Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

ನಾವು ನಗರೆದೆಲ್ಲೆಡೆ ಕೆಲಸ ಖಾಲಿಯಿದೆ, ಮನೆ ಮಾರಾಟಕ್ಕಿದೆ, ಸೈಟ್​ ಮಾರಾಟಕ್ಕಿದೆ ಎಂಬ ಜಾಹೀರಾತು ಫಲಕಗಳನ್ನು ನೋಡಿರುತ್ತೇವೆ. ಆದರೆ ಕಿಡ್ನಿ ಮಾರಾಟಕ್ಕಿದೆ, ಲಿವರ್​ ಮಾರಾಟಕ್ಕಿದೆ ಎಂಬ ಜಾಹೀರಾತನ್ನು ನೋಡಿದ್ದೀರಾ? ಇಲ್ಲೊಬ್ಬ ವ್ಯಕ್ತಿ ಆ ರೀತಿಯ ಫಲಕವನ್ನು ಹಾಕುವ ಮೂಲಕ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ.

First published:

  • 17

    Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

    ನಾವು ನಗರದೆಲ್ಲೆಡೆ ಕೆಲಸ ಖಾಲಿಯಿದೆ, ಮನೆ ಮಾರಾಟಕ್ಕಿದೆ, ಸೈಟ್​ ಮಾರಾಟಕ್ಕಿದೆ ಎಂಬ ಜಾಹೀರಾತು ಫಲಕಗಳನ್ನು ನೋಡಿರುತ್ತೇವೆ. ಆದರೆ ಕಿಡ್ನಿ ಮಾರಾಟಕ್ಕಿದೆ, ಲಿವರ್​ ಮಾರಾಟಕ್ಕಿದೆ ಎಂಬ ಜಾಹೀರಾತನ್ನು ಎಲ್ಲಾದರೂ ಕಂಡಿದ್ದೀರಾ?

    MORE
    GALLERIES

  • 27

    Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

    ಕೇರಳದ ತಿರುವನಂತಪುರಂನಲ್ಲಿ ಮಣಕಾಡು ನಿವಾಸಿಯೊಬ್ಬರು ಕಿಡ್ನಿ ಮತ್ತು ಲಿವರ್​ ಮಾರಾಟ ಮಾಡುವುದಾಗಿ ಪ್ರಚಾರ ಮಾಡಿದ್ದ ಪೋಸ್ಟರ್ ಜನರ ಗಮನ ಸೆಳೆಯುತ್ತಿದೆ. ಸಂಪರ್ಕಕ್ಕಾಗಿ ಎರಡು ಮೊಬೈಲ್ ​ ನಂಬರ್​ಗಳನ್ನೂ ಹಾಕಿದ್ದಾರೆ. ಇದು ಸಾರ್ವಜನಿಕರ ಮೊಬೈಲ್​ಫೋನ್​ಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಲಾರಂಭಿಸಿದೆ.

    MORE
    GALLERIES

  • 37

    Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

    ಮೊದಲು ಸರ್ಕಾರವನ್ನು ಟ್ರೋಲ್ ಮಾಡಲು ಈ ರೀತಿಯ ಪೋಸ್ಟರ್ ಹಾಕಿದ್ದಾರೆ ಎಂದು ಹಲವರು ಭಾವಿಸಿದ್ದರು. ಆದರೆ, ಮಣಕಾಡು ನಿವಾಸಿ ಸಂತೋಷ್ ಕುಮಾರ್ (50) ಎಂಬುವರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹಣದ ಅವಶ್ಯಕತೆಯಿದ್ದು, ಅದಕ್ಕಾಗಿ ಈ ರೀತಿಯ ಪೋಸ್ಟರ್ ಹಾಕಿದ್ದಾರೆ ಎಂದು ತಿಳಿದ ಮೇಲೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 47

    Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

    ಹಣ್ಣಿನ ಅಂಗಡಿಯಲ್ಲಿ ಗೋಣಿಚೀಲ ಎತ್ತುವ ವೇಳೆ ಸಂತೋಷ್​ ಕುಮಾರ್​ಗೆ ಅಪಘಾತ ಸಂಭವಿಸಿದೆ. ಚಿಕಿತ್ಸೆಗೆ ಒಳಗಾಗಬೇಕಾಗಿದ್ದು,  ಅವರ ಬಳಿ ಚಿಕಿತ್ಸೆಗೆ ಈಗ ಹಣದ ಅವಶ್ಯಕತೆ ಇರುವುದರಿಂದ ಈ ನಿರ್ಧಾರ ಮಾಡಿದ್ದಾರೆ.

    MORE
    GALLERIES

  • 57

    Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

    ಚಿಕಿತ್ಸೆಗೆ ಅಗತ್ಯವಿರುವ ಹಣಕ್ಕಾಗಿ ಮಣಕಾಡು ಜಂಕ್ಷನ್ ಬಳಿಯ ತಮ್ಮ ಜಮೀನನ್ನು ಮಾರಾಟ ಮಾಡಲು ಪ್ರಯತ್ನಿಸಿದರು. ಆದರೆ ಅವರ ಸಹೋದರನೊಂದಿಗೆ ಜಮೀನಿನ ಬಗ್ಗೆ ವಿವಾದವಿದ್ದು, ಮಾರಾಟ ಮಾಡಲು ತಕರಾರು ಮಾಡಿದ್ದಾನೆ. ಆ ಆಸ್ತಿ ಅವರ ತಾಯಿಯ ಹೆಸರಿನಲ್ಲಿತ್ತು. ಈಗ ಸಂತೋಷ್ ಸೇರಿದಂತೆ ಆರು ಸಹೋದರರ ಹೆಸರಿನಲ್ಲಿದೆ. ಹಾಗಾಗಿ ಮಾರಾಟ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.

    MORE
    GALLERIES

  • 67

    Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

    ಸಂತೋಷ್ ಅವರ ಪತ್ನಿ ಸ್ಥಳೀಯ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದಾರೆ. ಆದರೆ ಕೋವಿಡ್‌ನಿಂದಾಗಿ ಅದು ಸಹ ನಿಂತುಹೋಗಿದೆ. ಇದು ಅವರ ಆರ್ಥಿಕತೆಯನ್ನು ಮತ್ತಷ್ಟು ಹದಗೆಡಿಸಿದೆ.

    MORE
    GALLERIES

  • 77

    Kidney Sale: ಈತನ ಕಿಡ್ನಿ, ಲಿವರ್ ಮಾರಾಟಕ್ಕಿದ್ಯಂತೆ! ಜಾಹೀರಾತು ನೀಡಿದ್ದ ವ್ಯಕ್ತಿ ಹಿಂದಿದೆ ಕಣ್ಣೀರ ಕಥೆ

    ಚಿಕಿತ್ಸೆಗೆ ಬೇರೆ ದಾರಿಯಿಲ್ಲದೆ ಸಂತೋಷ್ ತಮ್ಮ ದೇಹದ ಪ್ರಮುಖ ಅಂಗಗಗಳನ್ನು ಮಾರಾಟ ಮಾಡಲು ಜಾಹೀರಾತು ನೀಡಿದ್ದಾರೆ.

    MORE
    GALLERIES