Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

ತಿರುವೋಣಂ ದಿನದಂದು ಓಣಂ ಸದ್ಯವನ್ನು (ಓಣಂ ಊಟ) ತನ್ನ ಫ್ಲಾಟ್‌ಗೆ ವಿತರಿಸುವಂತೆ ಮುಂಗಡವಾಗ ಹಣ ನೀಡಿ ಬುಕ್ ಮಾಡಿದರೂ ರೆಸ್ಟೋರೆಂಟ್ ಡೆಲಿವೆರಿ ಮಾಡುವಲ್ಲಿ ವಿಫಲಗಾಗಿದೆ. ಈ ಕಾರಣಕ್ಕಾಗಿ ಕೇರಳದ ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ 40,000 ರೂಪಾಯಿಗಳನ್ನು ಪರಿಹಾರವನ್ನು ನೀಡುವಂತೆ ರೆಸ್ಟೋರೆಂಟ್‌ಗೆ ಸೂಚಿಸಿದೆ .

First published:

  • 17

    Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

    ತಿರುವೋಣಂ ದಿನದಂದು ಓಣಂ ಸದ್ಯವನ್ನು (ಓಣಂ ಊಟ) ತನ್ನ ಫ್ಲಾಟ್‌ಗೆ ವಿತರಿಸುವಂತೆ ಮುಂಗಡವಾಗ ಹಣ ನೀಡಿ ಬುಕ್ ಮಾಡಿದರೂ ರೆಸ್ಟೋರೆಂಟ್ ಡೆಲಿವೆರಿ ಮಾಡುವಲ್ಲಿ ವಿಫಲಗಾಗಿದೆ. ಈ ಕಾರಣಕ್ಕಾಗಿ ಕೇರಳದ ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ 40,000 ರೂಪಾಯಿಗಳನ್ನು ಪರಿಹಾರವನ್ನು ನೀಡುವಂತೆ ರೆಸ್ಟೋರೆಂಟ್‌ಗೆ ಸೂಚಿಸಿದೆ .

    MORE
    GALLERIES

  • 27

    Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

    ಪ್ರತಿಯೊಬ್ಬ ಮಲಯಾಳಿಗೂ ತಿರುವೋಣಂ ಸದ್ಯದ ಬಗ್ಗೆ ಭಾವನಾತ್ಮಕ ನಂಟು ಇರುತ್ತದೆ. 2021ರಲ್ಲಿ ಗ್ರಾಹಕರೊಬ್ಬರು ಐದು ಮಂದಿ ಅತಿಥಿಗಳನ್ನು ಆಹ್ವಾನಿಸಿ ಸದ್ಯಕ್ಕಾಗಿ(ಊಟ) ಬಹಳ ಸಮಯ ಕಾದಿದ್ದಾರೆ.

    MORE
    GALLERIES

  • 37

    Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

    ಬಿಂದ್ಯಾ ವಿ ಸುತಾನ್ ಎಂಬುವವರು ವಿಶೇಷ ಓಣಂ ಭೋಜನಕ್ಕಾಗಿ 1295 ರೂಪಾಯಿ ಮುಂಗಡ ಹಣ ನೀಡಿ ಆರ್ಡರ್ ಮಾಡಿದ್ದಾರೆ. ಆದರೆ ಬುಕ್ ಮಾಡಿ ನಂತರವೂ ರೆಸ್ಟೋರೆಂಟ್​ ಹಬ್ಬದ ಔತಣವನ್ನು ವಿತರಣೆ ಮಾಡಿಲ್ಲ.

    MORE
    GALLERIES

  • 47

    Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

    ಆ ದಿನ ಅತಿಥಿಗಳು ಮನೆಯಲ್ಲಿದ್ದರು. ಅದಕ್ಕಾಗಿಯೇ ಐದು ಊಟವನ್ನು ಮೊದಲೇ ಬುಕ್ ಮಾಡಲಾಗಿತ್ತು. ಆದರೆ ಸಮಯ ಕಳೆದರೂ ಸದ್ಯ ಬರದ ಕಾರಣ ರೆಸ್ಟೋರೆಂಟ್‌ಗೆ ಸಂಪರ್ಕಿಸಿದರೆ, ಅಂದು ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅತಿಥಿಗಳು ಊಟ ಮಾಡದೆ ಹೊರಡಬೇಕಾಯಿತು. ಇದರಿಂದ ತನಗೆ ಮುಜುಗರವಾಗಿದೆ ಎಂದು ಬಿಂದ್ಯಾ ಹೇಳಿದ್ದರು,

    MORE
    GALLERIES

  • 57

    Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

    ರೆಸ್ಟೋರೆಂಟ್ ಫ್ಲಾಟ್‌ಗೆ ಔತಣವನ್ನು ತಲುಪಿಸುವ ಭರವಸೆ ನೀಡಿತ್ತು. ಹಾಗಾಗಿ ನಾನು ಅತಿಥಿಗಳಿಗೆ ಆಹ್ವಾನ ನೀಡಿದ್ದೆ. ಆದರೆ ಸಕಾಲಕ್ಕೆ ಔತಣ ತಲುಪಿಸಲಿಲ್ಲ. ಇದರ ಬಗ್ಗೆ ರೆಸ್ಟೋರೆಂಟ್‌ಗೆ ತಿಳಿಸಿದಾಗ, ಅವರು ಸಂಜೆ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದರು. ಹಣವನ್ನು ಹಿಂದಿರುಗಿಸುವುದಾsಗಿ ತಿಳಿಸಿದರು. ಆದರೆ ಅತಿಥಿಗಳ ಮುಂದೆ ಮುಜುಗರವಾಗಿದ್ದಕ್ಕಾಗಿ ಪರಿಹಾರ ಪಡೆಯಲು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದಾರೆ.

    MORE
    GALLERIES

  • 67

    Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

    ಭೋಜನಕ್ಕಾಗಿ ಪಾವತಿಸಿದ ಹಣವನ್ನು ಮರುಪಾವತಿಸುವಂತೆ ಮತ್ತು ಸೇವೆಗಳ ಕೊರತೆ ಮತ್ತು ತಾನು ಪಟ್ಟ ಮಾನಸಿಕ ಸಂಕಟಕ್ಕಾಗಿ 50,000 ಪರಿಹಾರವನ್ನು ಕೋರಿ ಬಿಂದು ಗ್ರಾಹಕರ ನ್ಯಾಯಲಾಯದಲ್ಲಿ ಮನವಿ ಸಲ್ಲಿಸಿದ್ದರು.

    MORE
    GALLERIES

  • 77

    Consumer Court: ಮುಂಗಡ ಹಣ ನೀಡಿ ಬುಕ್ ಮಾಡಿಯೂ ಸಕಾಲಕ್ಕೆ ಬಾರದ ಓಣಂ ಊಟ! ರೆಸ್ಟೋರೆಂಟ್​ಗೆ 40 ಸಾವಿರ ದಂಡ!

    ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ರೆಸ್ಟೋರೆಂಟ್ ಸೇವೆಯಲ್ಲಿ ನ್ಯೂನತೆ ಕಂಡು ಬಂದಿದೆ ಎಂದು ನಿರ್ಣಯಿಸಿದೆ. ಹಾಗಾಗಿ ರೆಸ್ಟೋರೆಂಟ್‌ಗೆ ದೂರುದಾರರ ಭೋಜನಕ್ಕಾಗಿ ನೀಡಿದ್ದ 1,295 ಹಣವನ್ನು ಮರುಪಾವತಿ ಮಾಡಬೇಕು. ಸೇವೆಯಲ್ಲಿನ ಕೊರತೆ ಮತ್ತು ಮಾನಸಿಕ ಸಂಕಟಕ್ಕೆ ಪರಿಹಾರವಾಗಿ ಆಕೆಗೆ 40,000 ಹಾಗೂ ಕೋರ್ಟ್​ ವೆಚ್ಚವಾಗಿ 5,000 ರೂಪಾಯಿಯನ್ನು ಪಾವತಿಸುವಂತೆ ಆದೇಶ ನೀಡಿದೆ.

    MORE
    GALLERIES