Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

ಈ ದೇವಸ್ಥಾನದಲ್ಲಿ ಕಾಲ ಭೈರವನ ವಾಹನವಾದ ಶ್ವಾನಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಎರಡು ಬಾರಿ ಪೂಜೆ ಮಾಡಲಾಗುತ್ತದೆ!

First published:

  • 17

    Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

    ಒಕ್ಕಲಿಗರ ಪವಿತ್ರ ಸನ್ನಿಧಿ ಮಂಡ್ಯದ ಕಾಲ ಭೈರವೇಶ್ವರ ಸನ್ನಿಧಿ ಆದಿಚುಂಚನಗಿರಿ. ಈ ಪವಿತ್ರ ಕ್ಷೇತ್ರದ ಬಗ್ಗೆ ಇಲ್ಲಿದೆ ನೋಡಿ ಕುತೂಹಲಕರ ಮಾಹಿತಿ.

    MORE
    GALLERIES

  • 27

    Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

    ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಕಲ್ಲಿನ ಬೆಟ್ಟದ ಮೇಲೆ ನೆಲೆಯಾದ ಕ್ಷೇತ್ರವಾಗಿದೆ. ಇದು ಕರ್ನಾಟಕದ ಹಿಂದೂಗಳ ನಾಥ ಪರಂಪರೆ ಮತ್ತು ಜೋಗಿ ಪಂಥದ ಆಧ್ಯಾತ್ಮಿಕ ಕೇಂದ್ರವಾಗಿದೆ. ಒಕ್ಕಲಿಗರ ಆರಾಧ್ಯ ದೈವ ಕಾಲಭೈರವೇಶ್ವರ ನೆಲೆಗೊಂಡಿರುವುದು ಇದೇ ಆದಿಚುಂಚನಗಿರಿಯಲ್ಲಿ.

    MORE
    GALLERIES

  • 37

    Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

    ಶ್ರೀ ಕಾಲಭೈರವೇಶ್ವರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕ್ಷೇತ್ರ ಪಾಲಕ. ಗಂಗಾಧರೇಶ್ವರ ದೇವರು ಪ್ರಧಾನ ದೇವರು. ಶಿವಪುರಾಣ, ಶಾಸನಗಳು ಮತ್ತು ಜಾನಪದಗಳಲ್ಲಿ ಈ ಕ್ಷೇತ್ರದ ಉಲ್ಲೇಖಗಳಿವೆ. ಸಿದ್ಧಸಿಂಹಾಸನ ಮತ್ತು ಮಠವನ್ನು ಸ್ಥಾಪಿಸಿದ ಸಿದ್ಧಯೋಗಿಗೆ ಆದಿರುದ್ರನು ಈ ಕ್ಷೇತ್ರವನ್ನು ಹಸ್ತಾಂತರಿಸಿದನೆಂದು ಪುರಾಣಗಳು ಹೇಳುತ್ತವೆ.

    MORE
    GALLERIES

  • 47

    Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

    ಮಠವು ಒಂದು ಬೆಟ್ಟದ ಮೇಲೆ ಇದ್ದು ಬೆಟ್ಟದ ಶಿಖರವನ್ನು ಆಕಾಶ ಭೈರವ ಎನ್ನುತ್ತಾರೆ. ಈ ದೇವಸ್ಥಾನದಲ್ಲಿ ಕಾಲ ಭೈರವನ ವಾಹನವಾದ ಶ್ವಾನಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಎರಡು ಬಾರಿ ಪೂಜೆ ಮಾಡಲಾಗುತ್ತದೆ.

    MORE
    GALLERIES

  • 57

    Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

    ಪ್ರಸ್ತುತ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿ ಚುಂಚನಗಿರಿ ಮಠದ 72 ನೇ ಮುಖ್ಯಸ್ಥರಾಗಿದ್ದಾರೆ. 1974 ರಿಂದ 2013 ರವರೆಗೆ ಮಠದ ನೇತೃತ್ವ ವಹಿಸಿದ್ದ 71 ನೇ ಮಠಾಧೀಶ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಅಡಿಯಲ್ಲಿ ಮಠವು ಪ್ರವರ್ಧಮಾನಕ್ಕೆ ಬಂದಿತ್ತು.

    MORE
    GALLERIES

  • 67

    Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

    ಶಿವನು ತಪಸ್ಸಿಗೆ ಕುಳಿತ ಪವಿತ್ರವಾದ ಸ್ಥಳ ಅವನ ತೇಜಸ್ಸಿನ ಅಂಶದಿಂದ ಕೂಡಿರುವುದರಿಂದ ಈ ಪೀಠವು 'ಜ್ವಾಲಾಪೀಠ' ಅಥವಾ ಅಗ್ನಿಪೀಠ ಎಂದು ಸಹ ಖ್ಯಾತಿಗೊಂಡಿದೆ. ಭಕ್ತರು ಆಡುಭಾಷೆಯಲ್ಲಿ ಈ ಕ್ಷೇತ್ರವನ್ನು 'ಉರಿಗದ್ದುಗೆ' ಎಂದು ಸಹ ಕರೆಯುತ್ತಾರೆ. ಈಶ್ವರನಿಂದ ಸ್ಥಾಪಿತವಾದ ಪೀಠಗಳಲ್ಲಿ ಇದೇ ಮೊದಲನೆಯದಂತೆ. ಹೀಗಾಗಿ ಈ ಕ್ಷೇತ್ರಕ್ಕೆ 'ಆದಿ ಚುಂಚನಗಿರಿ ಪೀಠ ಎಂದು ಹೆಸರು ಬಂದಿದೆ.

    MORE
    GALLERIES

  • 77

    Adichunchanagiri Mutt History: ಒಕ್ಕಲಿಗರ ಶಕ್ತಿ ಕೇಂದ್ರ, ಕಾಲ ಭೈರವನ ಸನ್ನಿಧಿ ಆದಿಚುಂಚನಗಿರಿ ಮಠದ ಮಹಿಮೆ!

    ಆದಿಚುಂಚನಗಿರಿಯನ್ನು ಮಹಾಸಂಸ್ಥಾನ ಮಠ ಎಂದು ಕರೆಯಲಾಗುತ್ತೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಕ್ಷೇತ್ರವಾಗಿರುವ ಈ ಕ್ಷೇತ್ರ ಬೆಂಗಳೂರಿನಿಂದ 110 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಿಂದ ಉತ್ತರಕ್ಕೆ ಬೆಳ್ಳೂರು ಕ್ರಾಸ್​ನಿಂದ 6 ಕಿಮೀ ದೂರದಲ್ಲಿದೆ.

    MORE
    GALLERIES