ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

First published:

  • 19

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರ್ದು ಅಂತಾರೆ. ಆದರೂ ಕೆಲವರು ಸಣ್ಣ ಪುಟ್ಟ ಸಹಾಯಕ್ಕೇ ಇಂದು ದೊಡ್ಡ ದಾನಿಗಳಂತೆ ಪೋಸ್ ನೀಡುತ್ತಿದ್ದಾರೆ. ಆದರೆ ಇವರೆಲ್ಲರ ಮಧ್ಯೆ ಸ್ಯಾಂಡಲ್​ವುಡ್ ನಟರೊಬ್ಬರು ಪರೋಪಕಾರಂ ಪರಂ ಧರ್ಮ ಎಂಬಂತೆ ತಾವು ಮಾಡಿದ್ದು ತಮ್ಮಲ್ಲೇ ಇರಲಿ ಎಂಬಂತೆ ಕೈಲಾದ ಸೇವೆ ಮಾಡುತ್ತಿದ್ದಾರೆ.

    MORE
    GALLERIES

  • 29

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ಇವರ ಹೆಸರು ರಾಹುಲ್ ಐನಾಪುರ. ಎಲ್ಲೋ ಹೆಸರು ಕೇಳಿದ್ದೀನಿ ಅಂದ್ಕೊಂಡರೆ ಖಂಡಿತ ಹೌದು, ತ್ರಾಟಕ, ಗತ್ತು ಮುಂತಾದ ಚಿತ್ರಗಳಲ್ಲಿ ನಟಿಸಿ ಅಭಿನಯಕ್ಕೆ ಸೈ ಅಂದ ಪ್ರತಿಭಾವಂತ ನಟ.

    MORE
    GALLERIES

  • 39

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ರಾಜಕಾರಣಿ ಕುಟುಂಬದ ಹಿನ್ನೆಲೆಯಲ್ಲಿರುವ ರಾಹುಲ್ ಅವರು ಇದೀಗ ಕೊರೋನಾದಿಂದ ಸಂಕಷ್ಟಕ್ಕೀಡಾದ ಬಡವರ ಕಣ್ಣೀರು ಒರೆಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

    MORE
    GALLERIES

  • 49

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ತಮ್ಮ ಕಾರಿನಲ್ಲಿ ದಿನಸಿ ಇತ್ಯಾದಿ ದಿನೋಪಯೋಗಿ ವಸ್ತುಗಳನ್ನು ತುಂಬಿಕೊಂಡು ಓಡಾಡುವ ರಾಹುಲ್ ಅವರು, ಬಡವರನ್ನು ಕಂಡಾಗ ನಿಲ್ಲಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಆದರೆ ತಮ್ಮ ಈ ಸಮಾಜಮುಖಿ ಸೇವೆಯನ್ನು ನೇಮ್​-ಫೇಮ್ ಬೆಳೆಸಿಕೊಳ್ಳಲು ಅವರು ಬಳಸುತ್ತಿಲ್ಲ ಎಂಬುದು ವಿಶೇಷ.

    MORE
    GALLERIES

  • 59

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ತ್ರಾಟಕ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ರಾಹುಲ್ ಅವರು ಸದ್ಯ ಬಿಜಾಪುರದ ಐನಾಪುರದ ಸುತ್ತ ಮುತ್ತ ಅನೇಕರಿಗೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ. ಅಲ್ಲದೆ ಈಗಲೂ ತಮ್ಮ ಕಾರಿನಲ್ಲಿ ದಿನಸಿಯನ್ನು ತುಂಬಿಸಿಟ್ಟುಕೊಂಡಿದ್ದಾರೆ.

    MORE
    GALLERIES

  • 69

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಈಡಾಗಿರುವ ಯಾರೇ ಎದುರಿಗೆ ಸಿಕ್ಕರೂ ಅವರಿಗೆ ಆಹಾರ ಧಾನ್ಯಗಳನ್ನು ನೀಡಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಇನ್ನು ರಾಹುಲ್ ಅವರ ಕಾರ್ಯಕ್ಕೆ ಅವರ ತಾಯಿ ಕೂಡ ಬೆಂಬಲವಾಗಿ ನಿಂತಿದ್ದಾರೆ.

    MORE
    GALLERIES

  • 79

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ತಾಯಿ ವಸುಂಧರಾ ಅವರು ಕೂಡ ಸ್ಥಳೀಯ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ, ಆರೋಗ್ಯ ಅಧಿಕಾರಿಗಳ ಚಹಾ-ಆಹಾರಗಳನ್ನು ನೀಡುತ್ತಾ ಮಾನವೀಯ ಮುಖಕ್ಕೆ ಕನ್ನಡಿಯಾಗಿ ನಿಂತಿದ್ದಾರೆ.

    MORE
    GALLERIES

  • 89

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ಒಟ್ಟಿನಲ್ಲಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರ್ದು ಎಂಬುದನ್ನು ಪಾಲಿಸುತ್ತಿರುವ ಸ್ಯಾಂಡಲ್​ವುಡ್​ ನಟ ರಾಹುಲ್ ಐನಾಪುರ ಅವರ ಕಾರ್ಯಕ್ಕೆ ದೇವರು ಒಳ್ಳೆದು ಮಾಡಲಿ ಎಂದು ಆಶಿಸೋಣ.

    MORE
    GALLERIES

  • 99

    ತೆರೆಮರೆಯಲ್ಲೇ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುತ್ತಿರುವ ಸ್ಯಾಂಡಲ್​ವುಡ್ ನಟ..!

    ರಾಹುಲ್ ಅವರ ತಾಯಿ ವಸುಂಧರಾ

    MORE
    GALLERIES