ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

First published:

  • 110

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಯುವರತ್ನ ಚಿತ್ರ ಒಂದಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿದೆ.

    MORE
    GALLERIES

  • 210

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಇದಕ್ಕೆ ಒಂದು ಕಾರಣ ಈ ಜೋಡಿ ರಾಜಕುಮಾರ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಎಬ್ಬಿಸಿದ ಅಲೆ. ಅಪ್ಪು ಕೆರಿಯರ್​ನಲ್ಲೇ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಸಂತೋಷ್ ಆನಂದ್​ರಾಮ್ ಇದೀಗ ಅದನ್ನು ಮೀರಿಸುವ ಚಿತ್ರದ ತಯಾರಿಕೆಯಲ್ಲಿದ್ದಾರೆ.

    MORE
    GALLERIES

  • 310

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಈಗಾಗಲೇ ಟೀಸರ್, ಡೈಲಾಗ್ ಟೀಸರ್​ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ಯುವರತ್ನ ಚಿತ್ರದ ಮೇಲೆ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಇದೆ.

    MORE
    GALLERIES

  • 410

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಒಂದೆಡೆ ಪವರ್ ಸ್ಟಾರ್ ನಿಂತರೆ, ರಾಜರತ್ನನಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಡಾಲಿ ಧನಂಜಯ್ ಇದ್ದಾರೆ. ಇವರೊಂದಿಗೆ ಯುವನಟ ಅರು ಗೌಡ, ಖ್ಯಾತ ನಟ ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗವೇ ಯುವರತ್ನದಲ್ಲಿದೆ.

    MORE
    GALLERIES

  • 510

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಹೀಗಾಗಿಯೇ ಅಭಿಮಾನಿಗಳಲ್ಲಿ ಅಪ್ಪುವಿನ ಹೊಸ ಅವತಾರದ ಬಗ್ಗೆ ಭಾರೀ ಕೂತುಹಲವಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು ಯುವರತ್ನ ಚಿತ್ರದ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ.

    MORE
    GALLERIES

  • 610

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಹೌದು, ನಿರ್ದೇಶಕ ಸಂತೋಷ್ ಆನಂದ್​ ರಾಮ್ ಅವರ ಟ್ವಿಟರ್ ಖಾತೆ ಪೋಸ್ಟ್​ನ ನಕಲಿಯನ್ನು ಸೃಷ್ಟಿಸಿರುವ ಕಿಡಿಗೇಡಿಗಳು, ಯುವರತ್ನ ಚಿತ್ರವು ಮೇ 21 ರಂದು ತೆರೆ ಕಾಣಲಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ.

    MORE
    GALLERIES

  • 710

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಈ ಫೋಟೋ ಭಾರೀ ವೈರಲ್ ಆಗಿದ್ದು, ಕೊನೆಗೂ ಯುವರತ್ನ ನಿರ್ದೇಶಕ ಸಂತೋಷ್ ಆನಂದ್​ ರಾಮ್ ಅವರ ಕಣ್ಣಿಗೂ ಬಿದ್ದಿದೆ. ಕೂಡಲೇ ಎಚ್ಚೆತ್ತ ನಿರ್ದೇಶಕರು ಸುಳ್ಳು ಸುದ್ದಿಯ ಫೋಟೋದೊಂದಿಗೆ ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES

  • 810

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    'ಇದು ತಪ್ಪು ಮಾಹಿತಿ. ಇನ್ನೂ 2 ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪಕ್ಕಾ ಮುಗಿದ ಮೇಲೆ ರಿಲೀಸ್‌ ದಿನಾಂಕವನ್ನು ಹೊಂಬಾಳೆ ಫಿಲಂಸ್ ತಿಳಿಸುತ್ತದೆ! ಯುವರತ್ನ ಬಿಗ್ಗೆಸ್ಟ್ ರಿಲೀಸ್ ಆಗಲಿದ್ದು ಪಬ್ಲಿಸಿಟಿ, ಆಡಿಯೋ-ಟ್ರೈಲರ್ ರಿಲೀಸ್ ಎಲ್ಲದಕ್ಕೂ ದೂಡ್ಡ ಪ್ಲಾನ್ಸ್ ಇರುವುದರಿಂದ ದಿನಾಂಕ ನಿಗದಿಯಾಗಿಲ್ಲ' ಎಂದು ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.

    MORE
    GALLERIES

  • 910

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಒಟ್ಟಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಕೇವಲ ವಿಡಿಯೋ ಮೂಲಕವೇ ಹವಾ ಸೃಷ್ಟಿಸಿರುವ ಯುವರತ್ನ ಚಿತ್ರದ ಮೇಲಿನ ಕಾತುರತೆಯನ್ನೇ ಕಿಡಿಗೇಡಿಗಳು ಬಂಡವಾಳ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.

    MORE
    GALLERIES

  • 1010

    ಅಪ್ಪು ಅಭಿಮಾನಿಗಳೇ ಎಚ್ಚರ: 'ಯುವರತ್ನ' ಚಿತ್ರದ ಬಗ್ಗೆ ಹೀಗೊಂದು ಸುಳ್ಳು ಸುದ್ದಿ..!

    ಈ ಬಗ್ಗೆ ಅಪ್ಪು ಅಭಿಮಾನಿಗಳೇ ಎಚ್ಚರವಹಿಸಬೇಕಾಗಿದ್ದು, ಇಂತಹ ಪೋಸ್ಟ್​ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಿಪೋರ್ಟ್ ಮಾಡುವಂತೆ ಚಿತ್ರತಂಡ ಕೇಳಿಕೊಂಡಿದೆ.

    MORE
    GALLERIES