Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

Tirumala: ತಿರುಪತಿ ತಿಮ್ಮಪ್ಪನಿಗೆ ದೇಶಾದ್ಯಂತ ಲಕ್ಷಾಂತರ ಭಕ್ತರಿದ್ದಾರೆ. ಪ್ರತಿ ದಿನ ತಿರುಮಲದಲ್ಲಿರುವ ವೆಂಕಟೇಶ್ವರನ ದೇವಾಲಯ ಭಕ್ತಾದಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಜನ ದಟ್ಟಣೆ ಹೆಚ್ಚಾಗಿ ನೂಕು-ನುಗ್ಗಲು ಮುಂದುವರೆದಿದೆ. ಸಾಲು-ಸಾಲು ರಜೆಗಳು ಸಿಕ್ಕಿದ್ದರ ಪರಿಣಾಮವಾಗಿ ತಿರುಪತಿಗೆ ಭಕ್ತರ ದಂಡೇ ಹರಿದು ಬಂದಿತ್ತು .

  • Local18
  • |
  •   | Tirumala, India
First published:

  • 17

    Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

    ಕಳೆದ 2 ದಿನಗಳಿಂದ ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೇಶದ ಮೂಲೆ-ಮೂಲೆಗಳಿಂದ ಭಕ್ತರು ಬರುತ್ತಿದ್ದಾರೆ. ಹೀಗಾಗಿ ಜನಸಂಖ್ಯೆ ಹೆಚ್ಚಾಗಿರುವ ಕಾರಣ ತಿರುಪತಿಗೆ ಹೋಗಬೇಕು ಎಂದುಕೊಂಡಿರುವವರು ಒಮ್ಮೆ ಯೋಚಿಸಿ.

    MORE
    GALLERIES

  • 27

    Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

    ತಿರುಪತಿಗೆ ಹೋಗುವ ಭಕ್ತರಿಗೆ ಟಿಟಿಡಿಯು ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಕಟ್ಟಡದಲ್ಲಿ ಭಕ್ತರಿಗೆ ಅನ್ನ, ಹಾಲು ಮತ್ತು ನೀರಿನ ಸೌಲಭ್ಯ ಇರುತ್ತದೆ. ಜೊತೆಗೆ ತಿರುಮಲದ ಅನ್ನಪ್ರಸಾದ ಕೌಂಟರ್‌ಗಳು, ನಾರಾಯಣಗಿರಿ ಉದ್ಯಾನವನಗಳು ಮತ್ತು ಭಕ್ತರ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಅನ್ನ, ಹಾಲು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

    MORE
    GALLERIES

  • 37

    Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

    ಶ್ರೀವಾರಿ ಸೇವಕರು ಅನ್ನಪ್ರಸಾದ, ಆರೋಗ್ಯ ಮತ್ತು ಜಾಗ್ರತೆ ಇಲಾಖೆಗಳ ಮೇಲೆ ವಿಶೇಷ ಗಮನಹರಿಸಿ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

    MORE
    GALLERIES

  • 47

    Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

    ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಸಮುದಾಯದಲ್ಲಿ ಮಧ್ಯಾಹ್ನ ಸುಮಾರು 79 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ಪ್ರಸಾದ ವಿತರಿಸಲಾಯಿತು. ಜೊತೆಗೆ ವೈಕುಂಠಂ ಸರತಿ ಸಾಲಿನಲ್ಲಿ 80 ಸಾವಿರ ಜನರಿಗೆ ಅನ್ನ ಪ್ರಸಾದ ವಿತರಿಸಲಾಯಿತು. ಸಾಮಾನ್ಯಕ್ಕಿಂತ ದುಪ್ಪಟ್ಟು ಪ್ರಸಾದ ನೀಡಲಾಯಿತು. ಇದಲ್ಲದೇ ಮಕ್ಕಳಿಗೆ ಕಾಲ ಕಾಲಕ್ಕೆ ಹಾಲು ನೀಡಲಾಗುತ್ತದೆ.

    MORE
    GALLERIES

  • 57

    Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

    ಸರತಿ ಸಾಲಿನಲ್ಲಿ ಯಾವುದೇ ಕಾಲ್ತುಳಿತ ಸಂಭವಿಸದಂತೆ ಟಿಟಿಡಿ ವಿಜಿಲೆನ್ಸ್ ಮತ್ತು ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಇದೆ. ಭಕ್ತಾದಿಗಳ ವಿಪರೀತ ದಟ್ಟಣೆಯಿಂದಾಗಿ, 300 ರೂ. ವಿಶೇಷ ಪ್ರವೇಶ ದರ್ಶನ ಟೋಕನ್‌ಗಳು, ಎಸ್‌ಎಸ್‌ಡಿ ಟೋಕನ್‌ಗಳು ಮತ್ತು ದೈವಿಕ ದರ್ಶನ ಟೋಕನ್‌ಗಳನ್ನು ಹೊಂದಿರುವ ಭಕ್ತರು ಮಾತ್ರ ತಿರುಮಲಕ್ಕೆ ಬರಬೇಕೆಂದು ಟಿಟಿಡಿ ಮನವಿ ಮಾಡಿದೆ.

    MORE
    GALLERIES

  • 67

    Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

    ಟಿಟಿಡಿ EO ಶ್ರೀ ಎ.ವಿ.ಧರ್ಮಾ ರೆಡ್ಡಿ ಅವರ ಆದೇಶದಂತೆ, JEO ಶ್ರೀ ವೀರಬ್ರಹ್ಮ ಅವರ ಅಧೀನದಲ್ಲಿರುವ ಎಂಜಿನಿಯರಿಂಗ್, ಆರೋಗ್ಯ, ಅನ್ನಪ್ರಸಾದ, ವಿಜಿಲೆನ್ಸ್ ಮತ್ತು ವೈದ್ಯಕೀಯ ಇಲಾಖೆಗಳ ಹಿರಿಯ ಅಧಿಕಾರಿಗಳು ಭಕ್ತರ ಸೌಲಭ್ಯಗಳು ಮತ್ತು ಸರತಿ ಸಾಲುಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

    MORE
    GALLERIES

  • 77

    Tirumala: ತಿರುಪತಿಗೆ ಹೋಗುವ ಭಕ್ತರೇ ಗಮನಿಸಿ- ಇಲ್ಲಿದೆ ಮಹತ್ವದ ಅಪ್ಡೇಟ್!

    ತಿರುಪತಿಯಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ, ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರು ಸ್ವಲ್ಪ ಯೋಚನೆ ಮಾಡಿ. ಜನ ಕಡಿಮೆ ಇರುವ ಸಂದರ್ಭದಲ್ಲಿ ಆರಾಮಾಗಿ ಹೋಗಿ ದೇವರ ದರುಶನ ಪಡೆದು ಬನ್ನಿ.

    MORE
    GALLERIES