UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
IAS Shivangi Goyal Success Story: ಯುಪಿಎಸ್ ಸಿ ಸಾಧಕರ ಸರಣಿಯಲ್ಲಿನ ಇಂದಿನ ಅತಿಥಿ ನಿಜಕ್ಕೂ ಬೆಂಕಿಯಲ್ಲಿ ಅರಳಿದ ಹೂ ಎನ್ನಬಹುದು. ಮುರಿದು ಬಿದ್ದ ಮದುವೆಯ ಮಧ್ಯೆಯೂ ಛಲ ಬಿಡದೇ ಜೀವನದಲ್ಲಿ ಎತ್ತರಕ್ಕೆ ಬೆಳೆದ ಐಎಎಸ್ ಅಧಿಕಾರಿ ಶಿವಂಗಿ ಗೋಯಲ್ ಅವರ ಕಥೆ ಎಂಥವರಿಗೂ ಸ್ಪೂರ್ತಿದಾಯಕ.
ಶಿವಾಂಗಿ ಗೋಯಲ್ ಅವರು ಉತ್ತರ ಪ್ರದೇಶದ ಹಾಪುರ್ ನ ಪಿಲ್ಖುವಾ ಪಟ್ಟಣದ ನಿವಾಸಿ. ಓದಿನಲ್ಲಿ ಚುರುಕಾಗಿದ್ದ ಶಿವಾಂಗಿಯ ಬದುಕು ಮದುವೆಯ ಬಳಿಕ ನರಕವಾಗಿತ್ತು. ಮದುವೆಗೂ ಮುನ್ನ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಆದರೆ ಎರಡೂ ಬಾರಿ ವಿಫಲವಾಯಿತು.
2/ 7
ಆದರೆ ಇತ್ತ ವೈವಾಹಿಕ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಮದುವೆಯ ನಂತರ ಪತಿ ಮತ್ತು ಅತ್ತೆ ಅವರನ್ನು ಸಾಕಷ್ಟು ಹಿಂಸಿಸುತ್ತಿದ್ದರು. ನಿತ್ಯ ಪತಿ-ಅತ್ತೆ ಹೊಡೆಯುತ್ತಿದ್ದರು. ಇದರ ಮಧ್ಯೆಯೇ ಶಿವಾಂಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳು ಹುಟ್ಟಿದ ಮೇಲೆ ದಾಂಪತ್ಯ ಸರಿ ಹೋಗುತ್ತೆ ಎಂದುಕೊಂಡಿದ್ದರು ಶಿವಾಂಗಿ. ಆದರೆ ಅದು ಕೂಡ ಸುಳ್ಳಾಯಿತು.
3/ 7
ಕೊನೆಗೆ ಒಂದು ದಿನ ಕಾಟ ತಾಳಲಾರದೆ ಮಗಳಿನೊಂದಿಗೆ ಶಿವಾಂಗಿ ಅವರು ತವರುಮನೆ ಸೇರಿದರು. 7 ವರ್ಷದ ಮಗಳೊಂದಿಗೆ ಮನೆಗೆ ಬಂದಾಗ ತಂದೆ ಆಸರೆಯಾದರು. ನಿನ್ನ ಕಾಲಿನ ಮೇಲೆ ನಿಲ್ಲಲು ನೀನು ಏನು ಬೇಕಾದರೂ ಮಾಡಬಹುದು ಎಂದು ತಂದೆ ಸಲಹೆ ನೀಡಿದರು.
4/ 7
ಎಲ್ಲಾ ನೋವನ್ನು ನುಂಗಿಕೊಂಡು ಮಗಳಿಗಾಗಿ ಶಿವಾಂಗಿ ಅವರು ಮತ್ತೆ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಈ ಬಾರಿ ಅಂದರೆ 2021ರಲ್ಲಿ ಮೂರನೇ ಪ್ರಯತ್ನದಲ್ಲಿ 177ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.
5/ 7
UPSC ಪರೀಕ್ಷೆಯ ಫಲಿತಾಂಶ ಬರುವಾಗಲೂ ಶಿವಂಗಿ ಗೋಯಲ್ ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆದರೆ ಆಕೆ ಅದ್ಯಾವುದರಿಂದಲೂ ವಿಚಲಿತಳಾಗದೆ ತನ್ನ ಗುರಿ ಮುಟ್ಟಿದ್ದಳು. ಅದರಿಂದ ಆಕೆಯ ಜೀವನವೇ ಬದಲಾಯಿತು.
6/ 7
ಮದುವೆ ಆಗಿ ಹೋಯ್ತು, ಮಕ್ಕಳಿದ್ದಾರೆ ಎಂದು ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡು ಬಾಳುವ ಅಗತ್ಯವಿಲ್ಲ ಎಂದು ಶಿವಾಂಗಿ ಸಾಬೀತುಪಡಿಸಿದ್ದಾರೆ. ಎಷ್ಟೇ ಕಷ್ಟ ಇದ್ದರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
7/ 7
ಕುಟುಂಬದಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳ ಮಧ್ಯೆಯೇ ಕಳೆದು ಹೋಗುವ ಸಾವಿರಾರು ಮಂದಿಗೆ ಶಿವಾಂಗಿ ಸ್ಪೂರ್ತಿಯಾಗಿದ್ದಾರೆ. ಹೆಣ್ಣುಮಕ್ಕಳಿಗೆ ಮದುವೆ ಒಂದೇ ಜೀವನದ ಯಶಸ್ಸು ಅಲ್ಲ, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದು ನಿಜವಾದ ಯಶಸ್ಸು ಎಂದು ಶಿವಾಂಗಿ ಸಲಹೆ ನೀಡುತ್ತಾರೆ.
First published:
17
UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
ಶಿವಾಂಗಿ ಗೋಯಲ್ ಅವರು ಉತ್ತರ ಪ್ರದೇಶದ ಹಾಪುರ್ ನ ಪಿಲ್ಖುವಾ ಪಟ್ಟಣದ ನಿವಾಸಿ. ಓದಿನಲ್ಲಿ ಚುರುಕಾಗಿದ್ದ ಶಿವಾಂಗಿಯ ಬದುಕು ಮದುವೆಯ ಬಳಿಕ ನರಕವಾಗಿತ್ತು. ಮದುವೆಗೂ ಮುನ್ನ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಆದರೆ ಎರಡೂ ಬಾರಿ ವಿಫಲವಾಯಿತು.
UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
ಆದರೆ ಇತ್ತ ವೈವಾಹಿಕ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಮದುವೆಯ ನಂತರ ಪತಿ ಮತ್ತು ಅತ್ತೆ ಅವರನ್ನು ಸಾಕಷ್ಟು ಹಿಂಸಿಸುತ್ತಿದ್ದರು. ನಿತ್ಯ ಪತಿ-ಅತ್ತೆ ಹೊಡೆಯುತ್ತಿದ್ದರು. ಇದರ ಮಧ್ಯೆಯೇ ಶಿವಾಂಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳು ಹುಟ್ಟಿದ ಮೇಲೆ ದಾಂಪತ್ಯ ಸರಿ ಹೋಗುತ್ತೆ ಎಂದುಕೊಂಡಿದ್ದರು ಶಿವಾಂಗಿ. ಆದರೆ ಅದು ಕೂಡ ಸುಳ್ಳಾಯಿತು.
UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
ಕೊನೆಗೆ ಒಂದು ದಿನ ಕಾಟ ತಾಳಲಾರದೆ ಮಗಳಿನೊಂದಿಗೆ ಶಿವಾಂಗಿ ಅವರು ತವರುಮನೆ ಸೇರಿದರು. 7 ವರ್ಷದ ಮಗಳೊಂದಿಗೆ ಮನೆಗೆ ಬಂದಾಗ ತಂದೆ ಆಸರೆಯಾದರು. ನಿನ್ನ ಕಾಲಿನ ಮೇಲೆ ನಿಲ್ಲಲು ನೀನು ಏನು ಬೇಕಾದರೂ ಮಾಡಬಹುದು ಎಂದು ತಂದೆ ಸಲಹೆ ನೀಡಿದರು.
UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
ಎಲ್ಲಾ ನೋವನ್ನು ನುಂಗಿಕೊಂಡು ಮಗಳಿಗಾಗಿ ಶಿವಾಂಗಿ ಅವರು ಮತ್ತೆ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ಈ ಬಾರಿ ಅಂದರೆ 2021ರಲ್ಲಿ ಮೂರನೇ ಪ್ರಯತ್ನದಲ್ಲಿ 177ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು.
UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
UPSC ಪರೀಕ್ಷೆಯ ಫಲಿತಾಂಶ ಬರುವಾಗಲೂ ಶಿವಂಗಿ ಗೋಯಲ್ ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆದರೆ ಆಕೆ ಅದ್ಯಾವುದರಿಂದಲೂ ವಿಚಲಿತಳಾಗದೆ ತನ್ನ ಗುರಿ ಮುಟ್ಟಿದ್ದಳು. ಅದರಿಂದ ಆಕೆಯ ಜೀವನವೇ ಬದಲಾಯಿತು.
UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
ಮದುವೆ ಆಗಿ ಹೋಯ್ತು, ಮಕ್ಕಳಿದ್ದಾರೆ ಎಂದು ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡು ಬಾಳುವ ಅಗತ್ಯವಿಲ್ಲ ಎಂದು ಶಿವಾಂಗಿ ಸಾಬೀತುಪಡಿಸಿದ್ದಾರೆ. ಎಷ್ಟೇ ಕಷ್ಟ ಇದ್ದರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ
ಕುಟುಂಬದಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳ ಮಧ್ಯೆಯೇ ಕಳೆದು ಹೋಗುವ ಸಾವಿರಾರು ಮಂದಿಗೆ ಶಿವಾಂಗಿ ಸ್ಪೂರ್ತಿಯಾಗಿದ್ದಾರೆ. ಹೆಣ್ಣುಮಕ್ಕಳಿಗೆ ಮದುವೆ ಒಂದೇ ಜೀವನದ ಯಶಸ್ಸು ಅಲ್ಲ, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದು ನಿಜವಾದ ಯಶಸ್ಸು ಎಂದು ಶಿವಾಂಗಿ ಸಲಹೆ ನೀಡುತ್ತಾರೆ.