UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

ಪ್ರತಿ ವರ್ಷ ದೇಶಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು UPSC ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಕೆಲವೇ ಕೆಲವರು ಈ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಏಕೆಂದರೆ ಇದು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಷ್ಟು ಸುಲಭವಲ್ಲ, ಆದರೆ ಅಸಾಧ್ಯವೂ ಅಲ್ಲ. ಹಾಗಾಗಿ ನಿಮಗೆ ಸ್ಪೂರ್ತಿ ನೀಡುವ ನೈಜ ಕಥೆಗಳನ್ನು ಹೊತ್ತು ನಾವು ಬಂದಿದ್ದೇವೆ. ಎಲ್ಲಾ ಕಷ್ಟಗಳನ್ನು ಮೀರಿ ಸಾಧನೆ ಮಾಡಿದ ನಾಲ್ವರು ಅಧಿಕಾರಿಗಳ ಬಗ್ಗೆ ಇಂದು ತಿಳಿಸಲಿದ್ದೇವೆ.

First published:

  • 18

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    ಇವರು ಕಠಿಣ ಪರಿಸ್ಥಿತಿಗಳನ್ನು ನಿವಾರಿಸಿ UPSC ಪರೀಕ್ಷೆಯನ್ನು ಭೇದಿಸಿದ್ದಾರೆ. ಕಠಿಣ ಪರಿಶ್ರಮ, ಸಂಕಲ್ಪ ಮತ್ತು ಅಧ್ಯಯನ ಮನೋಭಾವದ ಬಲದಿಂದ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ದುಬಾರಿ ಪುಸ್ತಕಗಳು ಅಥವಾ ಖಾಸಗಿ ತರಬೇತಿಯನ್ನು ಪಡೆಯಲು ಇವರಿಗೆ ಸಾಧ್ಯವಾಗಲಿಲ್ಲ, ಆದರೂ UPSC ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಧಿಕಾರಿಗಳ ಕಥೆಗಳು ಖಂಡಿತವಾಗಿಯೂ ನಿಮಗೆ ಸ್ಫೂರ್ತಿ ನೀಡುತ್ತದೆ.

    MORE
    GALLERIES

  • 28

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    1) ಅಂಶುಮಾನ್ ರಾಜ್: ಇವರು ಬಿಹಾರದ ಬಕ್ಸಾರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. 10ನೇ ತರಗತಿವರೆಗೆ ಇವರ ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಹಾಗಾಗಿ ರಾತ್ರಿ ಸೀಮೆಎಣ್ಣೆ ದೀಪದ ಬೆಳಕಿನಲ್ಲೇ ಓದುತ್ತಿದ್ದರು. ಕುಟುಂಬದಲ್ಲಿನ ಹಣಕಾಸು ಸಮಸ್ಯೆಯಿಂದ ಯುಪಿಎಸ್ ಸಿ ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ತರಗತಿಗಳನ್ನು ತೆಗೆದುಕೊಳ್ಳಲಿಲ್ಲ. ನಾಲ್ಕನೇ ಪ್ರಯತ್ನದಲ್ಲಿ UPSC ತೇರ್ಗಡೆಯಾದರು, IAS ಅಧಿಕಾರಿಯಾಗಬೇಕೆಂಬ ಅವರ ಕನಸು ನನಸಾಯಿತು.

    MORE
    GALLERIES

  • 38

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    2) ಎಂ ಶಿವಗುರು ಪ್ರಭಾಕರನ್: ಐಎಎಸ್ ಶಿವಗುರು ಪ್ರಭಾಕರನ್ ಅವರ ಕಥೆಯೂ ತುಂಬಾ ಸ್ಪೂರ್ತಿದಾಯಕವಾಗಿದೆ. ಪ್ರಭಾಕರನ ತಂದೆ ಮದ್ಯವ್ಯಸನಿ, ಹಾಗಾಗಿ ಅವರ ತಾಯಿ ಮತ್ತು ಸಹೋದರಿ ತಂಜಾವೂರಿನಲ್ಲಿ ತೆಂಗಿನಕಾಯಿ ಮಾರಾಟ ಮಾಡುವ ಮೂಲಕ ಕುಟುಂಬವನ್ನು ಪೋಷಿಸಿದರು. ಈ ಅಡೆತಡೆಗಳ ನಡುವೆಯೂ ಎಂ ಶಿವಗುರು ಪ್ರಭಾಕರನ್ ಯುಪಿಎಸ್ ಸಿ ಪರೀಕ್ಷೆ ಬರೆದು ಅಧಿಕಾರಿಯಾಗಲು ಬಯಸಿದ್ದರು.

    MORE
    GALLERIES

  • 48

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    ಇಂಜಿನಿಯರಿಂಗ್ ಮುಗಿಸಿ ಐಎಎಸ್ ಆಗಲು ಯುಪಿಎಸ್ ಸಿಗೆ ತಯಾರಿ ಆರಂಭಿಸಿದರು. ಕೆಲ ಕಾಲ ಸೇಂಟ್ ಥಾಮಸ್ ಮೌಂಟ್ ನಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಪಾಠ ಮಾಡಿದರು. ತನ್ನ ಎಂಟೆಕ್ ಪದವಿಯನ್ನು ಸಹ ಪೂರ್ಣಗೊಳಿಸಿ, 2017 ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 101ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 58

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    3) ಶ್ರೀಧನ್ಯ ಸುರೇಶ್: ಇವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೇರಳದ ಬುಡಕಟ್ಟು ಜನಾಂಗದ ಮೊದಲ ಮಹಿಳೆಯಾಗಿದ್ದಾರೆ. UPSC ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸಂದರ್ಶನಕ್ಕೆ ಹಾಜರಾಗಲು ಶ್ರೀಧನ್ಯಾ ಬಳಿ ಸಾಕಷ್ಟು ಹಣವಿರಲಿಲ್ಲ. ಆಗ ಆತನ ಸ್ನೇಹಿತರು ಹಣ ಸಂಗ್ರಹಿಸಿ ಇವರನ್ನು ಸಂದರ್ಶನಕ್ಕಾಗಿ ದೆಹಲಿಗೆ ಕಳುಹಿಸಿದ್ದರು.

    MORE
    GALLERIES

  • 68

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    ಪ್ರಸ್ತುತ ಅವರು ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದ ಪರಿಸ್ಥಿತಿಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿಯಾದ ಶ್ರೀಧನ್ಯಾ ಸುರೇಶ್ ಅವರ ಕಥೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 78

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    4) ಅನ್ಸಾರ್ ಅಹಮದ್ ಶೇಖ್: ಕೇವಲ 21ನೇ ವಯಸ್ಸಿನಲ್ಲೇ ಇವರು ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅನ್ಸಾರ್ ಅವರ ತಂದೆ ಯೂನಸ್ ಶೇಖ್ ಅಹಮದ್ ಆಟೋರಿಕ್ಷಾ ಚಾಲಕರಾಗಿದ್ದರು. ಐಎಎಸ್ ಆಗಬೇಕೆಂಬ ಅನ್ಸಾರ್ ಅವರ ಗುರಿಯನ್ನು ಈಡೇರಿಸಲು, ಅವರ ಸಹೋದರ ಶಾಲೆಯನ್ನು ತೊರೆದು ಮೆಕ್ಯಾನಿಕ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

    MORE
    GALLERIES

  • 88

    UPSC Success Story: ಕಷ್ಟಗಳನ್ನು ಮೆಟ್ಟಿ ನಿಂತು IAS ಅಧಿಕಾರಿಗಳಾದ ಇವರ ಕಥೆ ಎಂಥವರನ್ನೂ ಭಾವುಕರಾಗಿಸುತ್ತೆ

    ಅನ್ಸಾರ್ ಕೂಡ ತನ್ನ ತಂದೆ ಮತ್ತು ಸಹೋದರನ ಶ್ರಮವನ್ನು ತಿಳಿದು ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ಮುಂದುವರೆಸಿದರು. ಸತತ ಮೂರು ವರ್ಷಗಳ ಕಾಲ ಪ್ರತಿದಿನ 12 ಗಂಟೆಗಳ ಕಾಲ ಅಧ್ಯಯನ ಮಾಡಿದರು. ಅಂತಿಮವಾಗಿ 2015 ರಲ್ಲಿ ಅವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು.

    MORE
    GALLERIES