ಘಟನೆಯಲ್ಲಿ 21 ವರ್ಷದ ವರ ಮೃತಪಟ್ಟಿದ್ದು, ವಧುವಿನ ಸ್ಥಿತಿ ಗಂಭೀರಗೊಂಡಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
2/ 7
ಇಂಧೋರ್ನ ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಮಂಗಳವಾರ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.
3/ 7
ಮದುವೆಯ ದಿನವೇ ಹಾಲ್ನಲ್ಲಿ ವಧು ವರನ ಮಧ್ಯೆ ಯಾವುದೋ ವಿಷಯಕ್ಕೆ ವಾಗ್ವಾದ ಸಂಭವಿಸಿದ್ದು, ಇದರಿಂದ ಕಂಗೆಟ್ಟ ವರ ನೇರವಾಗಿ ಹೋಗಿ ವಿಷ ಕುಡಿದಿದ್ದಾನೆ.
4/ 7
ಬಳಿಕ ಬಂದು ವಧುವಿಗೆ ‘ತಾನು ವಿಷ ಕುಡಿದಿದ್ದೇನೆ’ ಎಂದು ಹೇಳಿದ್ದು, ಇದರಿಂದ ಕಂಗೆಟ್ಟ ಆಕೆ ತಾನು ಕೂಡ ವಿಷ ಕುಡಿದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
5/ 7
ಮದುವೆಗೆ ಒತ್ತಡ ಇದ್ದಿದ್ದರಿಂದ ತಾನು ಉದ್ಯೋಗ ಪಡೆದುಕೊಂಡ ಮೇಲೆ ವಿವಾಹ ಆಗ್ತೀನಿ. ಹಾಗಾಗಿ ಎರಡು ವರ್ಷ ತನಗೆ ಕಾಲವಕಾಶ ಬೇಕು ಎಂದು ಕೇಳಿದ್ದ. ಇದೇ ವಿಚಾರವಾಗಿ ಆಗಾಗ ವಾಗ್ವಾದ ನಡೆಯುತ್ತಿತ್ತು.
6/ 7
ಈ ಮಧ್ಯೆ ಯುವತಿ ಆಗಾಗ ಆತನಿಗೆ ಮದುವೆ ಆಗುವಂತೆ ಒತ್ತಡ ಹೇರಿದ್ದು, ಇದೇ ವಿಷಯವಾಗಿ ಮದುವೆಯ ಹಾಲ್ನಲ್ಲಿ ಕೂಡ ಸಣ್ಣವಾಗಿ ಶುರುವಾದ ಜಗಳ ತಾರಕಕ್ಕೇರಿದೆ.
7/ 7
ಅವರಿಬ್ಬರೂ ಈ ದುಡುಕಿನ ನಿರ್ಧಾರ ಕೈಗೊಳ್ಳಲು ನಿಖರವಾದ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಧು ಚೇತರಿಸಿಕೊಂಡ ಬಳಿಕ ಆಕೆಯ ಹೇಳಿಕೆ ಪಡೆದುಕೊಳ್ಳಲಿದ್ದಾರೆ.
ಘಟನೆಯಲ್ಲಿ 21 ವರ್ಷದ ವರ ಮೃತಪಟ್ಟಿದ್ದು, ವಧುವಿನ ಸ್ಥಿತಿ ಗಂಭೀರಗೊಂಡಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮದುವೆಗೆ ಒತ್ತಡ ಇದ್ದಿದ್ದರಿಂದ ತಾನು ಉದ್ಯೋಗ ಪಡೆದುಕೊಂಡ ಮೇಲೆ ವಿವಾಹ ಆಗ್ತೀನಿ. ಹಾಗಾಗಿ ಎರಡು ವರ್ಷ ತನಗೆ ಕಾಲವಕಾಶ ಬೇಕು ಎಂದು ಕೇಳಿದ್ದ. ಇದೇ ವಿಚಾರವಾಗಿ ಆಗಾಗ ವಾಗ್ವಾದ ನಡೆಯುತ್ತಿತ್ತು.
ಅವರಿಬ್ಬರೂ ಈ ದುಡುಕಿನ ನಿರ್ಧಾರ ಕೈಗೊಳ್ಳಲು ನಿಖರವಾದ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಧು ಚೇತರಿಸಿಕೊಂಡ ಬಳಿಕ ಆಕೆಯ ಹೇಳಿಕೆ ಪಡೆದುಕೊಳ್ಳಲಿದ್ದಾರೆ.