ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ ; ಶಾಲಾ ಮಕ್ಕಳು ಮತ್ತು ಜನರು ಮಾಸ್ಕ್ ಧರಿಸುವಂತೆ ಸಿಎಂ ಮನವಿ
ದೆಹಲಿ ದಟ್ಟ ವಾಯುಮಾಲಿನ್ಯದಿಂದ ಕೂಡಿದ್ದು, ಇಡೀ ನಗರ ಗ್ಯಾಸ್ ಚೇಂಬರ್ನಂತೆ ಆಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಶಾಲಾ ಮಕ್ಕಳು ಮತ್ತು ಜನರಿಗೆ ಮಾಸ್ಕ್ ಧರಿಸುವಂತೆ ಸಿಎಂ ಕೇಜ್ರೀವಾಲ್ಮನವಿ ಮಾಡಿದ್ದಾರೆ. ಹೊಗೆ ಕಡಿಮೆ ಮಾಡುವ ಉದ್ದೇಶದಿಂದ ಸಿಎಂ ಮತ್ತೊಮ್ಮೆ ಸಮ-ಬೆಸ ಸಂಖ್ಯೆ ಯೋಜನೆಗೆ ಚಾಲನೆ ನೀಡಿದ್ದು, ಇದು ಸೋಮವಾರದಿಂದ ನಗರದಲ್ಲಿ ಜಾರಿಯಾಗಲಿದೆ. ಸಮ- ಬೆಸ ಸಂಖ್ಯೆಗಳ ವಾಹನ ಚಾಲನೆಯಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಜ್ರಿವಾಲ್ ಮುಂದಾಗಿದ್ದಾರೆ. ಈ ಯೋಜನೆ ನ.15ರವರೆಗೆ ಚಾಲನೆಯಲ್ಲಿರಲಿದೆ.