Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

ಇತ್ತೀಚಿನ ದಿನಗಳಲ್ಲಿ ಮದುವೆಯನ್ನು ಕೋಟಿಗಟ್ಟಲೇ ಖರ್ಚು ಮಾಡಿ ವಿಜೃಂಭಣೆಯಿಂದ ಮಾಡುವುದನ್ನು ನೋಡಿರುತ್ತಿರುತ್ತೇವೆ. ಆದರೆ ದುಂದುವೆಚ್ಚವನ್ನು ತಪ್ಪಿಸುವುದಕ್ಕೆ ಒಲ್ಲೊಂದು ಕುಟುಂಬ ತಮ್ಮ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದಂತಹ 21 ಜೋಡಿಗೆ ವಿವಾಹ ಮಾಡಿಸಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ.

First published:

  • 17

    Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

    ಇತ್ತೀಚಿನ ದಿನಗಳಲ್ಲಿ ಮದುವೆಯನ್ನು ಕೋಟಿಗಟ್ಟಲೇ ಖರ್ಚು ಮಾಡಿ ವಿಜೃಂಭಣೆಯಿಂದ ಮಾಡುವುದನ್ನು ನೋಡಿರುತ್ತಿರುತ್ತೇವೆ. ಆದರೆ ದುಂದುವೆಚ್ಚವನ್ನು ತಪ್ಪಿಸುವುದಕ್ಕೆ ಒಲ್ಲೊಂದು ಕುಟುಂಬ ತಮ್ಮ ಮನೆಯಲ್ಲಿ ಮದುವೆ ವಯಸ್ಸಿಗೆ ಬಂದಂತಹ 21 ಜೋಡಿಗೆ ವಿವಾಹ ಮಾಡಿಸಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ.

    MORE
    GALLERIES

  • 27

    Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

    ರಾಜಸ್ಥಾನದ ಗಡಿಭಾಗದ ಬಾರ್ಮರ್‌ ಜಿಲ್ಲೆಯಲ್ಲಿ ಹಾಜಿ ಶೌಬತ್ ಅಲಿಸರ್ ಕುಟಂಬದ 21 ಜೋಡಿಗಳಿಗೆ ಸಂಗಾತಿ ಹುಡುಕಿ ಮದುವೆ ಮಾಡಿಸಿದ್ದಾರೆ. ಈ ಮೂಲಕ ಇಡೀ ಕುಟುಂಬದ ಯುವಕ-ಯುವತಿಯರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ.

    MORE
    GALLERIES

  • 37

    Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

    ನೂರಾರು ಜನರು ಈ ಸಮಾರಂಭದಲ್ಲಿ ಪಾಲ್ಗೊಂಡರು ಮತ್ತು ಈ ಕುಟುಂಬದ ಉದಾತ್ತ ಉದ್ದೇಶವನ್ನು ಶ್ಲಾಘಿಸಿದರು ಮಾತ್ರವಲ್ಲದೆ, 21 ಹೊಸ ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

    MORE
    GALLERIES

  • 47

    Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

    ಮಾಹಿತಿ ಪ್ರಕಾರ ಹಾಜಿ ಶೌಬತ್ ಅಲಿಸರ್ ಕುಟುಂಬವು ಬಾರ್ಮರ್ ಜಿಲ್ಲೆಯ ದೇರಾಸರ್‌ನಲ್ಲಿ ಅನಗತ್ಯ ವೆಚ್ಚಗಳನ್ನು ನಿಲ್ಲಿಸಲು ಇಡೀ ಕುಟುಂಬದ ವಿವಾಹದ ವಯಸ್ಸಿಗೆ ಬಂದಂತಹ ಯುವಕ-ಯುವತಿಯರ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸುವ ಮೂಲಕ ಸುದ್ದಿಯಾಗಿದ್ದಾರೆ.

    MORE
    GALLERIES

  • 57

    Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

    21 ವರಗಳು ಮತ್ತು 21 ವಧುಗಳು ಒಂದೇ ಸಮಾರಂಭದಲ್ಲಿ ಒಟ್ಟಿಗೆ ವಿವಾಹವಾದರು. ಈ ವಿಶೇಷ ವಿವಾಹಕ್ಕೆ ಆಗಮಿಸಿದ್ದ ಎಲ್ಲರೂ ಅವರನ್ನು ಹೃದಯದಿಂದ ಅಭಿನಂದಿಸಿದರು. ಹಾಜಿ ಇದ್ರೀಶ್ ಅವರು ತಮ್ಮ ಇಡೀ ಕುಟುಂಬ ಸದಸ್ಯರನ್ನು ನಾವು ಅನಗತ್ಯ ಖರ್ಚುಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ, ಎಲ್ಲರನ್ನೂ ಒಪ್ಪಿಸಿ ಈ ಸಾಮೂಹಿಕ ಮಾಡಿಸಿದ್ದಾರೆ. ಇದರಿಂದ ಉಳಿತಾಯವಾಗುವ ಹಣವನ್ನು ಸಮಾಜದ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಬಹುದು. ಅಲ್ಲದೆ ಇದರಿಂದ ಸಮಾಜ ಉನ್ನತಿ ಹೊಂದಲು ಸಾಧ್ಯ ಎಂದು ತಿಳಿಸಿದ್ದಾರೆ.

    MORE
    GALLERIES

  • 67

    Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

    ತಮ್ಮ ಇಡೀ ಕುಟುಂಬದ 21 ವರರ ಮದುವೆ ಸಮಾರಂಭವನ್ನು ಒಂದೇ ಸಮಾರಂಭದಲ್ಲಿ ಆಯೋಜಿಸುವ ಮೂಲಕ ಸಮಯ ಉಳಿತಾಯ ಹಾಗೂ ದುಂದುವೆಚ್ಚ ನಿಲ್ಲಿಸುವ ಸಂದೇಶ ನೀಡಿದ್ದಾರೆ. ಸಮಾರಂಭದಲ್ಲಿ ಮುಸ್ಲಿಂ ಧರ್ಮಗುರು ಪೀರ್ ಸೈಯದ್ ನೂರುಲ್ಲಾ ಶಾ ಬುಖಾರಿ, ಅಲ್ಪಸಂಖ್ಯಾತರ ಖಾತೆ ಸಚಿವ ಸಲೇಹ್ ಮೊಹಮ್ಮದ್ ಭಾಗವಹಿಸಿ ಆಶೀರ್ವಚನ ನೀಡಿದರು.

    MORE
    GALLERIES

  • 77

    Mass Marriage: ಒಂದೇ ಕುಟುಂಬದ 21 ಹುಡುಗರಿಗೆ ಒಂದೇ ಮಂಟಪದಲ್ಲಿ ಮದುವೆ! ಈ ವಿಶೇಷ ವಿವಾಹದ ಹಿಂದಿದೆ ಮಹತ್ವದ ಸಂದೇಶ

    ಅಷ್ಟೇ ಅಲ್ಲ, ಮಾಜಿ ಸಚಿವ ಗಫೂರ್ ಅಹಮದ್, ಮಾಜಿ ಸಚಿವ ಅಶ್ರಫ್ ಅಲಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫತೇಖಾನ್, ಸಮಾಜ ಸೇವಕ ಜೋಗೇಂದ್ರ ಸಿಂಗ್ ಚೌಹಾಣ್, ಖಾನ್ ಫಕೀರ್ ರೋಹಿಲ್ಲಿ, ಸೈಯದ್ ಗುಲಾಂ ಶಾ, ಸೈಯದ್ ಮಿಥನ್ ಶಾ, ಸೈಯದ್ ಭೂರೆ ಶಾ, ಧನೌ ಪ್ರಧಾನ್ ಶಮ್ಮಾ ಬಾನೋ, ಫಕೀರ್ ನೂರಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    MORE
    GALLERIES