Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

Success Story: ಕಾರ್ಗಿಲ್ ಯುದ್ಧದಲ್ಲಿ ಭಾರತ ತನ್ನ ಅನೇಕ ವೀರಯೋಧರನ್ನು ಕಳೆದುಕೊಂಡಿದೆ. ಅಂತಹ ಹುತಾತ್ಮ ಯೋಧರಲ್ಲಿ ಲ್ಯಾನ್ಸ್ ನಾಯ್ಕ್ ಕೃಷ್ಣಾಜಿ ಸಮ್ರಿತ್ ಕೂಡ ಒಬ್ಬರು. ಯುದ್ಧ ಭೂಮಿಯಲ್ಲಿ ಕೃಷ್ಣಾಜಿ ಹೋರಾಡುವಾಗ ಅವರ ಹೆಂಡ್ತಿ ತುಂಬು ಗರ್ಭಿಣಿಯಾಗಿದ್ದರು. ಮಗು ಹುಟ್ಟುವ ಮೊದಲೇ ಕೃಷ್ಣಾಜಿ ವೀರಮರಣವನ್ನು ಅಪ್ಪಿದರು. ಇದಾದ 45 ದಿನಗಳ ನಂತರ ಜನಿಸಿದ ಪುತ್ರ ಈಗ ತಮ್ಮ ತಂದೆಯ ಕನಸ್ಸನ್ನು ನನಸು ಮಾಡಿದ್ದಾರೆ.

First published:

  • 19

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ಕಾರ್ಗಿಲ್ ಹುತಾತ್ಮ ಯೋಧ ಲ್ಯಾನ್ಸ್ ನಾಯ್ಕ್ ಕೃಷ್ಣಾಜಿ ಸಮ್ರಿತ್ ಅವರ ಕನಸು 24 ವರ್ಷಗಳ ಬಳಿಕ ಈಡೇರಿದೆ. ಲ್ಯಾನ್ಸ್ ನಾಯಕ್ ಕೃಷ್ಣಾಜಿ ಸಮ್ರಿತ್ ಅವರು 1999 ರಲ್ಲಿ ರಜೆ ತೆಗೆದುಕೊಂಡು ಮನೆಗೆ ಮರಳಲು ಸಿದ್ಧರಾಗಿದ್ದರು. ಅವರು ಎರಡನೇ ಬಾರಿಗೆ ತಂದೆಯಾಗಲಿರುವ ಖುಷಿಯಲ್ಲಿದ್ದರು. ಮೊದಲ ಮಗನಿಗೆ ಆಗ ಎರಡೂವರೆ ವರ್ಷ. ಆದರೆ ಅಷ್ಟರಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾಯಿತು, ಕೃಷ್ಣಾಜಿ ಅವರಿಗೆ ಮನೆಗೆ ಬರಲು ಸಾಧ್ಯವಾಗಲಿಲ್ಲ. ಅದೇ ಯುದ್ಧದಲ್ಲಿ ಅವರು ಹುತಾತ್ಮರಾದರು.

    MORE
    GALLERIES

  • 29

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ಎರಡನೇ ಮಗ ಪ್ರಜ್ವಲ್ ತಂದೆ ಹುತಾತ್ಮರಾದ 45 ದಿನಗಳ ನಂತರ ಜನಿಸಿದ. ತಮ್ಮ ಮಗನೂ ಸೇನೆಗೆ ಸೇರಬೇಕು ಎಂಬುದು ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಅವರ ಕನಸಾಗಿತ್ತು. ಆದರೆ ಹಿರಿಯ ಮಗ ಕುನಾಲ್ ಸೈನ್ಯಕ್ಕೆ ಸೇರಲಿಲ್ಲ, ಆತ ಎಂಜಿನಿಯರಿಂಗ್ ಮಾಡಿದನು.

    MORE
    GALLERIES

  • 39

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ಕಿರಿಯ ಮಗ ಪ್ರಜ್ವಲ್ ಬೆಳೆದು ತನ್ನ ತಂದೆಯ ಕನಸನ್ನು ತಿಳಿದಾಗ, ಅದನ್ನು ಪೂರೈಸಲು ನಿರ್ಧರಿಸಿದರು. ಹುತಾತ್ಮ ತಂದೆಯ ಕನಸನ್ನು ನನಸು ಮಾಡಲು, ಮಗ 9 SSB ಸಂದರ್ಶನಗಳನ್ನು ನೀಡಿದರು. ಕೊನೆಗೂ ಪ್ರಜ್ವಲ್ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಪ್ರಜ್ವಲ್ ಮುಂದಿನ ತಿಂಗಳು ಜೂನ್ ಮೊದಲ ವಾರದಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (IMA) ಕೆಡೆಟ್ ಗಳನ್ನು ಸೇರಿಕೊಳ್ಳಲಿದ್ದಾರೆ.

    MORE
    GALLERIES

  • 49

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ತನ್ನ ತಂದೆಯ ಕನಸನ್ನು ನನಸು ಮಾಡಲು ಪ್ರಜ್ವಲ್ ಸೆಕೆಂಡ್ ಪಿಯು ನಂತರ 2018 ರಲ್ಲಿ NDA ಗೆ ತಯಾರಿ ನಡೆಸಲು ಆರಂಭಿಸಿದರ. ಮೊದಲ ಬಾರಿಗೆ SSB ಪರೀಕ್ಷೆಯಲ್ಲಿ ಉತ್ತೀರ್ಣರಾದರು. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 59

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡಲು ಅಭ್ಯರ್ಥಿಯನ್ನು ನಿರ್ಧರಿಸಲು SSB (ಸೇವೆಗಳ ಆಯ್ಕೆ ಮಂಡಳಿ) ಅಭ್ಯರ್ಥಿಗಳನ್ನು ಮಾನಸಿಕ ಮತ್ತು ವ್ಯಕ್ತಿತ್ವ ಪರೀಕ್ಷೆಗಳ ಮೂಲಕ ಮೌಲ್ಯಮಾಪನ ಮಾಡುತ್ತದೆ. ಮೊದಲ ಬಾರಿಗೆ ಪ್ರಜ್ವಲ್ ವೈದ್ಯಕೀಯ ಪರೀಕ್ಷೆಯಲ್ಲಿ ವಿಫಲರಾಗಿದ್ದರು.

    MORE
    GALLERIES

  • 69

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ಪ್ರಜ್ವಲ್ ಇನ್ನೂ ಏಳು SSB ಸಂದರ್ಶನಗಳನ್ನು ನೀಡಿದರು. ಪ್ರತಿ ಬಾರಿ ಸ್ಕ್ರೀನಿಂಗ್ ನಲ್ಲಿ ಉತ್ತೀರ್ಣರಾದರೂ, ಕೊನೆ ಹಂತದಲ್ಲಿ ಹೊರಹಾಕಲ್ಪಟ್ಟರು. ತಂದೆಯ ಕನಸು ನನಸಾಗಬೇಕು ಎಂಬ ಛಲದಿಂದ ಪ್ರಜ್ವಲ್ ಪ್ರಯತ್ನವನ್ನು ಬಿಡಲಿಲ್ಲ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 79

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    8 ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದಿದ್ದರೂ, ಅವರು ಭಾರತೀಯ ಸೇನೆಗೆ ಹೋಗುತ್ತೇನೆ ಎಂದು ಮನಸ್ಸಿನಲ್ಲಿ ದೃಢವಾಗಿದ್ದಾರೆ. ಪ್ರಜ್ವಲ್ 9ನೇ ಕೊನೆಯ ಅವಕಾಶಕ್ಕಾಗಿ ಬ್ಯಾಕಪ್ ಸಿದ್ಧಪಡಿಸಿದರು. ಇದಕ್ಕಾಗಿ CAT ಪರೀಕ್ಷೆಯನ್ನು ತೆಗೆದುಕೊಂಡು ಯಶಸ್ವಿಯಾಗಿದ್ದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ಕಾಮನ್ ಅಡ್ಮಿಷನ್ ಟೆಸ್ಟ್ (CAT)ನಲ್ಲಿ ತೇರ್ಗಡೆಯಾದ ನಂತರ ಪ್ರಜ್ವಲ್ ಐಐಎಂ ಇಂದೋರ್ ಮತ್ತು ಕೋಝಿಕ್ಕೋಡ್ ನಿಂದ ಜಾಬ್ ಆಫರ್ ಗಳನ್ನು ಪಡೆದರು. ಆದರೆ ಪ್ರಜ್ವಲ್ ಐಐಎಂಗೆ ಹೋಗದಿರಲು ನಿರ್ಧರಿಸಿದರು, ಅವರು ಭಾರತೀಯ ಮಿಲಿಟರಿ ಅಕಾಡೆಮಿ ಸೇರಲು ದೃಢ ನಿರ್ಧಾರ ಮಾಡಿದ್ದರು. ಇತ್ತ ಕೊನೆ ಪ್ರಯತ್ನದಲ್ಲಿ ಅದೃಷ್ಟ ಅವರ ಕೈ ಹಿಡಿಯಿತು.

    MORE
    GALLERIES

  • 99

    Inspiring: ತಂದೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ 45 ದಿನಗಳ ನಂತರ ಹುಟ್ಟಿದ ಮಗ; ಈಗ ಅವರ ಕನಸು ನನಸು ಮಾಡಿದ

    ಕಿರಿಯ ಮಗ ಪ್ರಜ್ವಲ್ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಹೋಗುತ್ತಿರುವುದು ಅವರ ತಾಯಿ ಸವಿತಾ ಅವರಿಗೆ ಹೆಮ್ಮೆ ತಂದಿದೆ. ಮರೆಯಾದ ಪತಿಯ ಧೈರ್ಯ-ಸ್ಥೈರ್ಯ, ದೇಶ ಪ್ರೇಮವನ್ನು ಮಗನಲ್ಲಿ ಕಾಣುತ್ತಿದ್ದಾರೆ. ಮಗನ ಮೂಲಕ ಅವರ ತಂದೆ ಇನ್ನೂ ಜೀವಂತವಾಗಿದ್ದಾರೆ ಎಂದು ಸವಿತಾ ಅವರು ಭಾವುಕರಾಗಿ ಮಾತನಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES