UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

UPSC Exam Result 2023: ಕೇಂದ್ರ ಲೋಕಸೇವಾ ಆಯೋಗ ನಡೆಸುವ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಅನೇಕ ಮಂದಿ ಕನ್ನಡಿಗರು ಯಶಸ್ಸು ಸಾಧಿಸಿರುವುದು ನಿಜಕ್ಕೂ ಶ್ಲಾಘನೀಯ.

First published:

  • 17

    UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

    ಕೇಂದ್ರ ಲೋಕಸೇವಾ ಆಯೋಗ ನಡೆಸುವ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಅನೇಕ ಮಂದಿ ಕನ್ನಡಿಗರು ಯಶಸ್ಸು ಸಾಧಿಸಿರುವುದು ನಿಜಕ್ಕೂ ಶ್ಲಾಘನೀಯ. ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆ ಮಾಡಿ, ರಾಜ್ಯಕ್ಕೆ ಮತ್ತು ಹೆತ್ತವರಿಗೆ ಹೆಮ್ಮೆ ತಂದಿದ್ದಾರೆ. ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    MORE
    GALLERIES

  • 27

    UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

    ಕರ್ನಾಟಕದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್
    ಕೇಂದ್ರ ಲೋಕಸೇವಾ ಆಯೋಗ ನಡೆಸುವ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಕರ್ನಾಟಕದ 25ಕ್ಕೂ ಹೆಚ್ಚು ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು, ದೇಶಾದ್ಯಂತ ಒಟ್ಟು 933 ಮಂದಿ ಯುಪಿಎಸ್​ಸಿ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಇವರಲ್ಲಿ 345 ಮಂದಿ ಸಾಮಾನ್ಯ ಅಭ್ಯರ್ಥಿಗಳು, 99 ಮಂದಿ ಆರ್ಥಿಕವಾಗಿ ಹಿಂದುಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಇನ್ನು, ಇವರಲ್ಲಿ 263 ಜನರು ಒಬಿಸಿ, 154 ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದ್ರೆ, ಬಾಕಿ 72 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.

    MORE
    GALLERIES

  • 37

    UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

    ಈ ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಇಷಿತಾ ಕಿಶೋರ್ ಎಂಬ ಅಭ್ಯರ್ಥಿ ಈ ಬಾರಿಯ ಯುಪಿಎಸ್​ಸಿ ಪರೀಕ್ಷೆಯ ಟಾಪರ್ ಆಗಿ ಮಿಂಚಿದ್ದಾರೆ. ಮೊದಲ ಮೂರು ಸ್ಥಾನಗಳೂ ಮಹಿಳೆಯರ ಪಾಲಾಗಿವೆ. ಇನ್ನು, ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಕನ್ನಡಿಗರ ಬಗ್ಗೆ ಇಲ್ಲಿದೆ ಮಾಹಿತಿ.

    MORE
    GALLERIES

  • 47

    UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

    ಹುಬ್ಬಳ್ಳಿಯ ಸಿದ್ದಲಿಂಗಪ್ಪ 589ನೇ ಶ್ರೇಣಿ
    ಯುಪಿಎಸ್​ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ಯುವಕ ಸಾಧನೆ ಮಾಡಿದ್ದಾನೆ. ಕೆಎಸ್​ಆರ್​ಟಿಸಿ ಡ್ರೈವರ್ ಮಗನಾಗಿರುವ ಸಿದ್ದಲಿಂಗಪ್ಪ ಕೆ ಪೂಜಾರ್ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 589ನೇ ಶ್ರೇಣಿಯಲ್ಲಿ ಪರೀಕ್ಷೆ ಪಾಸ್ ಮಾಡಿ ಯಶಸ್ಸು ಪಡೆದಿದ್ದಾರೆ. ಇವರು ಮೂಲತಃ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ. ಕಡು ಬಡತನವಿದ್ದರೂ ಕಷ್ಟಪಟ್ಟು ಓದಿ ಸಾಧನೆ ಮಾಡಿದ್ದಾರೆ.

    MORE
    GALLERIES

  • 57

    UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

    ಶಿವಮೊಗ್ಗದ ಮೇಘನಾ 617ನೇ ಶ್ರೇಣಿ
    ಶಿವಮೊಗ್ಗ ಜಿಲ್ಲೆಯ ಹಾಲ್ಕೊಳ ಬಡಾವಣೆಯ ಐ.ಎನ್.ಮೇಘನಾ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಯಶಸ್ಸು ಗಳಿಸಿದ್ದಾರೆ. ಇವರು ಯುಪಿಎಸ್​​ಸಿ ಪರೀಕ್ಷೆಯಲ್ಲಿ 617ನೇ ರ್ಯಾಂಕ್ ಪಡೆದಿದ್ದಾರೆ. ಮೇಘನಾ ಕಳೆದ ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೆ ಸಂದರ್ಶನ ಎದುರಿಸುವಲ್ಲಿ ವಿಫಲರಾಗಿದ್ದರು. ಈ ಬಾರಿ ಮರಳಿ ಯತ್ನವ ಮಾಡುವ ಎನ್ನುವ ರೀತಿ, ಛಲ ಬಿಡದೆ ಮತ್ತೆ ಪರೀಕ್ಷೆ ಬರೆದಿದ್ದಾರೆ. ಇವರು ಸಂದರ್ಶನದಲ್ಲಿ ಪಾಸಾಗಲಿ ಎಂದು ಹಾರೈಸೋಣ.

    MORE
    GALLERIES

  • 67

    UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

    ಬೆಳಗಾವಿಯ ಶೃತಿ 362ನೇ ಶ್ರೇಣಿ
    ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣ ಶೃತಿ ಯರಗಟ್ಟಿ 362 ನೇ ರ್ಯಾಂಕ್ ಪಡೆದಿದ್ದಾರೆ. ಸತತ 5 ಬಾರಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ವಿಫಲವಾಗಿದ್ದ ಶೃತಿ, ಈಗ 6ನೇ ಬಾರಿಗೆ ತೇರ್ಗಡೆಯಾಗಿದ್ದಾರೆ.

    MORE
    GALLERIES

  • 77

    UPSC ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಮಂದಿ ಕನ್ನಡಿಗರು ತೇರ್ಗಡೆ- ಈ ಬಾರಿಯೂ ಮಹಿಳೆಯರದ್ದೇ ಮೇಲುಗೈ

    ವಿಜಯಪುರದ ಅರ್ಜುನ್ 890ನೇ ಶ್ರೇಣಿ
    ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ್ ತಾಂಡಾ ನಿವಾಸಿಯಾದ ಯಲಗೂರೇಶ ಅರ್ಜುನ ನಾಯಕ್ ಯುಪಿಎಸ್​ಸಿ ಪರೀಕ್ಷೆಯಲ್ಲಿ 890 ನೇ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. ತಾಂಡಾ ಹುಡುಗನ ಸಾಧನೆ ಹೆತ್ತವರಲ್ಲಿ ಖುಷಿಯನ್ನು ಇಮ್ಮಡಿಗೊಳಿಸಿದೆ.

    MORE
    GALLERIES