ಯೋಧರು ಮಲಗಿದ್ದ ಸಮಯದಲ್ಲಿ ಸೇನಾ ಘಟಕಕ್ಕೆ ನುಗ್ಗಿದ ದುಷ್ಕರ್ಮಿಗಳು ನಾಲ್ವರು ಯೋಧರನ್ನು ಕೊಲೆ ಮಾಡಿದ್ದರು. ಘಟನೆಯಲ್ಲಿ ಸಾಗರ್ ಬನ್ನೆ (25), ಕಮಲೇಶ್ ಆರ್ (24), ಯೋಗೇಶ್ಕುಮಾರ್ ಜೆ (24) ಮತ್ತು ಸಂತೋಷ್ ಎಂ ನಾಗರಾಳ್ (25) ಎಂಬ ಸೈನಿಕರು ಪ್ರಾಣ ಕಳೆದುಕೊಂಡಿದ್ದರು.
2/ 7
ದುಃಖದ ಸಂಗತಿಯೆಂದರೆ ಮೃತ ಯೋಧರ ಪೈಕಿ ಸಂತೋಷ್ ಎಂ ನಾಗರಾಳ್ (25) ಅವರು ಕರ್ನಾಟಕದ ಬಾಗಲಕೋಟೆ ಮೂಲದವರು ಆಗಿದ್ದು, ಇವರು ನಾಲ್ಕು ವರ್ಷಗಳ ಹಿಂದಷ್ಟೇ ಸೇನೆಗೆ ಸೇರಿದ್ದರು.
3/ 7
ಬತಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಬುಧವಾರ ಬೆಳಗಿನ ಜಾವ 4.35ರ ಸುಮಾರಿಗೆ ಈ ಗುಂಡಿನ ದಾಳಿ ಘಟನೆ ನಡೆದಿದ್ದು, ಈ ವೇಳೆ ಸೇನಾ ಘಟಕದ ಬ್ಯಾರಕ್ನಲ್ಲಿ ಯೋಧರು ನಿದ್ರಿಸುತ್ತಿದ್ದರು ಎಂದು ತಿಳಿದು ಬಂದಿದೆ.
4/ 7
ಇದೀಗ ಗುಂಡಿನ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಬಟಿಂಡಾ ಪೊಲೀಸರು ಸೋಮವಾರ ಒಬ್ಬ ಸೈನಿಕನನ್ನು ಬಂಧಿಸಿದ್ದಾರೆ.
5/ 7
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದೀಗ ಆ ಪೈಕಿ ಓರ್ವನನ್ನು ಪೊಲೀಸರು ಬಂಧನ ಮಾಡಿದ್ದಾರೆ.
6/ 7
ಪೊಲೀಸರ ಮಾಹಿತಿ ಪ್ರಕಾರ ಆರೋಪಿಗಳು ಬಿಳಿ ಕುರ್ತಾ ಪೈಜಾಮಾ ಧರಿಸಿದ್ದರು ಮತ್ತು ಗುಂಡಿನ ದಾಳಿ ನಡೆದ ಸಮಯದಲ್ಲಿ ರೈಫಲ್ ಮತ್ತು ಕೊಡಲಿಯನ್ನು ಹಿಡಿದಿದ್ದರು ಎಂದು ವರದಿಯಾಗಿದೆ.
7/ 7
ಗುಂಡಿನ ದಾಳಿ ನಡೆದು ನಾಲ್ವರು ಯೋಧರು ಸಾವನ್ನಪ್ಪಿ ದಿನವೇ ಸ್ಥಳೀಯ ಪೊಲೀಸರು ಇದು ಉಗ್ರರ ದಾಳಿ ಅಲ್ಲ ಎಂದು ಹೇಳಿದ್ದರು. ಇದೀಗ ಪ್ರಕರಣದಲ್ಲಿ ಸೈನಿಕನನ್ನೇ ಬಂಧನ ಮಾಡಿದ್ದಾರೆ.
First published:
17
Army Jawan Arrested: 4 ಯೋಧರ ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಓರ್ವ ಸೈನಿಕನ ಬಂಧನ!
ಯೋಧರು ಮಲಗಿದ್ದ ಸಮಯದಲ್ಲಿ ಸೇನಾ ಘಟಕಕ್ಕೆ ನುಗ್ಗಿದ ದುಷ್ಕರ್ಮಿಗಳು ನಾಲ್ವರು ಯೋಧರನ್ನು ಕೊಲೆ ಮಾಡಿದ್ದರು. ಘಟನೆಯಲ್ಲಿ ಸಾಗರ್ ಬನ್ನೆ (25), ಕಮಲೇಶ್ ಆರ್ (24), ಯೋಗೇಶ್ಕುಮಾರ್ ಜೆ (24) ಮತ್ತು ಸಂತೋಷ್ ಎಂ ನಾಗರಾಳ್ (25) ಎಂಬ ಸೈನಿಕರು ಪ್ರಾಣ ಕಳೆದುಕೊಂಡಿದ್ದರು.
Army Jawan Arrested: 4 ಯೋಧರ ಗುಂಡಿಟ್ಟು ಕೊಂದ ಪ್ರಕರಣದಲ್ಲಿ ಓರ್ವ ಸೈನಿಕನ ಬಂಧನ!
ಬತಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಬುಧವಾರ ಬೆಳಗಿನ ಜಾವ 4.35ರ ಸುಮಾರಿಗೆ ಈ ಗುಂಡಿನ ದಾಳಿ ಘಟನೆ ನಡೆದಿದ್ದು, ಈ ವೇಳೆ ಸೇನಾ ಘಟಕದ ಬ್ಯಾರಕ್ನಲ್ಲಿ ಯೋಧರು ನಿದ್ರಿಸುತ್ತಿದ್ದರು ಎಂದು ತಿಳಿದು ಬಂದಿದೆ.