ತಿರುಮಲ ತಿರುಪತಿ ದೇವಸ್ಥಾನದ ಪ್ರೋಟೋಕಾಲ್ ದರ್ಶನ ವ್ಯವಸ್ಥೆಗೆ ಸಂಬಂಧಿಸಿದ ಹಗರಣ ಭಾರೀ ಚರ್ಚೆಗೆ ಕಾರಣವಾಗಿದೆ. ತಿರುಮಲ ತಿರುಪತಿ ದೇವಸ್ಥಾನ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗ ಶುಕ್ರವಾರ ದರ್ಶನ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದಂತೆ ಪೂರ್ವ-ಪಶ್ಚಿಮ ಗೋದಾವರಿ ಶಿಕ್ಷಕ ಕ್ಷೇತ್ರದ ಎಂಎಲ್ಸಿ ಶೇಖ್ ಸಾಬ್ಜಿ ಮತ್ತು ಅವರ ಸಹೋದ್ಯೋಗಿಗಳನ್ನು ವಶಕ್ಕೆ ತೆಗೆದುಕೊಂಡಿದೆ. (ಸಾಂದರ್ಭಿಕ ಚಿತ್ರ)
ಸಿಕ್ಕಿ ಬಿದ್ದಿದ್ದು ಹೇಗೆ?
ಶುಕ್ರವಾರ ಮುಂಜಾನೆ ಎಂಎಲ್ಸಿ ಶೇಖ್ ಸಾಬ್ಜಿ ಇತರ ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಭಕ್ತರು ನೀಡಿದ್ದ ಆಧಾರ್ ಕಾರ್ಡ್ ನಕಲಿ ಎಂದು ಟಿಟಿಡಿ ಜಾಗೃತ ದಳ ಪತ್ತೆ ಮಾಡಿತ್ತು. ದರ್ಶನ ಟಿಕೆಟ್ಗೆ ಅರ್ಜಿ ಸಲ್ಲಿಸುವಾಗ ಸಂದರ್ಭದಲ್ಲಿ ಭಕ್ತರು ನೀಡಿದ್ದ ಆಧಾರ್ ಕಾರ್ಡ್ನಲ್ಲಿರುವ ವಿಳಾಸ ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ಸೇರಿದ್ದು ಎಂದು ತಿಳಿದು ಬಂದಿತ್ತು. (ಸಾಂದರ್ಭಿಕ ಚಿತ್ರ)
ಈ ವೇಳೆ ಸೆಕ್ಯುರಿಟಿ ವಿಂಗ್ ಭಕ್ತರನ್ನು ಪ್ರಶ್ನೆ ಮಾಡಿದಾಗ, 500 ರೂಪಾಯಿ ಮೌಲ್ಯದ ವಿಐಪಿ ದರ್ಶನ ಟಿಕೆಟ್ಗಾಗಿ ಎಂಎಲ್ಸಿ ಶೇಖ್ ಸಾಬ್ಜಿಗೆ 1 ಲಕ್ಷ ರೂಪಾಯಿ ನೀಡಿದ್ದಾಗಿ ಅವರು ತಿಳಿಸಿದ್ದರು. ದರ್ಶನ ಟಿಕೆಟ್ ಬ್ಲಾಕ್ ಮಾರ್ಕೆಟ್ ಮೂಲಕ ಮಾರಾಟ ಮಾಡಿ ಅವರಿಂದ ಪಡೆದ ಹಣ ಎಂಎಲ್ಸಿ ಕಾರು ಚಾಲಕನ ಬ್ಯಾಂಕ್ ಖಾತೆಗೆ ಸೇರಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)