Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

ಕರ್ನಾಟಕ ಸುಗಮ ಸಂಗೀತದ ಪ್ರಸಿದ್ದ ಗಾಯಕರಾಗಿದ್ದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿವಮೊಗ್ಗ ಸುಬ್ಬಣ್ಣ ಹೃದಯಾಘಾತದಿಂದ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ. ಅವರನ್ನು ನೆನೆಯುತ್ತಾ, ಅವರದ್ದೇ 10 ಹಾಡುಗಳ ಮೇಲೆ ಒಂದು ಇಣುಕು ನೋಟ...

First published:

  • 110

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಕನ್ನಡ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಾಗಿದ್ದ ಜಿ. ಸುಬ್ರಹ್ಮಣ್ಯ ಅವರ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಪ್ರಖ್ಯಾತಿ ಪಡೆದಿತ್ತು. 1979ರಲ್ಲಿ 'ಕಾಡು ಕುದುರೆ' ಚಲನಚಿತ್ರಕ್ಕೆ ಕಾಡು ಕುದುರೆ ಓಡಿ ಬಂದಿತ್ತಾ ಹಾಡನ್ನು ಸುಬ್ಬಣ್ಣ ಹಾಡಿದ್ದರು. ಅವರ ಹಿನ್ನೆಲೆ ಗಾಯನಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. (ಫೋಟೋ ಕೃಪೆ: ಬಿಸ್‍ಕಾಟ್ ಟಿವಿ)

    MORE
    GALLERIES

  • 210

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಕುವೆಂಪು ಅವರ ಕನ್ನಡ ಭಾವಗೀತೆ ಆನಂದಮಯ ಈ ಜಗ ಹೃದಯ ಹಾಡನ್ನು ಶಿವಮೊಗ್ಗ ಸುಬ್ಬಣ್ಣನವರು ಹಾಡಿದ್ದಾರೆ. ಅವರ ಗಾಯನದಲ್ಲಿ ಮೂಡಿ ಬಂದ ಈ ಹಾಡು ತುಂಬಾ ಜನಪ್ರಿಯತೆಯನ್ನು ಹೊಂದಿದೆ. (ಫೋಟೋ ಕೃಪೆ: MRT ಮ್ಯೂಸಿಕ್)

    MORE
    GALLERIES

  • 310

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ ಪ್ರಸಿದ್ಧ ಭಾವಗೀತೆಯಲ್ಲಿ 'ಚಿಂತೆ ಏತಕೆ ಗೆಳತಿ' ಸಹ ಒಂದು. ಎನ್.ಎಸ್ ಲಕ್ಷ್ಮಿನಾರಾಯಣ ಭಟ್ಟ ರಚನೆಯ ಹಾಡಿಗೆ ಚಂದ್ರಶೇಖರ ಕಂಬಾರ ಸಂಗೀತವಿದ್ದು, ಶಿವಮೊಗ್ಗ ಸುಬ್ಬಣ್ಣನವರು ಸೊಗಸಾಗಿ ಹಾಡಿದ್ದಾರೆ. (ಫೋಟೋ ಕೃಪೆ: ಲಿರಿಕಲ್ ವಿಡಿಯೋ)

    MORE
    GALLERIES

  • 410

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    'ಮೊದಲು ಮಾನವನಾಗು' ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ ಸುಪ್ರಸಿದ್ಧ ಭಾವಗೀತೆ. ಸಿದ್ದಯ್ಯ ಪುರಾಣಿಕ್ ಸಾಹಿತ್ಯವಿದ್ದು, ಬಾಳಪ್ಪ ಹುಕ್ಕೇರಿ ಸಂಗೀತಕ್ಕೆ, ಶಿವಮೊಗ್ಗ ಸುಬ್ಬಣ್ಣ ಅದ್ಭುತವಾಗಿ ಹಾಡಿದ್ದಾರೆ. (ಫೋಟೋ ಕೃಪೆ: ಲಿರಿಕಲ್ ವಿಡಿಯೋ)

    MORE
    GALLERIES

  • 510

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಸಂತ ಶಿಶುನಾಳ ಶರೀಪ ಚಲನಚಿತ್ರದ 'ಅಳಬೇಡ ತಂಗಿ' ಹಾಡನ್ನು ಶಿವಮೊಗ್ಗ ಸುಬ್ಬಣ್ಣ ಅವರು ಹಾಡಿದ್ದಾರೆ. ಸಂತ ಶಿಶುನಾಳ ಶರೀಪ ಸಾಹಿತ್ಯವಿದ್ದು, ಸಿ. ಅಶ್ವತ್ಥ್ ಅವರ ಸಂಗೀತವಿರುವ ಹಾಡಿಗೆ, ಶಿವಮೊಗ್ಗ ಸುಬ್ಬಣ್ಣ ಹಾಡು ಮೋಡಿ ಮಾಡಿದೆ.

    MORE
    GALLERIES

  • 610

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಜಾತ್ರೆ ಜಾನಪದ ಗೀತೆಗಳಲ್ಲಿ 'ಬಿಂದಿಗೆ ಹೊತ್ತು' ಹಾಡನ್ನು ಶಿವಮೊಗ್ಗ ಸುಬ್ಬಣ್ಣನವರು ಹಾಡಿದ್ದಾರೆ. ಬಿ.ವಿ ಶ್ರೀನಿವಾಸ್ ಅವರ ಸಂಗೀತಕ್ಕೆ ಸುಬ್ಬಣ್ಣನವರು ಸೊಗಸಾಗಿ ಹಾಡಿದ್ದಾರೆ. (ಫೋಟೋ ಕೃಪೆ: ಎಲ್ ಮ್ಯೂಸಿಕ್)

    MORE
    GALLERIES

  • 710

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    'ಮಾನವನೆದೆಯಲಿ' ಭಾವಗೀತೆಯನ್ನು ಶಿವಮೊಗ್ಗ ಸುಬ್ಬಣ್ಣ ಅವರು ಹಾಡಿದ್ದಾರೆ. ಎನ್.ಎಸ್ ಲಕ್ಷ್ಮಿನಾರಾಯಣ ಭಟ್ಟ ಅವರ ಸಾಹಿತ್ಯ, ಗರ್ತಿಕೆರೆ ಅವರ ಸಂಗೀತಕ್ಕೆ, ಸುಬ್ಬಣ್ಣನವರು ಹಾಡಿದ್ದಾರೆ. (ಫೋಟೋ ಕೃಪೆ: ಲಿರಿಕಲ್ ವಿಡಿಯೋ

    MORE
    GALLERIES

  • 810

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಜಾತ್ರೆ ಜಾನಪದ ಗೀತೆಗಳಲ್ಲಿ 'ಕೋಲು ಮಲ್ಲಿಗೆ' ಹಾಡನ್ನು ಶಿವಮೊಗ್ಗ ಸುಬ್ಬಣ್ಣನವರು ಹಾಡಿದ್ದಾರೆ. ಬಿ.ವಿ ಶ್ರೀನಿವಾಸ್ ಅವರ ಸಂಗೀತಕ್ಕೆ ಸುಬ್ಬಣ್ಣನವರು ಅದ್ಭುತವಾಗಿ ಹಾಡಿದ್ದಾರೆ. (ಪೋಟೋ ಕೃಪೆ: ಎಎಲ್ ಲಹರಿ ಮ್ಯೂಸಿಕ್)

    MORE
    GALLERIES

  • 910

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ ಜನಪ್ರಿಯ ಭಾವಗೀತೆಗಳಲ್ಲಿ 'ಒಮ್ಮೆ ಹೂದೋಟದಲ್ಲಿ' ಸಹ ಒಂದು. ಭಾವಗಂಧರ್ವರು ಮಾಲಿಕೆ ಯಲ್ಲಿ ಮೂಡಿ ಬಂದಿರು ಹಾಡುಗಳು. (ಫೋಟೋ ಕೃಪೆ: ಎಎಲ್ ಲಹರಿ ಮ್ಯೂಸಿಕ್)

    MORE
    GALLERIES

  • 1010

    Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ ಸುಪ್ರಸಿದ್ಧ ಭಾವಗೀತೆಗಳಲ್ಲಿ 'ಹಾಕಿದ ಜನಿವಾರವ' ಸಹ ಒಂದು. ಸುಬ್ಬಣ್ಣ ಅವರು ಹಾಡಿದ ಎಲ್ಲಾ ಭಾವಗೀತೆಗಳು ಜನ ಪ್ರಿಯವಾಗಿವೆ. (ಫೋಟೋ ಕೃಪೆ: ಎಎಲ್ ಲಹರಿ ಮ್ಯೂಸಿಕ್)

    MORE
    GALLERIES