IPL ಸೀಸನ್ 13 ಆರಂಭಕ್ಕೂ ಮುನ್ನವೇ ಒಂದರ ಮೇಲೊಂದು ಹೊಡೆತ ಬಿದ್ದದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ. ಮೊದಲು ತಂಡದ 13 ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಸಿಎಸ್ಕೆ ಮ್ಯಾನೇಜ್ಮೆಂಟ್ ಹೈರಾಣಾಗಿತ್ತು.
2/ 10
ಇದರ ಬೆನ್ನಲ್ಲೇ ಸಿಎಸ್ಕೆ ಸ್ಟಾರ್ ಆಟಗಾರ ಸುರೇಶ್ ರೈನಾ ಟೂರ್ನಿಯನ್ನು ತೊರೆದು ದುಬೈನಿಂದ ಭಾರತಕ್ಕೆ ಮರಳಿದ್ದರು. ಕೊರೋನಾ ಶಾಕ್ ಮರೆಯಾಗುವ ಮೊದಲೇ ರೈನಾ ಅಲಭ್ಯ ಸುದ್ದಿ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
3/ 10
ರೈನಾ ಸುದ್ದಿ ಮರೆಯಾಗುವ ಮೊದಲೇ ಹರ್ಭಜನ್ ಸಿಂಗ್ ಕೂಡ ವೈಯುಕ್ತಿಕ ಕಾರಣಗಳಿಂದ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದು ಘೋಷಿಸಿದರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ಆಟಗಾರರನ್ನು ಕಳೆದುಕೊಂಡಿದ್ದರಿಂದ ಸಿಎಸ್ಕೆ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
4/ 10
ಆದರೆ ಇದ್ಯಾವುದಕ್ಕೂ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಡಿ. ತಂಡದಲ್ಲಿ ತಲೈವಾ ಇದ್ದಾನೆ. ಎಲ್ಲವನ್ನೂ ಆತನೇ ನಿಭಾಯಿಸಿಕೊಳ್ಳುತ್ತಾನೆ. ನಿಮ್ಮ ಬೆಂಬಲವೊಂದಿದ್ರೆ ಸಾಕು ಅಂದಿದ್ದಾರೆ ಸಿಎಸ್ಕೆ ಸಿಇಒ.
5/ 10
ಹೌದು ತಂಡದ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಗುಳಿದಿರುವುದು ಸೂಪರ್ ಕಿಂಗ್ಸ್ನ ಸೂಪರ್ ಫ್ಯಾನ್ಸ್ಗೆ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಕೆಲವರು ಇಬ್ಬರ ಅನುಪಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.
6/ 10
ಹೀಗೆ ತಂಡದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುವ ಅಭಿಮಾನಿಗಳಿಗೆ ಸಿಎಸ್ಕೆ ಮೇಲೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ ಸಿಇಒ ಕಾಶಿ ವಿಶ್ವನಾಥನ್. ಅಭಿಮಾನಿಗಳು ಯಾರೂ ಕೂಡ ತಂಡದ ಬಗ್ಗೆ ಚಿಂತಿತರಾಗಬೇಡಿ. ಎಲ್ಲವನ್ನೂ ಧೋನಿ ನಿಭಾಯಿಸಿಕೊಳ್ಳುತ್ತಾರೆ.
7/ 10
ಈ ಬಾರಿ ಕೂಡ ನಮ್ಮ ತಂಡ ಸಮತೋಲನದಿಂದ ಕೂಡಿದೆ. ಇಂತಹ ಅನೇಕ ಕಠಿಣ ಸಂದರ್ಭಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿದ ಅನುಭವ ಧೋನಿಗಿದೆ. ತಲೈವಾ (ಧೋನಿ) ತಂಡವನ್ನು ಖಂಡಿತವಾಗಿಯೂ ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ.
8/ 10
ಆಟಗಾರರು ಸಹ ಉತ್ತಮ ಮನೋಭಾವದಲ್ಲಿದ್ದಾರೆ. ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ. ಅಲ್ಲಿ ತರಬೇತುದಾರ ಮತ್ತು ನಾಯಕ ಆಟಗಾರರನ್ನು ಉದ್ದೇಶಿಸಿ ಚರ್ಚಿಸುತ್ತಿದ್ದಾರೆ. ನಾವು ಕಠಿಣ ಪರಿಸ್ಥಿತಿಯಿಂದ ಹೊರಬರುತ್ತೇವೆ. ಈಗಾಗಲೇ ಎಲ್ಲೊ ಫೀವರ್ ಶುರುವಾಗಿದೆ.
9/ 10
ಅಭಿಮಾನಿಗಳ ಬೆಂಬಲ ನಮಗೆ ದುಬೈನಲ್ಲಿಯೂ ತುಂಬಾ ಅವಶ್ಯಕ. ಸಿಎಸ್ಕೆ ಅಭಿಮಾನಿಗಳು ತಂಡಕ್ಕೆ ಬಹಳ ಮುಖ್ಯ ಮತ್ತು ನಿಮ್ಮ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.
10/ 10
CSK
First published:
110
IPL 2020: ಡೋಂಟ್ ವರಿ...ಧೋನಿ ಇದ್ದಾರೆ..!
IPL ಸೀಸನ್ 13 ಆರಂಭಕ್ಕೂ ಮುನ್ನವೇ ಒಂದರ ಮೇಲೊಂದು ಹೊಡೆತ ಬಿದ್ದದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ. ಮೊದಲು ತಂಡದ 13 ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಸಿಎಸ್ಕೆ ಮ್ಯಾನೇಜ್ಮೆಂಟ್ ಹೈರಾಣಾಗಿತ್ತು.
ಇದರ ಬೆನ್ನಲ್ಲೇ ಸಿಎಸ್ಕೆ ಸ್ಟಾರ್ ಆಟಗಾರ ಸುರೇಶ್ ರೈನಾ ಟೂರ್ನಿಯನ್ನು ತೊರೆದು ದುಬೈನಿಂದ ಭಾರತಕ್ಕೆ ಮರಳಿದ್ದರು. ಕೊರೋನಾ ಶಾಕ್ ಮರೆಯಾಗುವ ಮೊದಲೇ ರೈನಾ ಅಲಭ್ಯ ಸುದ್ದಿ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
ರೈನಾ ಸುದ್ದಿ ಮರೆಯಾಗುವ ಮೊದಲೇ ಹರ್ಭಜನ್ ಸಿಂಗ್ ಕೂಡ ವೈಯುಕ್ತಿಕ ಕಾರಣಗಳಿಂದ ಈ ಬಾರಿ ಐಪಿಎಲ್ ಆಡುವುದಿಲ್ಲ ಎಂದು ಘೋಷಿಸಿದರು. ಬ್ಯಾಕ್ ಟು ಬ್ಯಾಕ್ ಸ್ಟಾರ್ ಆಟಗಾರರನ್ನು ಕಳೆದುಕೊಂಡಿದ್ದರಿಂದ ಸಿಎಸ್ಕೆ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಇದ್ಯಾವುದಕ್ಕೂ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಡಿ. ತಂಡದಲ್ಲಿ ತಲೈವಾ ಇದ್ದಾನೆ. ಎಲ್ಲವನ್ನೂ ಆತನೇ ನಿಭಾಯಿಸಿಕೊಳ್ಳುತ್ತಾನೆ. ನಿಮ್ಮ ಬೆಂಬಲವೊಂದಿದ್ರೆ ಸಾಕು ಅಂದಿದ್ದಾರೆ ಸಿಎಸ್ಕೆ ಸಿಇಒ.
ಹೌದು ತಂಡದ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಗುಳಿದಿರುವುದು ಸೂಪರ್ ಕಿಂಗ್ಸ್ನ ಸೂಪರ್ ಫ್ಯಾನ್ಸ್ಗೆ ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಕೆಲವರು ಇಬ್ಬರ ಅನುಪಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ.
ಹೀಗೆ ತಂಡದ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿರುವ ಅಭಿಮಾನಿಗಳಿಗೆ ಸಿಎಸ್ಕೆ ಮೇಲೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದ್ದಾರೆ ಸಿಇಒ ಕಾಶಿ ವಿಶ್ವನಾಥನ್. ಅಭಿಮಾನಿಗಳು ಯಾರೂ ಕೂಡ ತಂಡದ ಬಗ್ಗೆ ಚಿಂತಿತರಾಗಬೇಡಿ. ಎಲ್ಲವನ್ನೂ ಧೋನಿ ನಿಭಾಯಿಸಿಕೊಳ್ಳುತ್ತಾರೆ.
ಈ ಬಾರಿ ಕೂಡ ನಮ್ಮ ತಂಡ ಸಮತೋಲನದಿಂದ ಕೂಡಿದೆ. ಇಂತಹ ಅನೇಕ ಕಠಿಣ ಸಂದರ್ಭಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿದ ಅನುಭವ ಧೋನಿಗಿದೆ. ತಲೈವಾ (ಧೋನಿ) ತಂಡವನ್ನು ಖಂಡಿತವಾಗಿಯೂ ಯಶಸ್ವಿಯಾಗಿ ನಿಭಾಯಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ.
ಆಟಗಾರರು ಸಹ ಉತ್ತಮ ಮನೋಭಾವದಲ್ಲಿದ್ದಾರೆ. ಅವರು ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ. ಅಲ್ಲಿ ತರಬೇತುದಾರ ಮತ್ತು ನಾಯಕ ಆಟಗಾರರನ್ನು ಉದ್ದೇಶಿಸಿ ಚರ್ಚಿಸುತ್ತಿದ್ದಾರೆ. ನಾವು ಕಠಿಣ ಪರಿಸ್ಥಿತಿಯಿಂದ ಹೊರಬರುತ್ತೇವೆ. ಈಗಾಗಲೇ ಎಲ್ಲೊ ಫೀವರ್ ಶುರುವಾಗಿದೆ.
ಅಭಿಮಾನಿಗಳ ಬೆಂಬಲ ನಮಗೆ ದುಬೈನಲ್ಲಿಯೂ ತುಂಬಾ ಅವಶ್ಯಕ. ಸಿಎಸ್ಕೆ ಅಭಿಮಾನಿಗಳು ತಂಡಕ್ಕೆ ಬಹಳ ಮುಖ್ಯ ಮತ್ತು ನಿಮ್ಮ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ.