Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

ಸಿನಿಮಾ ಇಂಡಸ್ಟ್ರಿಯಲ್ಲಿ ಲವ್, ಡೇಟಿಂಗ್, ಮದುವೆ, ಡಿವೋರ್ಸ್ ಕಾಮನ್ ಆಗಿ ಹೋಗಿದೆ. ಅನೇಕ ಜೋಡಿಗಳು ಮದುವೆಯಾದ ಕೆಲ ವರ್ಷಗಳಲ್ಲೇ ದೂರವಾಗಿದೆ. ಹೃತಿಕ್ ರೋಷನ್ - ಸುಸನ್ನೆ ಖಾನ್, ಮಲೈಕಾ ಅರೋರಾ - ಅರ್ಬಾಜ್ ಖಾನ್, ಸೈಫ್ ಅಲಿ ಖಾನ್ - ಅಮೃತಾ ಅವರೆಲ್ಲ ವಿಚ್ಛೇದನ ಪಡೆದು ಮುಂದೆ ಹೋಗಿದ್ದಾರೆ. ಅವರಂತೆಯೇ ಸಮಂತಾ ರುತ್ ಪ್ರಭು ಮತ್ತು ತೆಲುಗು ನಟ ನಾಗ ಚೈತನ್ಯ ಟಾಲಿವುಡ್ ಸೂಪರ್ ಜೋಡಿಯಾಗಿದ್ದರು ಬಳಿಕ ಈ ಜೋಡಿ ವಿಚ್ಛೇದನ ಘೋಷಿಸಿದೆ.

First published:

  • 18

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ತೆರೆ ಮೇಲೆ ಸಮಂತಾ, ನಾಗ ಚೈತನ್ಯ ಜೋಡಿ ನೋಡಿದ ಅನೇಕರು ಅದ್ಭುತ ಕೆಮಿಸ್ಟ್ರಿ ಎನ್ನುತ್ತಿದ್ರು. ಆದ್ರೆ ಈಗ ಇಬ್ಬರು ಬೇರೆಯಾಗಿದ್ದಾರೆ. ಇಬ್ಬರೂ 2017ರಲ್ಲಿ ವಿವಾಹವಾದರು 4 ವರ್ಷದ ಬಳಿಕ ಅಂದ್ರೆ 2021 ಅಕ್ಟೋಬರ್ 2ರಂದು ವಿಚ್ಛೇದನ ಘೋಷಿಸಿದರು.

    MORE
    GALLERIES

  • 28

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ಸಮಂತಾ, ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ರು, ಆದ್ರೆ ಇಬ್ಬರು ವಿಚ್ಛೇದನಕ್ಕೆ ಕಾರಣ ಏನು ಅನ್ನೋದನ್ನು ಮಾತ್ರ ತಿಳಿಸಿಲ್ಲ. ಈ ಹಿನ್ನೆಲೆ ಹಲವು ಕಾರಣಗಳು ಭಾರೀ ಸುದ್ದಿಯಾಗಿದೆ. ಸಮಂತಾ ಜೀವನಕ್ಕೆ ಈ ವ್ಯಕ್ತಿ ಬಂದಿದ್ದೆ ಇಬ್ಬರ ವಿಚ್ಛೇದನಕ್ಕೆ ಕಾರಣ ಎನ್ನಲಾಗ್ತಿದೆ. ಯಾರು ಆತ ಗೊತ್ತಾ?

    MORE
    GALLERIES

  • 38

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನಕ್ಕೆ ಒಬ್ಬ ವ್ಯಕ್ತಿ ಕಾರಣ ಎನ್ನುವ ಮಾತುಗಳು ಕೇಳಿ ಬರ್ತಿದೆ. ಈ ಜೋಡಿ ವಿಚ್ಛೇದನ ಬಳಿಕ ಭಾರೀ ಸುದ್ದಿಯಾಗಿದ್ದಾರೆ. ಇಬ್ಬರು ದೂರವಾಗಿ ವರ್ಷಗಳೇ ಕಳೆದ್ರು ಜನ ಇವ್ರು ದೂರಾಗಲು ಕಾರಣ ಏನು ಅನ್ನೋದನ್ನು ಹುಡುಕುತ್ತಿದ್ದಾರೆ. ಇಬ್ಬರ ಸಂಬಂಧ ಮುರಿಯಲು ಸ್ಯಾಮ್ ಆಪ್ತ ಸ್ನೇಹಿತ ಮತ್ತು ಸ್ಟೈಲಿಸ್ಟ್ ಪ್ರೀತಮ್ ಜುಕಲ್ಕರ್ ಕಾರಣ ಎನ್ನಲಾಗ್ತಿದೆ.

    MORE
    GALLERIES

  • 48

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ಪ್ರೀತಮ್ ಜುಕಾಲ್ಕರ್, ಸಮಂತಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿದೆ ಎನ್ನಲಾಗ್ತಿದ್ದು, ಈ ಬಗ್ಗೆ ಅನೇಕ ಬಾರಿ ಸ್ಯಾಮ್ ಟ್ರೋಲ್​ಗೆ ಒಳಗಾಗಿದ್ದಾರೆ. ಈತನೇ ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗಿದೆ. ಈತನಿಗೆ ನಾಗ ಚೈತನ್ಯ ಅಭಿಮಾನಿಗಳಿಂದ ಕೊಲೆ ಬೆದರಿಕೆ ಕೂಡ ಬಂದಿತ್ತಂತೆ. ಆದರೆ, ಬಳಿಕ ಪ್ರೀತಮ್ ಜುಕಾಲ್ಕರ್ ಮೊದಲ ಬಾರಿಗೆ ಮೌನ ಮುರಿದು ಸಮಂತಾ ಜೊತೆಗಿನ ಸಂಬಂಧದ ಬಗ್ಗೆ ಜನರಿಗೆ ತಿಳಿಸಿದ್ದರು.

    MORE
    GALLERIES

  • 58

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ಈ ಬಗ್ಗೆ ಮಾತಾಡಿದ ಸ್ಟೈಲಿಸ್ಟ್ ಜುಕಾಲ್ಕರ್, 'ನಾನು ಸಮಂತಾ ಅವರನ್ನು 'ಜಿಜಿ' ಎಂದು ಕರೆಯುವುದು ಎಲ್ಲರಿಗೂ ತಿಳಿದಿದೆ. ಇದು ಉತ್ತರ ಭಾರತದಲ್ಲಿ ಜಿಜಿ ಅಂದ್ರೆ ಸಹೋದರಿ ಎಂದರ್ಥ. ನಮ್ಮ ನಡುವೆ ಲಿಂಕ್-ಅಪ್ ಹೇಗೆ ಸಾಧ್ಯ? ಆ ವೇಳೆ ನಾಗ ಚೈತನ್ಯ ಅವರ ಮೌನದ ಬಗ್ಗೆ ಕೂಡ ಜುಕಾಲ್ಕರ್ ಮಾತಾಡಿದ್ದರು.

    MORE
    GALLERIES

  • 68

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ಚೈತನ್ಯ ಅವರನ್ನು ನಾನು ಹಲವು ವರ್ಷಗಳಿಂದ ಬಲ್ಲೆ. ಸಮಂತಾ ಮತ್ತು ನನ್ನ ನಡುವಿನ ಸಂಬಂಧ ಅವರಿಗೂ ಗೊತ್ತು. ಅವರು ಕೂಡ ಈ ಬಗ್ಗೆ ಮಾತನಾಡಬಹುದಿತ್ತು. ಸ್ಯಾಮ್ ಬಗ್ಗೆ ಇಂತಹ ಕಾಮೆಂಟ್​ಗಳನ್ನು ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಇಂತಹ ಹೇಳಿಕೆ ನೀಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಚೈತನ್ಯ ಅವರೇ ಪ್ರತಿಕ್ರಿಯಿಸಬೇಕಿದೆ. ಈ ಜನರನ್ನು ಹಿಡಿತದಲ್ಲಿಡಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

    MORE
    GALLERIES

  • 78

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ಇದೇ ವೇಳೆ ಸಮಂತಾ ಪೋಸ್ಟಿಂಗ್ ಮೂಲಕ ಪ್ರತಿಕ್ರಿಯಿಸಿದ್ದರು. ವಿಚ್ಛೇದನ ಬಹಳ ನೋವುಂಟು ಮಾಡುತ್ತದೆ. ನನಗೆ ಚೇತರಿಸಿಕೊಳ್ಳಲು ಸಮಯ ಬೇಕು ನನ್ನನ್ನು ಬಿಟ್ಟುಬಿಡಿ ಎಂದು ಹಿಂದೆ ಸಮಂತಾ ಬರೆದುಕೊಂಡಿದ್ರು.

    MORE
    GALLERIES

  • 88

    Tollywood: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಈ ವ್ಯಕ್ತಿಯೇ ಕಾರಣನಾ? ಸ್ಯಾಮ್ ಆಪ್ತ ಸ್ನೇಹಿತ ಹೇಳಿದ್ದೇನು?

    ಜುಕಾಲ್ಕರ್ ಭಾರತದ ಪ್ರಮುಖ ಫ್ಯಾಷನ್ ಡಿಸೈನರ್ಗಳಲ್ಲಿ ಒಬ್ಬರು, ಸಮಂತಾ ಅವರ ಸ್ಟೈಲಿಸ್ಟ್ ಮಾತ್ರವಲ್ಲ, ತ್ರಿಶಾ, ರಾಕುಲ್ ಪ್ರೀತ್ ಸಿಂಗ್, ಕೀರ್ತಿ ಸುರೇಶ್, ಕಲ್ಯಾಣಿ ಪ್ರಿಯದರ್ಶನ್ ಮತ್ತು ನಟ ರಾಣಾ ದಗ್ಗುಬಾಟಿ ಸೇರಿದಂತೆ ಅನೇಕ ನಟ- ನಟಿಯರ ಜೊತೆ ಕೆಲಸ ಮಾಡಿದ್ದಾರೆ.

    MORE
    GALLERIES