Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

ಇಂದೋರ್: ರಾಮನವಮಿಯ ದಿನವೇ ಅವಘಡ ಸಂಭವಿಸಿ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಂಭವಿಸಿದೆ. ಇಲ್ಲಿನ ಬೆಳೇಶ್ವರ ಮಹಾದೇವ ದೇವಾಲಯದ ನೀರಿನ ಟ್ಯಾಂಕ್‌ನ ಛಾವಣಿ ಕುಸಿದು ಈ ದುರ್ಘಟನೆ ಸಂಭವಿಸಿದೆ.

First published:

  • 17

    Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

    ಖಾಸಗಿ ಟ್ರಸ್ಟ್‌ನಿಂದ ನಿರ್ವಹಿಸಲ್ಪಡುವ ಈ ದೇವಾಲಯವು ಇಂದೋರ್‌ನ ಅತ್ಯಂತ ಹಳೆಯ ವಸತಿ ಕಾಲೋನಿಗಳಲ್ಲಿ ಒಂದಾದ ಸ್ನೇಹ್ ನಗರದಲ್ಲಿ ಇದ್ದು, 35ಕ್ಕೂ ಹೆಚ್ಚು ಜನರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ.

    MORE
    GALLERIES

  • 27

    Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

    ಈ ಹಿಂದೆಯೇ ಸ್ಥಳೀಯ ನಿವಾಸಿಗಳು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ಬೆಳೇಶ್ವರ ಮಹಾದೇವ ದೇವಾಲಯದ ಮೇಲ್ಛಾವಣಿ ಕುಸಿಯುವ ಬಗ್ಗೆ ಆತಂಕ ವ್ಯಕ್ತಪಡಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಆದರೆ ಪಾಲಿಕೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು ಎನ್ನಲಾಗಿದೆ.

    MORE
    GALLERIES

  • 37

    Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

    ರಾಮನವಮಿ ಹಿನ್ನೆಲೆ ನಿನ್ನೆ ದೇವಾಲಯದ ಮುಂಭಾಗದಲ್ಲಿರುವ ನೆಲ ಮಹಡಿಯ ನೀರಿನ ಟ್ಯಾಂಕ್‌ನ ಮೇಲ್ಭಾಗದಲ್ಲಿ ಹವನ ನಡೆಸಲಾಗಿತ್ತು. ಹೋಮ ಹವನದ ಬೆಂಕಿಯ ಬಿಸಿಗೆ ಟ್ಯಾಂಕ್‌ನ ಮೇಲ್ಛಾವಣಿ ಕುಸಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    MORE
    GALLERIES

  • 47

    Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

    ಅಂಡರ್‌ ಟ್ಯಾಂಕ್‌ನ ಕಾಂಕ್ರಿಟ್‌ ಚಪ್ಪಡಿಯ ಮೇಲೆ ಹವನ ಆಯೋಜನೆ ಮಾಡಿದ ಹಿನ್ನೆಲೆ 40-50 ಜನರು ಅದರ ಮೇಲೆ ನಿಂತಿದ್ದರು. ಆದರೆ ಆ ಚಪ್ಪಡಿಗೆ ಅಷ್ಟೊಂದು ಭಾರ ಹೊರುವ ಸಾಮರ್ಥ್ಯ ಇಲ್ಲದೇ ಇರುವುದರಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆ ಇದೆ.

    MORE
    GALLERIES

  • 57

    Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂದೋರ್ ಕಲೆಕ್ಟರ್ ಇಳಯರಾಜ ಟಿ, ‘ಒಟ್ಟು 35 ಜನರು ಸಾವನ್ನಪ್ಪಿದ್ದಾರೆ, ಒಬ್ಬರು ನಾಪತ್ತೆಯಾಗಿದ್ದಾರೆ ಮತ್ತು 14 ಜನರನ್ನು ರಕ್ಷಿಸಲಾಗಿದೆ. ಇಬ್ಬರು ಚಿಕಿತ್ಸೆ ಪಡೆದ ನಂತರ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಕಾಣೆಯಾದವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದಿದ್ದಾರೆ.

    MORE
    GALLERIES

  • 67

    Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

    ಘಟನೆ ಸಂಬಂಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಪರಿಹಾರ ಘೋಷಿಸಿದ್ದಾರೆ.

    MORE
    GALLERIES

  • 77

    Temple Tragedy: ರಾಮ ನವಮಿಯಂದೇ ದುರ್ಘಟನೆ! ದೇಗುಲದ ನೀರಿನ ಟ್ಯಾಂಕ್‌ನ ಮೇಲ್ಛಾವಣಿ ಕುಸಿದು 35 ಭಕ್ತರ ಸಾವು!

    ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರವು ತ್ವರಿತ ಗತಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುನ್ನಡೆಸುತ್ತಿದೆ. ಎಲ್ಲಾ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆಗಳು ಇವೆ ಎಂದು ಹೇಳಿದ್ದಾರೆ.

    MORE
    GALLERIES