ಮಂಡ್ಯ: ದಸರಾ ಅಂಬಾರಿ ಹೊರುತ್ತಿದ್ದ ಮೃತ ಬಲರಾಮ ಆನೆಗೆ ವಿನೂತನ ಶ್ರದ್ದಾಂಜಲಿ ನಡೆಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ಬಲರಾಮ ಆನೆಗೆ ಮಂಡ್ಯ ರಕ್ಷಣಾ ವೇದಿಕೆಯಡಿ ವಿನೂತನವಾಗಿ ಶ್ರದ್ದಾಂಜಲಿ ಸಲ್ಲಿಸಲಾಗಿದೆ.
2/ 7
ಮಂಡ್ಯ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ವಿನೂತನ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
3/ 7
ಶ್ರೀರಂಗಪಟ್ಟಣದ ಮೈಸೂರು ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ವಿಶೇಷವಾಗಿ ಶ್ರದ್ಧಾಂಜಲಿ ಆಚರಣೆ ಮಾಡಲಾಗಿದೆ.
4/ 7
ಬಲರಾಮ ಆನೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ ಜೈಕಾರ ಹಾಕಿ ಗೌರವ ಸೂಚಿಸಲಾಗಿದೆ.
5/ 7
ದಸರಾ ಜಂಬೂಸವಾರಿಯಲ್ಲಿ ಬಲರಾಮ ಸತತವಾಗಿ 14 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಗೆ ಕಳೆತಂದಿದ್ದ. ಅನಾರೋಗ್ಯಕ್ಕೆ ಒಳಗಾಗಿದ್ದ ಬಲರಾಮನಿಗೆ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು.
6/ 7
ವರದಿಯ ಪ್ರಕಾರ ಬಲರಾಮನ ಬಾಯಿಯಲ್ಲಿ ಹುಣ್ಣುಗಳಾಗಿದ್ದು, ಆಹಾರ ಸೇವಿಸುತ್ತಿರಲಿಲ್ಲ. ನೀರನ್ನು ಸಹಾ ಕುಡಿಯಲು ಸಾಧ್ಯವಾಗದ ಕಾರಣ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಕೊನೆಯುಸಿರೆಳೆದಿತ್ತು.
7/ 7
ಆನೆಗೆ ಗಟ್ಟಿ ಆಹಾರ ಸೇವಿಸಲಾಗುತ್ತಿರಲಿಲ್ಲ. ಬಲರಾಮನಿಗೆ ರಾಗಿ ಗಂಜಿ, ರಾಗಿ ಹಿಟ್ಟು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣಿನಂತಹ ಮೆದು ಆಹಾರವನ್ನ ಮಾತ್ರ ನೀಡಲಾಗುತ್ತಿತ್ತು. ಎಂಡೋಸ್ಕೋಪಿ ಸಹ ಮಾಡಲಾಗಿತ್ತು.
First published:
17
Balarama Elephant: ಅಗಲಿದ ಅಂಬಾರಿ ಆನೆಗೆ ಶ್ರೀರಂಗಪಟ್ಟಣದಲ್ಲಿ ವಿಭಿನ್ನ ಶ್ರದ್ಧಾಂಜಲಿ
ಮಂಡ್ಯ: ದಸರಾ ಅಂಬಾರಿ ಹೊರುತ್ತಿದ್ದ ಮೃತ ಬಲರಾಮ ಆನೆಗೆ ವಿನೂತನ ಶ್ರದ್ದಾಂಜಲಿ ನಡೆಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ಬಲರಾಮ ಆನೆಗೆ ಮಂಡ್ಯ ರಕ್ಷಣಾ ವೇದಿಕೆಯಡಿ ವಿನೂತನವಾಗಿ ಶ್ರದ್ದಾಂಜಲಿ ಸಲ್ಲಿಸಲಾಗಿದೆ.
Balarama Elephant: ಅಗಲಿದ ಅಂಬಾರಿ ಆನೆಗೆ ಶ್ರೀರಂಗಪಟ್ಟಣದಲ್ಲಿ ವಿಭಿನ್ನ ಶ್ರದ್ಧಾಂಜಲಿ
ದಸರಾ ಜಂಬೂಸವಾರಿಯಲ್ಲಿ ಬಲರಾಮ ಸತತವಾಗಿ 14 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತು ಮೈಸೂರು ದಸರೆಗೆ ಕಳೆತಂದಿದ್ದ. ಅನಾರೋಗ್ಯಕ್ಕೆ ಒಳಗಾಗಿದ್ದ ಬಲರಾಮನಿಗೆ ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು.
Balarama Elephant: ಅಗಲಿದ ಅಂಬಾರಿ ಆನೆಗೆ ಶ್ರೀರಂಗಪಟ್ಟಣದಲ್ಲಿ ವಿಭಿನ್ನ ಶ್ರದ್ಧಾಂಜಲಿ
ವರದಿಯ ಪ್ರಕಾರ ಬಲರಾಮನ ಬಾಯಿಯಲ್ಲಿ ಹುಣ್ಣುಗಳಾಗಿದ್ದು, ಆಹಾರ ಸೇವಿಸುತ್ತಿರಲಿಲ್ಲ. ನೀರನ್ನು ಸಹಾ ಕುಡಿಯಲು ಸಾಧ್ಯವಾಗದ ಕಾರಣ ಅಸ್ವಸ್ಥಗೊಂಡಿತ್ತು. ವೈದ್ಯರು ನೀಡುತ್ತಿದ್ಧ ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಕೊನೆಯುಸಿರೆಳೆದಿತ್ತು.
Balarama Elephant: ಅಗಲಿದ ಅಂಬಾರಿ ಆನೆಗೆ ಶ್ರೀರಂಗಪಟ್ಟಣದಲ್ಲಿ ವಿಭಿನ್ನ ಶ್ರದ್ಧಾಂಜಲಿ
ಆನೆಗೆ ಗಟ್ಟಿ ಆಹಾರ ಸೇವಿಸಲಾಗುತ್ತಿರಲಿಲ್ಲ. ಬಲರಾಮನಿಗೆ ರಾಗಿ ಗಂಜಿ, ರಾಗಿ ಹಿಟ್ಟು, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣಿನಂತಹ ಮೆದು ಆಹಾರವನ್ನ ಮಾತ್ರ ನೀಡಲಾಗುತ್ತಿತ್ತು. ಎಂಡೋಸ್ಕೋಪಿ ಸಹ ಮಾಡಲಾಗಿತ್ತು.