Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
Chaitanya Death: ಕಾರ್ಯಕ್ರಮದ ನೃತ್ಯ ಸಂಯೋಜಕ ಚೈತನ್ಯ ಮಾಸ್ಟರ್ ಸಾವನ್ನಪ್ಪಿದ್ದು, ನಾಯಕಿ ಶ್ರದ್ಧಾ ದಾಸ್ ಭಾವುಕರಾಗಿದ್ದಾರೆ. ನನ್ನನ್ನು ಸದಾ ನಗಿಸುವ ನೀನು ಇಂದು ನನ್ನನ್ನು ಅಳುವಂತೆ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಹಾಕಿದ್ದಾರೆ.
ತೆಲುಗಿ ಜನಪ್ರಿಯ ಢೀ ಶೋ ಕೊರಿಯೋಗ್ರಾಫರ್ ಆಗಿದ್ದ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುತೆರೆ ಇಂಡಸ್ಟ್ರಿಯಲ್ಲಿ ದೊಡ್ಡ ದುರಂತ ಸಂಭವಿಸಿದೆ. ಚೈತನ್ಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಚಲನಚಿತ್ರ ನಟರು ಮತ್ತು ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.
2/ 7
ಸಾಲದ ಬಾಧೆ ತಾಳಲಾರದೆ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಭಾವುಕರಾದರು. ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಂದೆ-ತಾಯಿ, ಡ್ಯಾನ್ಸ್ ಮಾಸ್ಟರ್ಸ್ ಹಾಗೂ ಡ್ಯಾನ್ಸರ್ ಗಳ ಬಳಿ ಕ್ಷಮೆ ಯಾಚಿಸಿ ಬಾರದ ಲೋಕಕ್ಕೆ ಹೋದರು.
3/ 7
ಚೈತನ್ಯ ಸಾವಿನ ಕುರಿತು ಪ್ರತಿಕ್ರಿಯಿಸಿರುವ ನಾಯಕಿ ಶ್ರದ್ಧಾ ದಾಸ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾಗಿರುವ ಶ್ರದ್ಧಾ ದಾಸ್ ಅವರು ಚೈತನ್ಯ ಸಾವಿನ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಚೈತನ್ಯ ಅವರ ಸಾವಿನ ಸುದ್ದಿ ಕೇಳಿ ನನ್ನ ಹೃದಯ ಛಿದ್ರವಾಯಿತು ಎಂದಿದ್ದಾರೆ
4/ 7
ಚೈತನ್ಯ ಮಾಸ್ಟರ್ ಒಳ್ಳೆ ಹೃದಯವಂತ ಎಂದು ಶ್ರದ್ಧಾ ದಾಸ್ ಹೇಳಿದ್ದಾರೆ. ಅವರು ಯಾವಾಗಲೂ ನಗುನಗುತ್ತಾ ಇದ್ದು, ಸುತ್ತಮುತ್ತಲಿನವರನ್ನೆಲ್ಲಾ ನಗಿಸುತ್ತಿದ್ದರು. ಆದರೆ ಇಂದು ನೀವು ನಮ್ಮನ್ನು ತುಂಬಾ ಅಳಿಸುತ್ತಿದ್ದೀರಿ. ನಿಮ್ಮ ನಗುವನ್ನು ಎಂದಿಗೂ ಮರೆಯುವುದಿಲ್ಲ ಎಂದು ಶ್ರದ್ಧಾ ದಾಸ್ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
5/ 7
ಚೈತನ್ಯ ಅವರು ಪೋಸ್ಟ್ ಮಾಡಿದ ಕೊನೆಯ ವೀಡಿಯೊದಲ್ಲಿ ಅನೇಕ ವಿಚಾರ ತಿಳಿಸಿದ್ದಾರೆ. ಆದರೆ ಜಬರ್ದಸ್ತ್ನಂತಹ ಶೋನಲ್ಲಿ ಗಳಿಕೆಯೇ ಹೆಚ್ಚು. ಆದರೆ, ನಾವು ಕಷ್ಟಪಟ್ಟು ಧಿಡೀರನೆ ಎದ್ದು ನಿಂತಿದ್ದೇವೆ, ಆದರೆ ಮನೆ, ಟಿವಿಗಳನ್ನು ಖರೀದಿಸಲು ಸಾಧ್ಯವಾಗಿಲ್ಲ ಎಂದರು.
6/ 7
ಚೈತನ್ಯ ನೆಲ್ಲೂರು ಕ್ಲಬ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.
7/ 7
ಢೀ ನಂತಹ ಜನಪ್ರಿಯ ನೃತ್ಯ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದ್ದ ಚೈತನ್ಯ ಮಾಸ್ಟರ್ ಸಾವಿಗೆ ಆರ್ಥಿಕ ಸಂಕಷ್ಟವೇ ಮುಖ್ಯ ಕಾರಣವಂತೆ. ಪಡೆದ ಸಾಲ ತೀರಿಸಲಾಗದೆ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
First published:
17
Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
ತೆಲುಗಿ ಜನಪ್ರಿಯ ಢೀ ಶೋ ಕೊರಿಯೋಗ್ರಾಫರ್ ಆಗಿದ್ದ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರುತೆರೆ ಇಂಡಸ್ಟ್ರಿಯಲ್ಲಿ ದೊಡ್ಡ ದುರಂತ ಸಂಭವಿಸಿದೆ. ಚೈತನ್ಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಚಲನಚಿತ್ರ ನಟರು ಮತ್ತು ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.
Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
ಸಾಲದ ಬಾಧೆ ತಾಳಲಾರದೆ ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಭಾವುಕರಾದರು. ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಂದೆ-ತಾಯಿ, ಡ್ಯಾನ್ಸ್ ಮಾಸ್ಟರ್ಸ್ ಹಾಗೂ ಡ್ಯಾನ್ಸರ್ ಗಳ ಬಳಿ ಕ್ಷಮೆ ಯಾಚಿಸಿ ಬಾರದ ಲೋಕಕ್ಕೆ ಹೋದರು.
Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
ಚೈತನ್ಯ ಸಾವಿನ ಕುರಿತು ಪ್ರತಿಕ್ರಿಯಿಸಿರುವ ನಾಯಕಿ ಶ್ರದ್ಧಾ ದಾಸ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾಗಿರುವ ಶ್ರದ್ಧಾ ದಾಸ್ ಅವರು ಚೈತನ್ಯ ಸಾವಿನ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಚೈತನ್ಯ ಅವರ ಸಾವಿನ ಸುದ್ದಿ ಕೇಳಿ ನನ್ನ ಹೃದಯ ಛಿದ್ರವಾಯಿತು ಎಂದಿದ್ದಾರೆ
Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
ಚೈತನ್ಯ ಮಾಸ್ಟರ್ ಒಳ್ಳೆ ಹೃದಯವಂತ ಎಂದು ಶ್ರದ್ಧಾ ದಾಸ್ ಹೇಳಿದ್ದಾರೆ. ಅವರು ಯಾವಾಗಲೂ ನಗುನಗುತ್ತಾ ಇದ್ದು, ಸುತ್ತಮುತ್ತಲಿನವರನ್ನೆಲ್ಲಾ ನಗಿಸುತ್ತಿದ್ದರು. ಆದರೆ ಇಂದು ನೀವು ನಮ್ಮನ್ನು ತುಂಬಾ ಅಳಿಸುತ್ತಿದ್ದೀರಿ. ನಿಮ್ಮ ನಗುವನ್ನು ಎಂದಿಗೂ ಮರೆಯುವುದಿಲ್ಲ ಎಂದು ಶ್ರದ್ಧಾ ದಾಸ್ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
ಚೈತನ್ಯ ಅವರು ಪೋಸ್ಟ್ ಮಾಡಿದ ಕೊನೆಯ ವೀಡಿಯೊದಲ್ಲಿ ಅನೇಕ ವಿಚಾರ ತಿಳಿಸಿದ್ದಾರೆ. ಆದರೆ ಜಬರ್ದಸ್ತ್ನಂತಹ ಶೋನಲ್ಲಿ ಗಳಿಕೆಯೇ ಹೆಚ್ಚು. ಆದರೆ, ನಾವು ಕಷ್ಟಪಟ್ಟು ಧಿಡೀರನೆ ಎದ್ದು ನಿಂತಿದ್ದೇವೆ, ಆದರೆ ಮನೆ, ಟಿವಿಗಳನ್ನು ಖರೀದಿಸಲು ಸಾಧ್ಯವಾಗಿಲ್ಲ ಎಂದರು.
Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
ಚೈತನ್ಯ ನೆಲ್ಲೂರು ಕ್ಲಬ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೈತನ್ಯ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.
Shraddha Das: ಟಿವಿ ಶೋ ಡ್ಯಾನ್ಸ್ ಮಾಸ್ಟರ್ ಚೈತನ್ಯ ಆತ್ಮಹತ್ಯೆಗೆ ಶರಣು, ನಟಿ ಕಣ್ಣೀರು
ಢೀ ನಂತಹ ಜನಪ್ರಿಯ ನೃತ್ಯ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದ್ದ ಚೈತನ್ಯ ಮಾಸ್ಟರ್ ಸಾವಿಗೆ ಆರ್ಥಿಕ ಸಂಕಷ್ಟವೇ ಮುಖ್ಯ ಕಾರಣವಂತೆ. ಪಡೆದ ಸಾಲ ತೀರಿಸಲಾಗದೆ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.