Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

ಕಡಿಮೆ ವೆಚ್ಚದಲ್ಲಿ ಕೃಷಿಮಾಡಿ ಅಧಿಕ ಲಾಭ ಗಳಿಸುವುದು ಹೇಗೆ ಎಂದು ಇಂದಿನ ಮಕ್ಕಳಿಗೆ ತಿಳಿಸಿಕೊಟ್ಟರೆ ನಾಳಿನ ದಿನ ಎಲ್ಲರಿಗೂ ಸಹಾಯವಾಗುತ್ತದೆ. ಅಷ್ಟೇ ಅಲ್ಲ ದೇಶದ ಆರ್ಥಿಕ ಸ್ಥಿತಿ ಕೂಡ ಸುಧಾರಿಸುತ್ತದೆ. ಹಾಗಾಗಿ ನೈಸರ್ಗಿಕ ಕೃಷಿ ಶಿಕ್ಷಣದ ಒಂದು ಭಾಗವಾಗಬೇಕಿದೆ.

First published:

  • 17

    Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

    ಶಾಲಾ ಮಕ್ಕಳಿಗೆ ಯಾವ ವಿಷಯವನ್ನು ಕಲಿಸಬೇಕು ಮಕ್ಕಳನ್ನು ಯಾವ ರೀತಿಯಲ್ಲಿ ಬೆಳೆಸಬೇಕು ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ಇಂದಿನ ಮಕ್ಕಳು ನಾಳಿನ ಭವಿಷ್ಯವನ್ನು ರೂಪಿಸುವ ವ್ಯಕ್ತಿಗಳಾಗಿರುತ್ತಾರೆ. ಆ ಕಾರಣದಿಂದ ಈಗೊಂದು ಹೊಸ ವಿಷಯವನ್ನು ಮಕ್ಕಳಿಗೆ ಪರಿಚಯಿಸಲು ನಿರ್ಧರಿಸಲಾಗಿದೆ.

    MORE
    GALLERIES

  • 27

    Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

    ಈ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಹಮ್ಮಿಕೊಂಡಿದ್ದ 'ನೈಸರ್ಗಿಕ ಕೃಷಿ ರಾಷ್ಟ್ರೀಯ ಕಾರ್ಯಾಗಾರ'ದಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

    MORE
    GALLERIES

  • 37

    Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

    ಭಾರತದ ಜನಸಂಖ್ಯೆಗೆ ಹೋಲಿಸಿದರೆ ಜನರು ಆಹಾರ ಧಾನ್ಯಗಳ ಕೊರತೆಯನ್ನು ಹಲವು ಭಾರಿ ಅನುಭವಿಸಿದ್ದಾರೆ. ಆ ಕಾರಣದಿಂದ ಇನ್ನು ಮುಂದೆ ಅಂತಹ ಸಂದರ್ಭ ಬರಲೇ ಬಾರದು ಅದಕ್ಕಾಗಿ ಮಕ್ಕಳಿಗೆ ಕೃಷಿಯ ಮಹತ್ವ ತಿಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 47

    Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

    ಆರೋಗ್ಯಕರ ಮನಸ್ಸು, ದೇಹಕ್ಕಾಗಿ ಉತ್ತರ ಆರೋಗ್ಯಕರ ಆಹಾರ ಸೇವಿಸಬೇಕು. ಅದಕ್ಕಾಗಿ ನಾವು ಆರೋಗ್ಯಕರ ಕೃಷಿ ಪದ್ಧತಿ ಮತ್ತು ಆರೋಗ್ಯಕರ ಮಾನವ ತತ್ವಗಳನ್ನು ಅನುಸರಿಸಬೇಕು. ಅದಕ್ಕಾಗಿ ನೈಸರ್ಗಿಕ ಕೃಷಿಯತ್ತ ಸಾಗಬೇಕು ಎಂದು ಅವರು ತಿಳಿಸಿದ್ದಾರೆ.

    MORE
    GALLERIES

  • 57

    Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

    ಕೃಷಿಯಲ್ಲಿ ಜಾನುವಾರುಗಳ ಪಾತ್ರದ ಕುರಿತೂ ಸಹ ತಿಳಿಸಬೇಕು. ಯಾಕೆಂದರೆ ಕೃಷಿಯಲ್ಲಿ ಜಾನುವಾರಗಳ ಪಾತ್ರ ಮುಖ್ಯವಾಗಿರುತ್ತದೆ. ಕೃಷಿ ಮಾಡುವುದರಿಂದ ಭೂಮಿಯ ಫಲವತ್ತತೆ ಕೂಡಾ ಹೆಚ್ಚುತ್ತದೆ.

    MORE
    GALLERIES

  • 67

    Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

    ನೈಸರ್ಗಿಕ ಶಿಕ್ಷಣದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ತುಂಬಾ ಮುಖ್ಯವಾಗಿರುತ್ತದೆ. ಎಲ್ಲರೂ ಕೈಗಾರಿಕೆಯತ್ತ ಒಲವು ತೋರಿದರೆ ಭೂಮಿ ಹಾಳಾಗುತ್ತದೆ.

    MORE
    GALLERIES

  • 77

    Agriculture Education: ಇನ್ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಕಲಿಕೆಯ ಒಂದು ಭಾಗವಾಗಲಿದೆ!

    ಗುಜರಾತ್‌ನ ಡ್ಯಾಂಗ್ ಜಿಲ್ಲೆಯಲ್ಲಿ ಶೇ.100ರಷ್ಟು ನೈಸರ್ಗಿಕ ಕೃಷಿ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶದ ರೈತರು ನೈಸರ್ಗಿಕ ಕೃಷಿ ಮಾಡುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

    MORE
    GALLERIES