Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

ಅಹಮದಾಬಾದ್: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಘಾನೇರ ತಾಲೂಕಿನ ಸುಮಾರು 54 ಗ್ರಾಮಗಳಲ್ಲಿರುವ ಅಂಜನಾ ಸಮುದಾಯದ ಜನರು ತಮ್ಮ ಸಮುದಾಯದ ಸುಧಾರಣೆಗಾಗಿ ಅವರು ಕೆಲವೊಂದು ನಿರ್ಣಯಗಳನ್ನು ಅಂಗೀಕರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

First published:

  • 18

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ಕಳೆದ ಭಾನುವಾರ ಘನೇರಾದಲ್ಲಿ ನಡೆದ 54 ಗ್ರಾಮಗಳ ಅಂಜನಾ ಸಮುದಾಯದ ಸಭೆಯಲ್ಲಿ ಸಮಾಜ ಸುಧಾರಣೆ ತರಲು 22 ಸುಧಾರಣಾ ನಿರ್ಣಯಗಳನ್ನು ಅಂಗೀಕರಿಸಿದ್ದು, ಇದೀಗ ಭಾರೀ ಸುದ್ದಿ ಆಗ್ತಿದೆ.

    MORE
    GALLERIES

  • 28

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ಬನಸ್ಕಾಂತ ಜಿಲ್ಲೆ ರಾಜಸ್ಥಾನದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದ್ದು, ಇಲ್ಲಿ ಅನೇಕ ಸಾಮಾಜಿಕ ಅನಿಷ್ಟಗಳು, ಮೂಢನಂಬಿಕೆಗಳು ಪ್ರಸ್ತುತ ಕಾಲದಲ್ಲೂ ಮುಂದುವರೆದುಕೊಂಡು ಬಂದಿದೆ. ಈ ಹಿನ್ನೆಲೆ ಅಂಜನಾ ಚೌಧರಿ ಸಮುದಾಯ ಕೂಡ ಬಲಿಯಾಗಿದ್ದು, ಈಗಾಗಲೇ ಕೆಲವೊಂದು ಸಾಮಾಜಿಕ ಪಿಡುಗುಗಳಿಂದ ಹೊರಬಂದಿದೆ.

    MORE
    GALLERIES

  • 38

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ಈ ಮಧ್ಯೆ ಇನ್ನೂ ಕೆಲವು ಸಾಮಾಜಿಕ ಅನಿಷ್ಠಗಳು ಮುಂದುವರೆದುಕೊಂಡು ಬಂದಿದ್ದು, ಇದರ ಮಧ್ಯೆಯೇ ಕೆಲವೊಂದು ಕಠಿಣ ನಿಯಮಗಳನ್ನು ರೂಪಿಸಲು ಅಂಜನಾ ಚೌಧರಿ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.

    MORE
    GALLERIES

  • 48

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ಅಲ್ಲದೆ, ಸಮುದಾಯದ ಸಭೆಯನ್ನು ಅಂಗೀಕರಿಸಿರುವ ಆದೇಶವನ್ನು ಧಿಕ್ಕರಿಸಿ ಪುನಃ ಅನಿಷ್ಠಗಳನ್ನು ಅನುಸರಿಸಿದರೆ ಅಂತಹವರಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

    MORE
    GALLERIES

  • 58

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ಇನ್ನು ಅಂಜನಾ ಚೌಧರಿ ಸಮುದಾಯ ಅಂಗೀಕರಿಸಿರುವ ಪ್ರಮುಖ ನಿರ್ಣಯಗಳ ಪೈಕಿ ಮುಖ್ಯವಾಗಿ ಯುವಕರು ಗಡ್ಡ ಬಿಟ್ಟರೂ 51000 ರೂಪಾಯಿ ದಂಡ ತೆರಬೇಕಾಗುತ್ತದೆ ಎನ್ನುವ ನಿಯಮವನ್ನು ತರಲಾಗಿದ್ದು, ಇದೀಗ ಈ ನಿರ್ಣಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

    MORE
    GALLERIES

  • 68

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ವಿಶೇಷ ಅಂದ್ರೆ ಅಂಜನಾ ಚೌಧರಿ ಸಮುದಾಯದ ಸಭೆಯಲ್ಲಿ ಯುವಕರೇ ಗಡ್ಡ ಬಿಡದಂತೆ ನಿಯಮ ರೂಪಿಸಬೇಕು ಎಂದು ಮನವಿ ಮಾಡಿದ್ದು, ಹೀಗಾಗಿ ಸಮುದಾಯದ ಮುಖಂಡರು ಯುವಕರ ಮನವಿಗೆ ಅಸ್ತು ಎಂದಿದೆ.

    MORE
    GALLERIES

  • 78

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ಇನ್ನುಳಿದಂತೆ ಸಮುದಾಯದಲ್ಲಿ ಸಾವು ಸಂಭವಿಸಿದರೆ 12 ಮತ್ತು 13ನೇ ದಿನ ಐಷಾರಾಮಿ ವಸ್ತುಗಳನ್ನು ಸೇವನೆ ಮಾಡಬಾರದು, ಔತಣಕೂಟಕ್ಕೆ ಅಡುಗೆ ಮಾಡುವವರನ್ನು ಕರೆಯಬಾರದು, ಮದುವೆಗಳಲ್ಲಿ ಡಿಜೆ ನಿಷೇಧಿಸಬೇಕು, ಹೋಟೆಲ್‌ಗಳಲ್ಲಿ ಹುಟ್ಟುಹಬ್ಬ ಆಚರಣೆ ನಿಷೇಧ, ಮದುವೆ ಸಮಾರಂಭದಲ್ಲಿ ಪಟಾಕಿಗಳ ಸೀಮಿತ ಬಳಕೆ, ಮದುವೆಗೆ ದುಬಾರಿ ಕಾರ್ಡ್‌ ಮುದ್ರಿಸಬಾರದು ಎಂದು ನಿಯಮ ರೂಪಿಸಲಾಗಿದೆ.

    MORE
    GALLERIES

  • 88

    Reform Resolutions: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ

    ಈ ಬಗ್ಗೆ ಸಭೆಯಲ್ಲಿ ಶಿಕಾರಪುರದ ಗಡಿಪತಿ ದಯಾರಾಮಜೀ ಮಹಾರಾಜ್ ಮಾತನಾಡಿ, ಹಿಂದೂ ಧರ್ಮದಲ್ಲಿ ಸಂತರು ಮತ್ತು ಸಾಧುಸಂತರು ಮಾತ್ರ ಗಡ್ಡ ಬಿಡಬೇಕಾಗಿದ್ದು, ಸಮಾಜದ ಯುವಕರು ಗಡ್ಡ ಬಿಟ್ಟರೆ ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ಅವರು ಗಡ್ಡ ಬೆಳೆಸಬಾರದು. ಹೀಗಾಗಿ ಗಡ್ಡ ಬಿಟ್ಟು ಓಡಾಡುವ ಯುವಕರ ವಿರುದ್ಧ ಎಚ್ಚರಿಕೆ ನೀಡಿ ಅವರನ್ನು ದೂರವಿಡುವಂತೆ ಸೂಚಿಸಲಾಗಿದೆ. ಆದೇಶವನ್ನು ಪಾಲಿಸದವರಿಗೆ ದಂಡ ಪಾವತಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

    MORE
    GALLERIES