ಗೌಳಿ ಚಿತ್ರದ ಮೂಲಕ ನಟ ಶ್ರೀನಗರ ಕಿಟ್ಟಿ ಎಲ್ಲೆಡೆ ಮಿಂಚುತ್ತಿದ್ದಾರೆ. ಗೌಳಿ ಪಾತ್ರದಲ್ಲಿ ಅಷ್ಟೊಂದು ತಲ್ಲೀನತೆಯಿಂದಲೇ ಅಭಿನಯಿಸಿದ್ದಾರೆ. ನೈಜ ಕಥೆಯ ಚಿತ್ರಣ ಹಾಗಾಗಿಯೇ ನಿಮ್ಮ ಎದೆಯಲ್ಲಿ ಉಳಿದು ಬಿಡುತ್ತದೆ.
2/ 8
ಜೀ ಕನ್ನಡದಲ್ಲಿ ನಡೆದ ಕರುನಾಡ ಸಂಭ್ರಮದಲ್ಲಿ ನಟ ಶ್ರೀನಗರ ಕಿಟ್ಟಿ ಭಾಗಿಯಾಗಿದ್ದಾರೆ. ಶ್ರೀನಗರ ಕಿಟ್ಟಿಗೆ ಸರ್ಪ್ರೈಸ್ ಕೊಡಲು ಮಗಳು ಪರಿಣಿತರನ್ನು ಕರೆಸಲಾಗಿತ್ತು.
3/ 8
ಮಗಳನ್ನು ನೋಡಿ ಶ್ರೀನಗರ ಕಿಟ್ಟಿ ಭಾವುಕರಾಗಿದ್ದಾರೆ. ಮಗಳ ಬಗ್ಗೆ ಏನಾದ್ರೂ ಹೇಳಿ ಎಂದು ಕೇಳಿದಾಗ, ಅದು ಹೇಳೋದು ಕಷ್ಟ. ನನಗೆ ಎಲ್ಲಾ ಅವಳೇ ಎಂದು ಭಾವುಕರಾಗಿದ್ದಾರೆ.
4/ 8
ಅಪ್ಪ ನನಗೆ ಗಡ್ಡ ಬಿಟ್ರೆ ಇಷ್ಟ ಎಂದು. ನನಗೆ ಹೆಚ್ಚು ಸಮಯ ಕೊಡ್ತಾರೆ. ನನ್ನ ಜೊತೆ ಆಟವಾಡ್ತಾರೆ ಎಂದು ಶ್ರಿನಗರ ಕಿಟ್ಟಿ ಅವರ ಮಗಳು ಪರಿಣಿತ ಹೇಳಿದ್ದಾರೆ.
5/ 8
ಅಪ್ಪ ನಮ್ಮ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ಗೆ ಬರ್ತಾರೆ. ಯಾರಿಗೂ ಕಾಣಬಾರದು ಎಂದು ಮುಖ ಎಲ್ಲಾ ಮುಚ್ಚಿಕೊಂಡು ಬರುತ್ತಾರೆ. ಅಪ್ಪನ ಸಿಲಿಕಾನ್ ಸಿಟಿ ಫಿಲ್ಮ್ ನನಗೆ ಇಷ್ಟ ಎಂದು ಪರಿಣಿತ ಹೇಳಿದ್ದಾರೆ.
6/ 8
ಮನಸ್ಸಿಗೆ ತುಂಬಾ ಕಷ್ಟ ಅನಿಸೋ ದೃಶ್ಯಗಳು, ಅನ್ಯಾಯದ ವಿರುದ್ಧ ಬಂಡೇಳುವ ಗೌಳಿ, ಗೌಳಿಗೆ ಬುದ್ದಿ ಹೇಳೋ ಪಾತ್ರಗಳು, ಗೌಳಿಯ ಒಂದು ಪುಟ್ಟ ಸಂಸಾರ ಸಿನಿಮಾದಲ್ಲಿ ಎದ್ದು ಕಾಣುತ್ತಿದೆ.
7/ 8
ನಿಮ್ಮ ಆಶೀರ್ವಾದ ಎಲ್ಲಿಯವರೆಗೂ ಬಲವಾಗಿರುತ್ತೋ, ಎಷ್ಟು ಪ್ರೀತಿಯಿಂದ ನಮ್ಮನ್ನು ಆರೈಸುತ್ತೀರೋ, ನಮ್ಮ ಕಲಾ ಸೇವೆಗೆ ನೀವು ಕೊಡೋ ಚಪ್ಪಾಳೆ ಮುಖ್ಯ ಆಗುತ್ತೆ ಎಂದು ಅಭಿಮಾನಿಗಳಿಗೆ ಶ್ರೀನಗರ ಕಿಟ್ಟಿ ಹೇಳಿದ್ದಾರೆ.
8/ 8
ಡೈರೆಕ್ಟರ್ ಸೂರಾ ಅವರು ಸತ್ಯ ಘಟನೆಯನ್ನ ಆಧರಿಸಿಯೇ ಗೌಳಿ ಸಿನಿಮಾ ಮಾಡಿದ್ದಾರೆ. ಗ್ಲಾಮರಸ್ ನಟಿ ಪಾವನಾ ಕೂಡ ಇಲ್ಲಿ ಡಿ ಗ್ಲಾಮರ್ ರೋಲ್ನಲ್ಲಿಯೇ ಕಾಣಿಸಿಕೊಂಡಿದ್ದಾರೆ.
ಗೌಳಿ ಚಿತ್ರದ ಮೂಲಕ ನಟ ಶ್ರೀನಗರ ಕಿಟ್ಟಿ ಎಲ್ಲೆಡೆ ಮಿಂಚುತ್ತಿದ್ದಾರೆ. ಗೌಳಿ ಪಾತ್ರದಲ್ಲಿ ಅಷ್ಟೊಂದು ತಲ್ಲೀನತೆಯಿಂದಲೇ ಅಭಿನಯಿಸಿದ್ದಾರೆ. ನೈಜ ಕಥೆಯ ಚಿತ್ರಣ ಹಾಗಾಗಿಯೇ ನಿಮ್ಮ ಎದೆಯಲ್ಲಿ ಉಳಿದು ಬಿಡುತ್ತದೆ.
ಅಪ್ಪ ನಮ್ಮ ಪೇರೆಂಟ್ಸ್ ಟೀಚರ್ಸ್ ಮೀಟಿಂಗ್ ಗೆ ಬರ್ತಾರೆ. ಯಾರಿಗೂ ಕಾಣಬಾರದು ಎಂದು ಮುಖ ಎಲ್ಲಾ ಮುಚ್ಚಿಕೊಂಡು ಬರುತ್ತಾರೆ. ಅಪ್ಪನ ಸಿಲಿಕಾನ್ ಸಿಟಿ ಫಿಲ್ಮ್ ನನಗೆ ಇಷ್ಟ ಎಂದು ಪರಿಣಿತ ಹೇಳಿದ್ದಾರೆ.
ನಿಮ್ಮ ಆಶೀರ್ವಾದ ಎಲ್ಲಿಯವರೆಗೂ ಬಲವಾಗಿರುತ್ತೋ, ಎಷ್ಟು ಪ್ರೀತಿಯಿಂದ ನಮ್ಮನ್ನು ಆರೈಸುತ್ತೀರೋ, ನಮ್ಮ ಕಲಾ ಸೇವೆಗೆ ನೀವು ಕೊಡೋ ಚಪ್ಪಾಳೆ ಮುಖ್ಯ ಆಗುತ್ತೆ ಎಂದು ಅಭಿಮಾನಿಗಳಿಗೆ ಶ್ರೀನಗರ ಕಿಟ್ಟಿ ಹೇಳಿದ್ದಾರೆ.