Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

Gujarat: ಗುಜರಾತಿಗೆ ಸೇರಿದ ಶ್ರೀಮಂತ ಕುಟುಂಬವೊಂದು ತಮ್ಮ ಕೋಟ್ಯಂತರ ರೂಪಾಯಿಗಳ ಆಸ್ತಿಯನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದೆ. ಕುಟುಂಬದ ನಾಲ್ಕು ಸದಸ್ಯರು ಒಂದೇ ದಿನ ಒಂದೇ ಸಮಯದಲ್ಲಿ ದೀಕ್ಷೆ ಪಡೆಯಲು ಸಜ್ಜಾಗಿದ್ದಾರೆ.

First published:

  • 17

    Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಈ ಪ್ರಪಂಚದಲ್ಲಿ ಆರಾಮದಾಯಕವಾಗಿ ಬದುಕಲು ಹಣ ಸಂಪಾದಿಸಬೇಕು, ಆಸ್ತಿ ಸಂಪಾದಿಸಬೇಕು ಎಂದು ದುಡಿಯುವ ಮನೋಭಾವನೆ ಉಳ್ಳವರೇ ಹೆಚ್ಚಿದ್ದಾರೆ. ಪ್ರತಿಯೊಬ್ಬರ ಮನಸ್ಸಲ್ಲೂ ಹಣವನ್ನು ಗಳಿಸಿದರೆ ಜೀವನ ಸುಲಭ ಎಂದು ಅವರು ಭಾವಿಸುತ್ತಾರೆ. ಇದಕ್ಕಾಗಿ ಅವರು ಯಾವಾಗಲೂ ಶ್ರಮಿಸುತ್ತಿರುತ್ತಾರೆ.

    MORE
    GALLERIES

  • 27

    Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಆದರೆ ಗುಜರಾತಿನ ಭುಜ್​ಗೆ ಸೇರಿದ ಒಂದು ಜೈನ ಕುಟುಂಬ ಸಾಕಷ್ಟು ಸಿರಿ ಸಂಪತ್ತನ್ನು ಹೊಂದಿದೆ. ಹಲವು ಮನೆಗಳು ಸೇರಿದಂತೆ ಒಳ್ಳೆಯ ವ್ಯಾಪಾರ ನಡೆಸುತ್ತಿದ್ದಾರೆ. ಸಾಕಷ್ಟು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಕೂಡ ಸಂಪಾದಿಸಿದೆ. ಇಡೀ ಕುಟುಂಬ ಸಂತೋಷವಾಗಿದೆ. ಆದರೆ ಇದ್ಯಾವುದೂ ಅವರಿಗೆ ತೃಪ್ತಿ ನೀಡುತ್ತಿಲ್ಲವಂತೆ. ಆದ್ದರಿಂದಲೇ ತಮ್ಮ ಆಸ್ತಿ-ಪಾಸ್ತಿಯನ್ನೆಲ್ಲಾ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ.

    MORE
    GALLERIES

  • 37

    Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಭುಜ್‌ನ ವಗಡ ಪ್ರದೇಶದ ಪಿಯೂಷ್ ಕಾಂತಿಲಾಲ್ ಮೆಹ್ತಾ ಮತ್ತು ಪೂರ್ವಿಬೆನ್ ದಂಪತಿ ಹಾಗೂ ಅವರ ಮಕ್ಕಳಾದ ಮೇಘಕುಮಾರ ಸನ್ಯಾಸ ಧೀಕ್ಷೆ ಪಡೆಯಲು ಸಜ್ಜಾಗಿದ್ದಾರೆ. ಪಿಯೂಷ್ ಭುಜ್‌ನಲ್ಲಿ ರೆಡಿಮೇಡ್ ಬಟ್ಟೆಗಳ ಸಗಟು ವ್ಯಾಪಾರವನ್ನು ಹೊಂದಿದ್ದು, ಇದರ ವಾರ್ಷಿಕ ವಹಿವಾಟು ಸುಮಾರು ಕೋಟಿ ಗಟ್ಟಲೇ ಇದೆ.

    MORE
    GALLERIES

  • 47

    Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಇಷ್ಟು ಹಣವಿದ್ದರೂ ಕೂಡ ಅದೆಲ್ಲವನ್ನೂ ತೊರೆದು, ಇಡೀ ಕುಟುಂಬ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲಿದೆ. ಪಿಯೂಷ್ ಅವರ ಪತ್ನಿ ಪೂರ್ವಿಬೆನ್ ಅವರು ಮಹಾಸತಿ ಜಿ ಅವರ ಸಮ್ಮುಖದಲ್ಲಿ ಮೊದಲು ಈ ಆಲೋಚನೆ ಮಾಡಿದ್ದಾರೆ. ನಂತರ ಪತಿ ಮತ್ತು ಮಗನಿಗೆ ವಿಷಯ ತಿಳಿಸಿ ಅವರನ್ನು ಒಪ್ಪಿಸಿದ್ದಾರೆ.

    MORE
    GALLERIES

  • 57

    Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಪೂರ್ವಿಬೆನ್ ಅವರ ಸಹೋದರನ ಮಗ ಕೃಷ್ಣಕುಮಾರ್ ಕೂಡ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ನಾಲ್ವರೂ ಶೀಘ್ರದಲ್ಲೇ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಸನ್ಯಾಸತ್ವ ಬಯಸುವ ವ್ಯಕ್ತಿಗಳು ತಮ್ಮ ಎಲ್ಲಾ ಆಸ್ತಿಯನ್ನು ತ್ಯಜಿಸಬೇಕು. ಎಲ್ಲವನ್ನೂ ದಾನ ಮಾಡಬೇಕು. ಇವರೆಲ್ಲರೂ ಔಪಚಾರಿಕವಾಗಿ ಶ್ರೀ ಕೋಟಿ ಸ್ಥಾನವಾಸಿ ಜೈನ ಸಂಘದ ಆಶ್ರಯದಲ್ಲಿ ಭಗವತಿ ದೀಕ್ಷೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 67

    Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಈ ಸಂದರ್ಭದಲ್ಲಿ ಪಿಯೂಷ್ ಕುಟುಂಬಸ್ಥರು ತಮ್ಮ ಆಸ್ತಿಯನ್ನೆಲ್ಲ ದಾನ ಮಾಡಿ ಸನ್ಯಾಸ ದೀಕ್ಷೆ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಏರ್ಪಾಡು ಮಾಡುತ್ತಿದ್ದಾರೆ. ಅಜರಾಮರ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ನಾಲ್ವರು ಸನ್ಯಾಸ ಸ್ವೀಕರಿಸಲು ನಿರ್ಧರಿಸಿರುವುದು ಕ್ಷೇತ್ರದ ಜೈನ ಸಮುದಾಯದಲ್ಲಿ ಸಂತಸ ಮೂಡಿಸಿದೆ.

    MORE
    GALLERIES

  • 77

    Sanyasa Deeksha: ಕೋಟಿ ಕೋಟಿ ಆಸ್ತಿಯಿದ್ದರೂ ನಶ್ವರವಾಯ್ತು ಜೀವನ, ಹಣವನ್ನೆಲ್ಲಾ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ಪಡೆದ ಇಡೀ ಕುಟುಂಬ!

    ಇತ್ತೀಚೆಗಷ್ಟೇ ರಾಂವಾವ್ ಕುಟುಂಬದ 19 ಮಂದಿ ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದರು. ಹಾಗೆಯೇ ಹಲವು ವರ್ಷಗಳ ಹಿಂದೆ, ಇದೇ ಸಮುದಾಯದ ಎಂಟು ಜನ ಸಹೋದರಿಯರು ಕೂಡ ದೀಕ್ಷೆ ತೆಗೆದುಕೊಂಡಿದ್ದರು. ದೀಕ್ಷಾ ಕಾರ್ಯಕ್ರಮವನ್ನು ವೀಕ್ಷಿಸಲು ಜೈನ ಸನ್ಯಾಸಿಗಳು ಮತ್ತು ಇತರ ಜನರು ದೂರದ ಸ್ಥಳಗಳಿಂದ ಆಗಮಿಸಿದ್ದಾರೆ.

    MORE
    GALLERIES