Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

ನಿನ್ನೆ ಪುನೀತ್​ ರಾಜ್​ಕುಮಾರ್​ ಅವರು ಪತ್ನಿ ಅಶ್ವಿನಿ ಅವರ ಜೊತೆ ಬೆಳಿಗ್ಗೆ 11-15ರ ಸುಮಾರಿಗೆ ರಮಣ ರಾವ್​ ಕ್ಲಿನಿಕ್​ಗೆ ಹೋಗಿದ್ದಾರೆ. ಅಲ್ಲಿದ್ದ ತಮ್ಮ ಫ್ಯಾಮಿಲಿ ಡಾಕ್ಟರ್​ ರಮಣ ರಾವ್​ ಅವರನ್ನು ಭೇಟಿಯಾಗಿದ್ದಾರೆ. ಆಗ ಅಲ್ಲಿ ನಡೆದದ್ದೇನು ಎಂಬುದರ ಕುರಿತಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published:

  • 110

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಪುನೀತ್​ ರಾಜ್​ಕುಮಾರ್ ಅವರಿಗೆ ಆಗಿದ್ದು ಹೃದಾಯಾಘಾತ (Heart Attack)ಎಂದು ಹೇಳಲಾಗಿತ್ತು. ಆದರೆ ನಂತರದಲ್ಲಿ ನಟನಿಗೆ ಆಗಿದ್ದು ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್)​  (Cardiac Arrest) ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.

    MORE
    GALLERIES

  • 210

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಹೌದು, ನಟನ ಪುನೀತ್​ ರಾಜ್​ಕುಮಾರ್​ ಅವರು ನಿನ್ನೆ ಜಿಮ್​ನಲ್ಲಿ ವರ್ಕೌಟ್​ ಮುಗಿಸಿದ ನಂತರ ಕೊಂಚ ಸುಸ್ತಾಗುತ್ತಿದೆ ಅಂತ ಅವರು ತಮ್ಮ ಫ್ಯಾಮಿಲಿ ಡಾಕ್ಟರ್​ ರಮಣ ರಾವ್​ ಅವರ ಕ್ಲಿನಿಕ್​ಗೆ ತಮ್ಮ ಮಡದಿಯ ಹೋಗಿದ್ದಾರೆ.

    MORE
    GALLERIES

  • 310

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಜಿಮ್​ನಲ್ಲಿ ಅಪ್ಪು ನಿತ್ಯ ಮಾಡುವ ತೂಕ ಎತ್ತುವ ಹಾಗೂ ಇತರೆ ವ್ಯಾಯಾಮಗಳನ್ನು ಮುಗಿಸಿದ್ದರಂತೆ. ನಂತರ ಬಾಕ್ಸಿಂಗ್​ ಸೆಷನ್​ ಸಹ ಮುಗಿಸಿದ್ದಾರೆ. ಇದು ನಿತ್ಯದ ರೂಟೀನ್​ ಆಗಿತ್ತಂತೆ. ಆದರೆ, ನಿನ್ನೆ ಅವರಿಗೆ ಇದೆಲ್ಲ ಮಾಡಿದ ನಂತರ ಸುಸ್ತು ಕಾಣಿಸಿಕೊಂಡಿದೆ.

    MORE
    GALLERIES

  • 410

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಸುಸ್ತಾಗುತ್ತಿದ್ದರಿಂದ ಮಡದಿ ಅಶ್ವಿನಿ ಅವರ ಜೊತೆ 11-15ರ ಸುಮಾರಿಗೆ ರಮಣ  ರಾವ್​ ಕ್ಲಿನಿಕ್​ಗೆ ಹೋಗಿದ್ದಾರೆ. ಆದರೆ ಆಗ ಪುನೀತ್​ ರಾಜ್​ಕುಮಾರ್ ಅವರಿಗೆ ಎದೆ ನೋವು ಕಾಣಿಸಿಕೊಂಡಿರಲಿಲ್ಲವಂತೆ. ಹೀಗೆಂದು ಅವರನ್ನು ನಿನ್ನೆ ಮೊದಲು ಪರೀಕ್ಷಿಸಿದ ವೈದ್ಯ ರಮಣ ರಾವ್​ ಅವರೇ ಹೇಳಿದ್ದಾರೆ.

    MORE
    GALLERIES

  • 510

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಪುನೀತ್​ ಅವರ ಮೈ ಮಾತ್ರ ಬೆವರುತ್ತಿತ್ತು. ರಮಣ ರಾವ್​ ಅವರು ಏನಿದು ಇಷ್ಟು ಬೆವರುತ್ತಿದ್ದೀರಿ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ್ದ ಪುನೀತ್​ ಅವರು, ನಾನು ನೇರವಾಗಿ ಜಿಮ್​ನಿಂದ ಬಂದೆ. ಇಷ್ಟು ಬೆವರು ವ್ಯಾಯಾಮ ಮಾಡಿದಾಗ ಬರೋದು ಸಹಜ ಎಂದರಂತೆ.

    MORE
    GALLERIES

  • 610

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಆದರೆ, ಪುನೀತ್​ ಅವರನ್ನು ಪರೀಕ್ಷಿಸುತ್ತಿದ್ದ ವೈದ್ಯ ರಮಣ ರಾವ್​ ಅವರಿಗೆ ಪುನೀತ್ ಅವರು ಬೆವರುತ್ತಿದ್ದ ರೀತಿ ಸಹಜವಾಗಿ ಎನಿಸಲಿಲ್ಲವಂತೆ. ಅದಕ್ಕೆ ಅವರು ಮೊದಲು ಪುನೀತ್​ ಅವರಿಗೆ ಇಸಿಜಿ ಮಾಡಿಸಿದ್ದಾರೆ.

    MORE
    GALLERIES

  • 710

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಇಸಿಜಿಯಲ್ಲಿ ಸ್ಟ್ರೇನ್ ಇರುವುದು ತಿಳಿಯಿತು. ಅಂದರೆ ಅಪಾಯ ಬರುತ್ತಿದೆ ಅನ್ನೋ ಸೂಚನೆ ವೈದ್ಯರಿಗೆ ಸಿಕ್ಕಿತ್ತಂತೆ. ಅಲ್ಲದೆ ಪುನೀತ್​ ಅವರು ಸುಸ್ತಿನ ಜೊತೆಗೆ ತಲೆ ಸುತ್ತುತ್ತಿದೆ. ಕಣ್ಣು ಬಿಡಲು ಕಷ್ಟವಾಗುತ್ತದೆ ಎಂದು ಹೇಳಿದ್ದರಂತೆ.

    MORE
    GALLERIES

  • 810

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಪುನೀತ್​ ಅವರನ್ನು ಕೂಡಲೇ ಕೆಲವೇ ನಿಮಿಗಳ ದೂರದಲ್ಲಿದ್ದ ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದಾರೆ ರಮಣ ರಾವ್​. ರಮಣ ಶ್ರೀ ಆಸ್ಪತ್ರೆಯಿಂದ 5-6 ನಿಮಿಷಗಳ ಅಂತರದಲ್ಲಿ ಪುನೀತ್​ ಹಾಗೂ ಅಶ್ವಿನಿ ಅವರು ವಿಕ್ರಂ ಆಸ್ಪತ್ರೆ ತಲುಪಿದ್ದಾರೆ.

    MORE
    GALLERIES

  • 910

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಆದರೆ, ಅಷ್ಟೊತ್ತಿಗಾಗಲೆ ಸಮಯ ಮೀರಿ ಹೋಗಿತ್ತು. ಪುನೀತ್​ ಅವರನ್ನು ಉಳಿಸಿಕೊಳ್ಳಲು ವಿಕ್ರಂ ಆಸ್ಪತ್ರೆ ವೈದ್ಯರು ಹರ ಸಾಹಸಪಟ್ಟಿದ್ದಾರೆ. 11.36ರ ವೇಳೆಗೆ ಬಂದ ಪುನೀತ್​ ಅವರಿಗೆ ಅಗತ್ಯ ಚಿಕಿತ್ಸೆ ನೀಡಿದರೂ ಅವರು ಉಳಿಯಲಿಲ್ಲವಂತೆ.

    MORE
    GALLERIES

  • 1010

    Puneeth Rajkumarರ ಕೊನೆಯ ಕ್ಷಣಗಳ ಬಗ್ಗೆ ವೈದ್ಯ ರಮಣ ರಾವ್​ ಹೇಳಿದ್ದು ಹೀಗೆ: ಆಗಿದ್ದಾದರೂ ಏನು ಗೊತ್ತಾ..?

    ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಆಗಿದ್ದು ಹೃದಯಾಘಾತವಲ್ಲ, ಅದು ಹೃದಯ ಸ್ತಂಭನ. ಐಸಿಯೂನಲ್ಲಿರುವಾಗ ಹೃದಯ ಸ್ತಂಭನ ಆದರೂ ಉಳಿಸಿಕೊಳ್ಳುವುದು ತುಂಬಾ ಕಷ್ಟ. ಕಾರ್ಡಿಯಾಕ್​ ಅರೆಸ್ಟ್ ಆದಾಗ ವ್ಯಕ್ತಿಯ ದೇಹದ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯ ರಮಣ ರಾವ್​ ಅವರು ಹೇಳಿದ್ದಾರೆ.

    MORE
    GALLERIES