UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

IAS Sourabh Swami Success Story: ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿಯಲ್ಲಿ ಯಶಸ್ವಿಯಾಗಲು ಅನೇಕರಿಗೆ ಬಹಳಷ್ಟು ವರ್ಷಗಳೇ ಹಿಡಿಯುತ್ತವೆ. ಆದರೆ ಕೆಲವರು ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಯಶಸ್ಸು ಕಾಣುತ್ತಾರೆ. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ನಮ್ಮ ಅತಿಥಿ ಕೇವಲ 3 ತಿಂಗಳುಗಳ ಕಾಲ ತಯಾರಿ ನಡೆಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಪಾಸ್ ಆಗಿ ಐಎಎಸ್ ಅಧಿಕಾರಿಯಾಗಿದ್ದಾರೆ. ಐಎಎಸ್ ಸೌರಭ್ ಸ್ವಾಮಿಯ ಯಶಸ್ಸಿನ ಹಾದಿ ಇಲ್ಲಿದೆ.

First published:

  • 17

    UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

    ಹರಿಯಾಣದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸೌರಭ್ ಸ್ವಾಮಿಯ ಕಥೆ ತುಂಬಾ ಸ್ಪೂರ್ತಿದಾಯಕವಾಗಿದೆ. ಸಿಹಿ ಮಾರುವ ವ್ಯಕ್ತಿಯ ಮಗ ಮುಂದೊಂದು ದಿನ ದೇಶದ ಅತ್ಯುನ್ನತ ಸೇವೆಗೆ ಸೇರುತ್ತಾನೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಅವರು ತಮ್ಮ ತಂದೆಯ ಕನಸನ್ನು ನನಸಾಗಿಸುವುದು ಮಾತ್ರವಲ್ಲದೆ ಇಡೀ ಕುಟುಂಬಕ್ಕೆ ಗೌರವವನ್ನು ತಂದಿದ್ದಾರೆ.

    MORE
    GALLERIES

  • 27

    UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

    ಸೌರಭ್ ಸ್ವಾಮಿ ಹರಿಯಾಣದ ಚರ್ಕಿ ದಾದ್ರಿಯಲ್ಲಿ ಸಾಮಾನ್ಯ ಕುಟುಂಬಕ್ಕೆ ಸೇರಿದವರು. ಕುಟುಂಬದ ಮುಖ್ಯಸ್ಥರು ರೋಹ್ಟಕ್ ಚೌಕ್ ನಲ್ಲಿ ಸಿಹಿತಿಂಡಿಗಳು ಮತ್ತು ಕುಲ್ಫಿಗಳನ್ನು ಮಾರಾಟ ಮಾಡುತ್ತಿದ್ದರು. 1989ರ ಡಿಸೆಂಬರ್ 1ರಂದು ಸೌರಭ್ ಸ್ವಾಮಿ ಜನಿಸಿದ್ದಾರೆ. ಸೌರಭ್ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು ಮತ್ತು ಅವರ ಶ್ರಮ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಅವರು ತಮ್ಮ ಕುಟುಂಬವನ್ನು ಬಡತನದಿಂದ ಬಚಾವ್ ಆಗಿದ್ದಾರೆ.

    MORE
    GALLERIES

  • 37

    UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

    ಸೌರಭ್ ಸ್ವಾಮಿ ಚಾರ್ಖಿ ದಾದ್ರಿಯಲ್ಲಿರುವ ಎಪಿಜೆ ಶಾಲೆಯಲ್ಲಿ 12 ನೇ ತರಗತಿಯವರೆಗೆ ಓದಿದ್ದಾರೆ. ನಂತರ ದೆಹಲಿಗೆ ಬಂದರು. ಇಲ್ಲಿ ಅವರು ಭಾರತೀಯ ವಿದ್ಯಾಪೀಠದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದರು.

    MORE
    GALLERIES

  • 47

    UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

    ಓದು ಮುಗಿದ ಮೇಲೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು. ಖಾಸಗಿ ಉದ್ಯೋಗದೊಂದಿಗೆ, ಅವರು UPSC ಪ್ರಿಲಿಮ್ಸ್ ಪರೀಕ್ಷೆಯಲ್ಲಿ (UPSC Prelims Exam) ಉತ್ತೀರ್ಣರಾದರು. ಸೌರಭ್ ಸ್ವಾಮಿ ಮೂರು ತಿಂಗಳಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಅವರು ದೆಹಲಿಗೆ ತೆರಳಿದ್ದರು.

    MORE
    GALLERIES

  • 57

    UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

    ದೆಹಲಿಯಲ್ಲಿ ತರಬೇತಿ ಮತ್ತು ಸ್ವಯಂ-ಅಧ್ಯಯನದ ಮೂಲಕ, ಅವರು 2014 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ UPSC ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇದರಲ್ಲಿ 149ನೇ ರ್ಯಾಂಕ್ ಪಡೆದರು. ನಂತರ ಅವರು LBSNAA ಮಸ್ಸೂರಿಯಲ್ಲಿ ತರಬೇತಿ ಪಡೆದ ನಂತರ 2015 ರಲ್ಲಿ IAS ಅಧಿಕಾರಿಯಾದರು.

    MORE
    GALLERIES

  • 67

    UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

    ಸೌರಭ್ ಸ್ವಾಮಿ ರಾಜಸ್ಥಾನ ಕೇಡರ್ ನ ಐಎಎಸ್ ಅಧಿಕಾರಿ. ಪ್ರಸ್ತುತ ಶ್ರೀಗಂಗಾನಗರದಲ್ಲಿ ಜಿಲ್ಲಾಧಿಕಾರಿಯಾಗಿ ಪೋಸ್ಟ್ ಮಾಡಲಾಗಿದೆ. ಅವರು 2017 ರಲ್ಲಿ ರಾಜಸ್ಥಾನದ ಆರ್ಜೆಎಸ್ ಅನುಭೂತಿ ಸ್ವಾಮಿ ಅವರನ್ನು ವಿವಾಹವಾದರು.

    MORE
    GALLERIES

  • 77

    UPSC Success Story: ಕೇವಲ 3 ತಿಂಗಳು ತಯಾರಿ ನಡೆಸಿ ಮೊದಲ ಪ್ರಯತ್ನದಲ್ಲೇ IAS ಆದ ಸೌರಭ್

    ಸೌರಭ್ ಇಬ್ಬರು ಸಹೋದರಿಯರ ಏಕೈಕ ಸಹೋದರ. ಸೌರಭ್ ಜೀವನದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕೆಂದು ಅವರ ತಂದೆ ಬಯಸಿದ್ದರು. ಐಎಎಸ್ ಅಧಿಕಾರಿಯಾಗುವ ಮೂಲಕ ತಂದೆಯ ಕನಸನ್ನು ನನಸು ಮಾಡಿದ್ದಾರೆ.

    MORE
    GALLERIES