Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

ಭಕ್ತರು ದೇವಸ್ಥಾನದ ಹುಂಡಿಯಲ್ಲಿ ತಮ್ಮ ಕೈಲಾದಷ್ಟು ಚಿನ್ನ, ಬೆಳ್ಳಿ, ನೋಟುಗಳು, ಆಭರಣಗಳು, ವಿದೇಶಿ ಕರೆನ್ಸಿಗಳನ್ನು ಹಾಕುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಮೈಮರೆತು ಮಂಗಳಸೂತ್ರವನ್ನೇ ಹಾಕಿದ್ದಾರೆ. ಮುಂದೇನಾಯ್ತು ಎಂಬುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.

First published:

  • 19

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ಪಳನಿ ಮುರುಗನ್ ದೇವಾಲಯವು ತಮಿಳುನಾಡಿನ ಪವಿತ್ರ 6 ಮುರುಗನ್ ದೇವಾಲಯಗಳಲ್ಲಿ ಒಂದಾಗಿದೆ. ಸಾವಿರಾರು ಭಕ್ತರು ಪ್ರತಿದಿನ ಬಂದು ಮುರುಗನ್ ದರ್ಶನವನ್ನು ಪಡೆಯುತ್ತಾರೆ.

    MORE
    GALLERIES

  • 29

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ಇದೇ ವೇಳೆ ಭಕ್ತರು ದೇವಸ್ಥಾನದ ಹುಂಡಿಯಲ್ಲಿ ತಮ್ಮ ಕೈಲಾದಷ್ಟು ದೇಣಿಗೆಯನ್ನು ಹುಂಡಿಲ್ಲಿ ಹಾಕುತ್ತಾರೆ. ಭಕ್ತಾಧಿಗಳು ಚಿನ್ನ, ಬೆಳ್ಳಿ, ಕರೆನ್ಸಿ  ನೋಟುಗಳು, ಆಭರಣಗಳು, ವಿದೇಶಿ ಕರೆನ್ಸಿಗಳನ್ನು  ಹುಂಡಿಯಲ್ಲಿ ಹಾಕುತ್ತಾರೆ. 

    MORE
    GALLERIES

  • 39

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ಕೇರಳದ ಅಲಪ್ಪುಳ ಜಿಲ್ಲೆಯಿಂದ ಮುರುಗನ್ ದೇವರ ದರ್ಶನಕ್ಕೆ ಸಂಗೀತಾ ಎಂಬ ಮಹಿಳೆ ಬಂದಿದ್ದರು. ದರ್ಶನದ ನಂತರ ತಾನು ಧರಿಸಿದ್ದ ತುಳಸಿ ಮಾಲೆಯನ್ನು ತೆಗೆದು ನೈವೇದ್ಯಕ್ಕೆ ಇಟ್ಟಿದ್ದ ಹುಂಡಿಗೆ ಹಾಕಿದರು. ಆದರೆ ಸ್ವಲ್ಪ ಸಮಯದ ನಂತರ ಆಕೆಗೆ ತನ್ನ ಮಂಗಳಸೂತ್ರ ಕಾಣೆಯಾಗಿದೆ ಎಂದು ಗೊತ್ತಾಗಿದೆ.

    MORE
    GALLERIES

  • 49

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ಹುಂಡಿಗೆ ತುಳಸಿ ಮಾಲೆಯನ್ನು ಅರ್ಪಿಸುವಾಗ ಆಕೆ ತನಗೆ ತಿಳಿಯದೆ ಅದರೊಂದಿಗೆ ತನ್ನ ಮಂಗಳಸೂತ್ರವನ್ನು ಹಾಕಿದ್ದಾಳೆ. ಇದರಿಂದ ಗಾಬರಿಗೊಂಡ ಸಂಗೀತಾ ದೇವಸ್ಥಾನದ ಅಧಿಕಾರಿಗಳ ಬಳಿ ತೆರಳಿ ನಡೆದ ವಿಷಯವನ್ನು ಪತ್ರದಲ್ಲಿ ಬರೆದು ಮಂಗಳಸೂತ್ರವನ್ನು ಮರಳಿ ಕೊಡುವಂತೆ ಮನವಿ ಮಾಡಿದ್ದಾರೆ.

    MORE
    GALLERIES

  • 59

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ತಾನು ಬಡ ಕುಟುಂಬಕ್ಕೆ ಸೇರಿದವಳು ಮತ್ತು ಮಂಗಳಸೂತ್ರವು ಸುಮಾರು 2 ಸವರನ್​ ಇದೆ. ಅದನ್ನು ತನಗೆ ಮತ್ತೆ ಮಾಡಿಸಿಕೊಳ್ಳುವಷ್ಟು ಶಕ್ತಿ ಇಲ್ಲ, ದಯವಿಟ್ಟು ಅದನ್ನು ನನಗೆ ಮರಳಿ ನೀಡುವಂತೆ ದೇವಸ್ಥಾನದ ಅಧಿಕಾರಿಗಳನ್ನು ವಿನಂತಿಸಿದ್ದಾರೆ.

    MORE
    GALLERIES

  • 69

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ಸಂಗೀತಾ ಅವರ ದೂರನ್ನು ಸ್ವೀಕರಿಸಿದ ದೇವಾಲಯದ ಅಧಿಕಾರಿಗಳು ಮೊದಲು ಸಂಗೀತಾ ಅವರ ಮಾತು ನಿಜವೇ ಎಂದು ಪರಿಶೀಲಿಸಿದ್ದಾರೆ. ಅದರಂತೆ ದೇವಸ್ಥಾನದ ಸಿಸಿಟಿವಿ ಕಣ್ಗಾವಲು ಕ್ಯಾಮೆರಾ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸಂಗೀತಾ ಹೇಳಿದ್ದು ನಿಜ ಎಂದು ತಿಳಿದುಬಂದಿದೆ.

    MORE
    GALLERIES

  • 79

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ಆದರೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸ್ಥಾಪನಾ ಭದ್ರತೆ ಮತ್ತು ಪಾವತಿಸಬೇಕಾದ ಖಾತೆ ಕಾಯ್ದೆ 1975ರ ಪ್ರಕಾರ ಹುಂಡಿಗೆ ಬಿದ್ದ ಯಾವುದೇ ವಸ್ತುವನ್ನು ಹಿಂದಿರುಗಿಸಲು ಸಾಧ್ಯವಿಲ್ಲದ ಕಾರಣ ಸಂಗೀತಾ ಅವರ ತಾಳಿ ಸರವನ್ನು ಹಿಂದಿರುಗಿಸಲು ದೇವಾಲಯದ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.

    MORE
    GALLERIES

  • 89

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ನಂತರ  ಪಳನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಮೋಹನ್ ಅವರಿಗೆ ಈ ಕುರಿತು ಮಾಹಿತಿ ನೀಡಿದಾಗ, ಸಂಗೀತಾ ಅವರ ಕುಟುಂಬದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ವಂತ ದುಡ್ಡಿನಿಂದ ತಾಳಿ ಸರ ನೀಡಲು ಅವರು ನಿರ್ಧರಿಸಿದ್ದಾರೆ.

    MORE
    GALLERIES

  • 99

    Temple: ದೇಗುಲದ ಹುಂಡಿಗೆ ಬಿತ್ತು ಮಹಿಳೆಯ ಬಂಗಾರದ ತಾಳಿ! ಬಡ ಭಕ್ತೆಯ ಕಣ್ಣೀರು ಕಂಡು ಆಡಳಿತ ಮಂಡಳಿ ಟ್ರಸ್ಟಿಯಿಂದ ಮಹತ್ಕಾರ್ಯ

    ಅದರಂತೆ 1.09 ಲಕ್ಷ ವೆಚ್ಚದಲ್ಲಿ 17.460 ಗ್ರಾಂ ತೂಕದ ಚಿನ್ನದ ಸರವನ್ನು ತಂದು ಆಕೆಗೆ ನೀಡಲಾಗಿದೆ. ದೇವಾಲಯದ ಅಧಿಕಾರಿಯ ಕರುಣಾಮಯಿ ಹೃದಯಕ್ಕೆ ಆ ಮಹಿಳೆ ಹಾಗೂ ನೆರೆದಿದ್ದ ಭಕ್ತರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಂತ ದುಡ್ಡಿನಲ್ಲಿ ಚಿನ್ನದ ಸರ ಕೊಟ್ಟ ಆಡಳಿತಾಧಿಕಾರಿಗೆ ಕೃತಜ್ಞತೆ ಸಲ್ಲಿಸಿದ ಭಕ್ತೆ ಸಂತೋಷದಿಂದ ಕೇರಳಕ್ಕೆ ಮರಳಿದ್ದಾರೆ.

    MORE
    GALLERIES