ಜನಪ್ರಿಯ ಗಾಯಕಿ ರಕ್ಷಿತಾ ಸುರೇಶ್ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಮಲೇಷ್ಯಾದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಗಾಯಕಿ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅದೃಷ್ಟವಶಾತ್ ಗಾಯಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲೇಷ್ಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಗಾಯಕಿ ಪಾರಾಗಿದ್ದಾರೆ. ಮಲೇಷ್ಯಾದಿಂದ ಭಾರತಕ್ಕೆ ವಾಪಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
2/ 7
ಸೋಶಿಯಲ್ ಮೀಡಿಯಾದಲ್ಲಿ ಅಪಘಾತದ ಬಗ್ಗೆ ನಟಿ ರಕ್ಷಿತಾ ಸುರೇಶ್ ಬರೆದುಕೊಂಡಿದ್ದಾರೆ. ಇಂದು ನನಗೆ ದೊಡ್ಡ ಅಪಘಾತ ಸಂಭವಿಸಿತ್ತು. ನಾನು ಪ್ರಯಾಣಿಸುತ್ತಿದ್ದ ಕಾರು ಅತಿವೇಗದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆಯಿತು ಎಂದು ಬರೆದಿದ್ದಾರೆ.
3/ 7
ಮಲೇಷ್ಯಾದ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕ್ಷಣಗಳಲ್ಲಿ ನನ್ನ ಇಡೀ ಜೀವನವು ನನ್ನ ಕಣ್ಣುಗಳ ಮುಂದೆ ಬಂದ ಹಾಗೇ ಆಗಿದೆ. ಏರ್ ಬ್ಯಾಗ್ಗಳು ನಮ್ಮನ್ನು ಉಳಿಸಿದವು. ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ.
4/ 7
ಈ ಅಪಘಾತದಿಂದ ನಾನು ಇನ್ನೂ ಚೇತರಿಸಿಕೊಂಡಿಲ್ಲ. ಇನ್ನೂ ಭಯದಲ್ಲೇ ಇದ್ದೇನೆ. ಚಾಲಕನೊಂದಿಗೆ ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿ ಪಾರಾಗಿದ್ದಾರೆ.
5/ 7
ಇಂದು ನಾನು ಬದುಕಿರುವುದೇ ನನ್ನ ಅದೃಷ್ಟ ಎಂದು ಗಾಯಕಿ ರಕ್ಷಿತಾ ಸುರೇಶ್ ಸೋಶಿಯಲ್ ಮೀಡಯಾದಲ್ಲಿ ಹಂಚಿಕೊಂಡಿದ್ದಾರೆ.
6/ 7
ರಕ್ಷಿತಾ ಸುರೇಶ್ 2015 ರಲ್ಲಿ ಬಿಡುಗಡೆಯಾದ 'ಎವಡೆ ಸುಬ್ರಮಣ್ಯಂ' ಚಿತ್ರದ ಮೂಲಕ ಗಾಯಕಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ‘ಚಳ್ಳಗಲಿ ತಾಖೈನು ಮೇಘವೇತಾ’ ಹಾಡನ್ನು ಹಾಡಿದ್ದಾರೆ.
7/ 7
ಇತ್ತೀಚೆಗಷ್ಟೇ ರಿಲೀಸ್ ಆದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಾಗೂ ಗಾಡ್ ಫಾದರ್ ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದರು. ತೆಲುಗು ಅಲ್ಲದೆ, ರಕ್ಷಿತಾ ಸುರೇಶ್ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿಯೂ ಅನೇಕ ಹಾಡುಗಳನ್ನು ಹಾಡಿದ್ದಾರೆ.
ಮಲೇಷ್ಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ತೀವ್ರವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಗಾಯಕಿ ಪಾರಾಗಿದ್ದಾರೆ. ಮಲೇಷ್ಯಾದಿಂದ ಭಾರತಕ್ಕೆ ವಾಪಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಪಘಾತದ ಬಗ್ಗೆ ನಟಿ ರಕ್ಷಿತಾ ಸುರೇಶ್ ಬರೆದುಕೊಂಡಿದ್ದಾರೆ. ಇಂದು ನನಗೆ ದೊಡ್ಡ ಅಪಘಾತ ಸಂಭವಿಸಿತ್ತು. ನಾನು ಪ್ರಯಾಣಿಸುತ್ತಿದ್ದ ಕಾರು ಅತಿವೇಗದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆಯಿತು ಎಂದು ಬರೆದಿದ್ದಾರೆ.
ಮಲೇಷ್ಯಾದ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಕ್ಷಣಗಳಲ್ಲಿ ನನ್ನ ಇಡೀ ಜೀವನವು ನನ್ನ ಕಣ್ಣುಗಳ ಮುಂದೆ ಬಂದ ಹಾಗೇ ಆಗಿದೆ. ಏರ್ ಬ್ಯಾಗ್ಗಳು ನಮ್ಮನ್ನು ಉಳಿಸಿದವು. ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ.
ಈ ಅಪಘಾತದಿಂದ ನಾನು ಇನ್ನೂ ಚೇತರಿಸಿಕೊಂಡಿಲ್ಲ. ಇನ್ನೂ ಭಯದಲ್ಲೇ ಇದ್ದೇನೆ. ಚಾಲಕನೊಂದಿಗೆ ಕಾರಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ರಕ್ಷಿತಾ ಸುರೇಶ್ 2015 ರಲ್ಲಿ ಬಿಡುಗಡೆಯಾದ 'ಎವಡೆ ಸುಬ್ರಮಣ್ಯಂ' ಚಿತ್ರದ ಮೂಲಕ ಗಾಯಕಿಯಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿ ‘ಚಳ್ಳಗಲಿ ತಾಖೈನು ಮೇಘವೇತಾ’ ಹಾಡನ್ನು ಹಾಡಿದ್ದಾರೆ.
ಇತ್ತೀಚೆಗಷ್ಟೇ ರಿಲೀಸ್ ಆದ ಪೊನ್ನಿಯನ್ ಸೆಲ್ವನ್ 2 ಸಿನಿಮಾ ಹಾಗೂ ಗಾಡ್ ಫಾದರ್ ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದರು. ತೆಲುಗು ಅಲ್ಲದೆ, ರಕ್ಷಿತಾ ಸುರೇಶ್ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿಯೂ ಅನೇಕ ಹಾಡುಗಳನ್ನು ಹಾಡಿದ್ದಾರೆ.