ಗಣೇಶ ಹಬ್ಬಕ್ಕೆ ಪುಣೆಯ ಯರವಾಡ ಕೇಂದ್ರ ಕಾರಾಗೃಹದ ಕೈದಿಗಳು ಸುಂದರ ಕರಕುಶಲ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಜೈಲು ಉದ್ಯಮದ ಚಿಲ್ಲರೆ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಈ ವಿಗ್ರಹಗಳು ಹಲವು ಗ್ರಾಹಕರನ್ನು ಸೆಳೆಯುತ್ತಿವೆ.
ಜೈಲು ಅಧಿಕಾರಿಗಳ ಪ್ರಕಾರ, ಈ ಕೇಂದ್ರ ಕಾರಾಗೃಹದ ಕೈದಿಗಳು ಮಾರಾಟಕ್ಕಾಗಿ ಇರಿಸಲಾಗಿರುವ ಈ ವಿಗ್ರಹಗಳನ್ನು ಸಿದ್ಧಪಡಿಸಿರುವುದು ಇದೇ ಮೊದಲು.
ಇನ್ನೆರೆಡೇ ದಿನದಲ್ಲಿ ಗಣೇಶ ಹಬ್ಬ. ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ತಯಾರಿಸುವ ನಾಸಿಕ್ ಸೆಂಟ್ರಲ್ ಜೈಲಿನ ಕೈದಿಗಳಿಂದ ವಿಗ್ರಹಗಳನ್ನು ಸಿದ್ಧಪಡಿಸುವ ತರಬೇತಿಯನ್ನು ಕೈದಿಗಳಿಗೆ ನೀಡಲಾಗಿದೆ. (ಕೃಪೆ: ಎಎನ್ಐ)
2/ 8
ಯರವಾಡ ಜೈಲಿನಿಂದ 15 ಕೈದಿಗಳಿಗೆ ವಿಗ್ರಹ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗಿದೆ. ಮೇ ತಿಂಗಳಿನಿಂದ 200-250 ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸಿದ್ದಾರೆ. (ಕೃಪೆ: ಎಎನ್ಐ)
3/ 8
ಈ ವರ್ಷದ ಆಚರಣೆಯನ್ನು ಪರಿಸರ ಸ್ನೇಹಿ ಅಂಶವನ್ನಾಗಿ ಮಾಡುವ ಪ್ರತಿಜ್ಞೆಯ ದೃಷ್ಟಿಯಿಂದ ಈ ವಿಗ್ರಹಗಳನ್ನು 'ಶಾಡು' ಅಥವಾ ಮಣ್ಣಿನಿಂದ ಮಾಡಲಾಗಿದೆ. (ಕೃಪೆ: ಎಎನ್ಐ)
4/ 8
ಜೈಲು ಉದ್ಯಮದ ಚಿಲ್ಲರೆ ಅಂಗಡಿಯು ಕಳೆದ ಹಲವಾರು ವರ್ಷಗಳಿಂದ ಸೇವೆಯಲ್ಲಿದೆ. ಮತ್ತು ಇಲ್ಲಿನ ಉತ್ಪನ್ನಗಳಿಗೆ ಜನರಿಂದ ಉತ್ತಮ ಬೇಡಿಕೆಯಿದೆ ಎಂದು ಹೇಳಿದ್ದಾರೆ.
5/ 8
ಕೈದಿಗಳು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಮತ್ತು ಜನರು ಸಾಮಾನ್ಯವಾಗಿ ಅಂಗಡಿಗೆ ಬಂದು ಈ ವಸ್ತುಗಳನ್ನು ಖರೀದಿಸುತ್ತಾರೆ. ಈ ವರ್ಷ ವಿಗ್ರಹ ನಿರ್ಮಾಣದ ಬಗ್ಗೆ ಯೋಚಿಸಿದ್ದೇವೆ. ಕೈದಿಗಳು ಕಡಿಮೆ ಸಮಯದಲ್ಲಿ ಕಲೆಯನ್ನು ಕಲಿತು 250 ಕ್ಕೂ ಹೆಚ್ಚು ಸುಂದರವಾದ ಗಣೇಶನ ವಿಗ್ರಹಗಳನ್ನು ರಚಿಸಿದ್ದಾರೆ.
6/ 8
ಕೈದಿಗಳು ತಯಾರಿಸಿದ ಗಣೇಶ ಮೂರ್ತಿಗಳು 400 ರಿಂದ 15,000 ರೂ.ವರೆಗೆ ಲಭ್ಯವಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರು ಸಹ ಮೂರ್ತಿಗಳನ್ನು ಖರೀದಿ ಮಾಡುತ್ತಿದ್ದಾರೆ.
7/ 8
ವಿಗ್ರಹಗಳ ಹೊರತಾಗಿ, ಮರದ ಪೀಠೋಪಕರಣಗಳು, ಕಾರ್ಪೆಟ್ಗಳು, ಲಿನೆನ್ಗಳು, ಪಾದರಕ್ಷೆಗಳು, ಕಲಾಕೃತಿಗಳು ಮತ್ತು ಕೈದಿಗಳು ತಯಾರಿಸಿದ ಬಟ್ಟೆ ವಸ್ತುಗಳನ್ನು ಪ್ರದರ್ಶಿಸುತ್ತಾರೆ.
8/ 8
ನಾಸಿಕ್ ಸೆಂಟ್ರಲ್ ಜೈಲಿನಲ್ಲಿರುವ ಕೈದಿಗಳು ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಯರವಾಡ ಕೇಂದ್ರ ಕಾರಾಗೃಹವು ಈ ಯೋಜನೆಯನ್ನು ಪ್ರಾರಂಭಿಸಿದ್ದು, ನಾಸಿಕ್ ಜೈಲಿನಿಂದ ಇಬ್ಬರು ಕೈದಿ ಕಲಾವಿದರನ್ನು ನೇಮಿಸಿಕೊಂಡಿರುವುದು ಇದೇ ಮೊದಲು.
First published:
18
Ganesh Idols: ಜೈಲು ಕೈದಿಗಳಿಂದ ಜೀವ ಪಡೆದ ಗಣೇಶ!
ಇನ್ನೆರೆಡೇ ದಿನದಲ್ಲಿ ಗಣೇಶ ಹಬ್ಬ. ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ತಯಾರಿಸುವ ನಾಸಿಕ್ ಸೆಂಟ್ರಲ್ ಜೈಲಿನ ಕೈದಿಗಳಿಂದ ವಿಗ್ರಹಗಳನ್ನು ಸಿದ್ಧಪಡಿಸುವ ತರಬೇತಿಯನ್ನು ಕೈದಿಗಳಿಗೆ ನೀಡಲಾಗಿದೆ. (ಕೃಪೆ: ಎಎನ್ಐ)
ಕೈದಿಗಳು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಮತ್ತು ಜನರು ಸಾಮಾನ್ಯವಾಗಿ ಅಂಗಡಿಗೆ ಬಂದು ಈ ವಸ್ತುಗಳನ್ನು ಖರೀದಿಸುತ್ತಾರೆ. ಈ ವರ್ಷ ವಿಗ್ರಹ ನಿರ್ಮಾಣದ ಬಗ್ಗೆ ಯೋಚಿಸಿದ್ದೇವೆ. ಕೈದಿಗಳು ಕಡಿಮೆ ಸಮಯದಲ್ಲಿ ಕಲೆಯನ್ನು ಕಲಿತು 250 ಕ್ಕೂ ಹೆಚ್ಚು ಸುಂದರವಾದ ಗಣೇಶನ ವಿಗ್ರಹಗಳನ್ನು ರಚಿಸಿದ್ದಾರೆ.
ನಾಸಿಕ್ ಸೆಂಟ್ರಲ್ ಜೈಲಿನಲ್ಲಿರುವ ಕೈದಿಗಳು ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಯರವಾಡ ಕೇಂದ್ರ ಕಾರಾಗೃಹವು ಈ ಯೋಜನೆಯನ್ನು ಪ್ರಾರಂಭಿಸಿದ್ದು, ನಾಸಿಕ್ ಜೈಲಿನಿಂದ ಇಬ್ಬರು ಕೈದಿ ಕಲಾವಿದರನ್ನು ನೇಮಿಸಿಕೊಂಡಿರುವುದು ಇದೇ ಮೊದಲು.