಿತನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತ ಪತ್ನಿಯನ್ನು ಕೊಂದಾತನನ್ನು ಬಂಧಿಸಲಾಗಿದೆ.